ತಾಲೂಕ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ನೂತನ – ಅಧ್ಯಕ್ಷರಾಗಿ & ಉಪಾಧ್ಯಕ್ಷರಾಗಿ ಆಯ್ಕೆ.

ರೋಣ ಮೇ.27

ತಾಲೂಕ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಶ್ರೀ ಅಶೋಕ ಕುರಿಯವರು ಸ.ಉ.ಹಿ.ಪ್ರಾ.ಗಂ. ಮ.ಶಾಲೆ ರೋಣ ಹಾಗೂ ಉಪಾಧ್ಯಕ್ಷರಾಗಿ ಶ್ರೀ ರಮೇಶ ಬಿ ಇಟಗಿ ಸ.ಕಿ.ಪ್ರಾ ಶಾಲೆ ಯರೇಕುರಬನಾಳ ದಿನಾಂಕ 24-05-2025 ರಂದು ಅವಿರೋಧವಾಗಿ ಆಯ್ಕೆ ಯಾದರು. ರೋಣ ಪಟ್ಟಣದಲ್ಲಿ ರೋಣ ತಾಲೂಕ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ಉನ್ನತ ಸ್ಥಾನಕ್ಕೆ ತರಲು ಶ್ರಮಿಸುವೆ ಎಂದು ನೂತನ ಅಧ್ಯಕ್ಷರಾದ ಅಶೋಕ ಕುರಿಯವರು ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ರೋಣ ತಾಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ವಾಯ್ ಡಿ ಗಾಣಿಗೇರ, ಗದಗ ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಶ ಕುರಿಯವರ, ಉಪಾಧ್ಯಕ್ಷರಾದ ಶ್ರೀ ಎಂ ವಾಯ ಜಕ್ಕರಸಾನಿ, ರೋಣ ತಾಲೂಕ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಶರಣು ದಾನಪ್ಪಗೌಡರ ಹಾಗೂ ಬ್ಯಾಂಕಿನ ಎಲ್ಲಾ ನಿರ್ದೇಶಕರು, ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಬ್ಯಾಂಕಿನ ಎಲ್ಲಾ ನಿರ್ದೇಶಕರು ವಿವಿಧ ಶಾಲೆಗಳಿಂದ ಆಗಮಿಸಿದ ಎಲ್ಲೂ ಗುರು ವೃಂದ ಹಾಗೂ ಬ್ಯಾಂಕಿನ್ ಸಿಬ್ಬಂದಿ ಭಾಗವಹಿಸಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಪ್ರಧಾನ ಗುರುಗಳಾದ ಶ್ರೀ ಎನ್ ಎ ಮುಲ್ಲಾ, ಎ ಎಂ ಮಾರನಬಸರಿ ಹಾಗೂ ಸಿಬ್ಬಂದಿ ವರ್ಗ ಸೇರಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೂ ಹಾಗೂ ಉಪಾಧ್ಯಕ್ಷರಿಗೂ ಗೌರವ ಪೂರಕ ಸನ್ಮಾನ ಮಾಡಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button