ಕಾಂಗ್ರೆಸ್ಸಿಗರು ಛಲವಾದಿ ನಾರಾಯಣ ಸ್ವಾಮಿ ಮೇಲೆ ಗುಂಡಾವರ್ತನೆ ತೋರಿದ್ದು ಸರಿಯಲ್ಲ ಎಂದ – ಮಲ್ಲು ಮಾದರ.
ಗದಗ ಮೇ.26

ಇತ್ತೀಚಿಗೆ ಕಲಬುರ್ಗಿಯ ಪ್ರವಾಸಿ ಮಂದಿರದಲ್ಲಿ ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ ಖರ್ಗೆ ಬೆಂಬಲಿಗರು ಧಮ್ಕಿ ಹಾಕಿದ್ದಕ್ಕೆ ಬಿಜೆಪಿ ಎಸ್/ಸಿ ಮೋರ್ಚಾ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲು ಮಾದರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನ ಮೇಲೆ ಮೊಟ್ಟೆ ಎಸೆದು ಶಾಹಿ ಚಲ್ಲಿ ವಿಕೃತಿ ಮೆರೆದಿದ್ದು ಇದು ಪ್ರಜಾತಂತ್ರ ವ್ಯವಸ್ಥೆ ಮೇಲೆ ಮಾಡಿದ ಅಪಚಾರ ಸರ್ಕಾರ ನಮ್ಮದೇ ಇದೆ ಎಂದು ಈ ರೀತಿ ಗುಂಡಾವರ್ತನೆ ತೋರಿದ್ದು ಸರಿಯಲ್ಲ ಅಧಿಕಾರ ಶಾಶ್ವತ ಅಲ್ಲ ಎನ್ನುವುದು ಅರಿತು ಕೊಳ್ಳಲಿ ಎಂದು ಕಿಡಿ ಕಾರಿದ್ದಾರೆ.