ಸಹೋದರನಿಂದಲೆ ಐದು ವರ್ಷದ ಬಾಲಕಿ – ಹತ್ಯೆಗೈದಿರುವ ಶಂಕೆ.
ನಿಪನಾಳ ಮೇ.22

ಹೌದು ವೀಕ್ಷಕರೇ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ರಾಜು ಮಡಿವಾಳ ಎಂಬ ವ್ಯಕ್ತಿ ಐದು ವರ್ಷದ ನಿಸ್ಕಸ್ಮಿ ಎಂಬ ಪುಟ್ಟ ಬಾಲಕಿಯನ್ನು ನಂಬಿಸಿ ಕರೆದು ಕೊಂಡು ಹೋಗಿ ಊರಿನ ಕೆನಾಲ್ ಕಾಲುವೆಗೆ ಎಸೆದು ಪ್ರಾಣ ತೆಗೆದಿದ್ದಾನೆ ಎಂಬ ಶಂಕೆ ವ್ಯಕ್ತವಾಗುತ್ತಿದೆ ಸೋಮವಾರ ಸಾಯಂಕಾಲ 7: 30 ಕ್ಕೆ ಬಾಲಕಿಯನ್ನು ಕರೆದು ಕೊಂಡು ಹೋಗುವ ದೃಶ್ಯ ಸಿ.ಸಿ ಟೀವಿಯಲ್ಲಿ ಲಭ್ಯವಾಗಿದೆ ಬಾಲಕಿಯನ್ನು ಅಪಹರಿಸಿರುವ ವ್ಯಕ್ತಿ ರಾಜು ಮಡಿವಾಳ ಎಂಬಾತ ರಾಯಭಾಗ ಪೊಲೀಸರ ಅತಿಥಿಯಾಗಿದ್ದರು ಇನ್ನೂ ಸತ್ಯವನ್ನು ಬಾಯಿ ಬಿಡುತಿಲ್ಲಾ ಈ ಘಟನೆ ಏಕೆ ಮಾಡಿದನೆಂದು ಕಾರಣವನ್ನು ಹೇಳುತ್ತಿಲ್ಲಾ ಆರೋಪಿ ದಿನಕ್ಕೊಂದು ನಾಟಕ ವಾಡುತಿದ್ದಾನೆ ಒಂದು ಬಾರಿ ಕೆನಾಲ್ ಕಾಲುವೆಯಲ್ಲಿ ಎಸೆದಿದ್ದೇನೆ ಎಂದು ಹೇಳಿದರೆ ಮತ್ತೊಂದು ಬಾರಿ ಬಾವಿಯಲ್ಲಿ ಎಸೆದಿರುವ ಶಂಕೆ ವ್ಯಕ್ತಪಡಿಸುತಿದ್ದಾನೆ ಎಂದು ರಾಯಭಾಗ ಪೊಲೀಸರು ಕಂಪ್ಲೇಂಟ್ ತೆಗೆದುಕೊಂಡು ನಾಲ್ಕು ದಿನಗಳು ಕಳೆದರು ಆರೋಪಿಯಿಂದ ಸತ್ಯವನ್ನು ಬಾಯಿ ಬಿಡಿಸುವಲ್ಲಿ ವಿಫಲವಾಗುತಿದ್ದಾರೆ ಆದಷ್ಟು ಬೇಗ ಆರೋಪಿಯಿಂದ ಸತ್ಯವನ್ನು ಬಾಯಿ ಬಿಡಿಸಿ ನೊಂದಿರುವ ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ ನಮ್ಮ ಮಗಳನ್ನು ಹುಡುಕಿ ಕೊಡ ಬೇಕೆಂದು ಬಾಲಕಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪರಶುರಾಮ.ಆರ್.ತೆಳಗಡೆ