ಆಪರೇಷನ್ ಸಿಂಧೂರ ಯಶಸ್ವಿಗೆ ತಿರಂಗಾ ಯಾತ್ರೆಗೆ – ಮಾಜಿ ಸೈನಿಕರು ಸಾಥ್.
ಮಾನ್ವಿ ಮೇ.22

ಆಪರೇಷನ್ ಸಿಂಧೂರವನ್ನು ಯಶಸ್ವಿಯಾಗಿದ್ದಲ್ಲದೆ ಸೈನಿಕರ ಸೇವೆ ಕೊಂಡಾಡಬೇಕು ಎಂದು ಮಾನ್ವಿಯಲ್ಲಿ ರಾಷ್ಟ್ರ ರಕ್ಷಣೆಗಾಗಿ ನಾಗರಿಕರ ಸಮಿತಿ ವತಿಯಿಂದ ಬುಧುಲವಾರ ತಿರಂಗಯಾತ್ರೆ ಅದ್ಧೂರಿಯಾಗಿ ನಡೆಯಿತು.
ಶಾಲಾ ಕಾಲೇಜು ವಿದ್ಯಾರ್ಥಿಗಳು ತಿರಂಗಾ ಯಾತ್ರೆಯ ಉದ್ದಕ್ಕೂ ಪಾಪಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ. ನಮ್ಮ ಜಮ್ಮು ಮತ್ತು ಕಾಶ್ಮೀರ ನಮ್ಮದು ಅದರ ತಂಟೆಗೆ ಬಂದರೆ ನಾವೆಲ್ಲರೂ ಬರಲು ಸಿದ್ದ ಎಂದು ಕಿಡಿಕಾರಿದರು.
ಚೀಕಲಪರ್ವಿ ಮಠದ ಸದಾಶಿವ ಮಹಾ ಸ್ವಾಮೀಜಿ ಮಾತನಾಡಿ, ಪಹಲ್ಗಾಮ್ ದಾಳಿಯಾದ ಹಿನ್ನೆಲೆಯಲ್ಲಿ ಮಾನ್ವಿಯಲ್ಲಿ ಭಾಗಗಳಾಗಿ ಹೋರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಆದರೆ ಇಂದು ನಾವೆಲ್ಲರೂ ಒಂದಾಗಿರುವುದು ನೋಡುತ್ತಿದ್ದೇವೆ. ಅದೆ ರೀತಿಯಲ್ಲಿ ದೇಶ ವಿಷಯದ ಕುರಿತು ಬಂದಾಗ ಒಂದಾಗಿ ಹೋರಾಟ ಮಾಡಬೇಕು ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ