ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ – ಡಿ.ಎಸ್.ಎಸ್ ಮುಖಂಡರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ.

ಕಲಕೇರಿ ಮೇ.27

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಾ, ಡಿ.ಜಿ ಸಾಗರ ಬಣ ವಿಜಯಪುರ ಹಾಗೂ ಗ್ರಾಮ ಶಾಖೆ ಕಲಕೇರಿ. ಇವರ ವತಿಯಿಂದ ಕಲಕೇರಿ ಗ್ರಾಮದಲ್ಲಿ ಬೃಹತ ಪ್ರತಿಭಟನೆ ಮೆರವಣಿಗೆ ಮತ್ತು ಅಹೋರಾತ್ರಿ ಧರಣಿ ಸತ್ಯಾಗ್ರಹ ಸೋಮವಾರ ದಿಂದ ಅಂಬೇಡ್ಕರ್ ಸರ್ಕಲ್ ಯಿಂದ ಮೇನ್ ಬಜಾರ್ದವರೆಗೂ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ವಾಯ್.ಸಿ. ಮಯೂರ ಜಿಲ್ಲಾ ಸಂಚಾಲಕರು ಡಿ.ಎಸ್.ಎಫ್ ವಿಜಯಪುರ ಇವರು ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶ್ರೀ ಮಡಿವಾಳೆಶ್ವರ ದೇವಸ್ಥಾನದ ಅವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಸೋಮವಾರ ಪ್ರಾರಂಭ ಗೊಂಡಿದೆ.

ಅಧಿಕಾರಿಗಳಿಗೆ ತಿಳಿಸೋದೊ ಏನೇಂದರೆ ನಮ್ಮ ಕಲಕೇರಿ ಗ್ರಾಮ ಹಾಗೂ ಸುತ್ತಮುತ್ತ ಹಳ್ಳಿಯ ಗ್ರಾಮಗಳಿಗೆ ಹಲವಾರು ಬೇಡಿಕೆಗಳನ್ನು ಅಧಿಕಾರಿಗಳು ಈ ಕೂಡಲೇ ಈಡೇರಿಸಬೇಕು ನಮ್ಮ ಬೇಡಿಕೆಗಳನ್ನು ಈಡೇರಿಸಿದಿದ್ದರೆ ಮುಂದಿನ ದಿನ ಮಾನದಲ್ಲಿ ಕ್ರಾಂತಿಕಾರಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ಸಿದ್ದು ರಾಯಣ್ಣವರ ಜಿಲ್ಲಾ ಸಂಚಾಲಕರು ಡಿ.ಎಸ್.ಎಸ್ ವಿಜಯಪುರ ಈ ಸಂದರ್ಭದಲ್ಲಿ ನಮ್ಮ 16 ಬೇಡಿಕೆಗಳನ್ನು ಈಡೇರುವರೆಗೂ ಈ ಧರಣಿ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ತಿಳಿಸಿದರು. ಹಾಗೂ ಅನೇಕ ಸಂಚಾಲಕರು ಈ ಹೋರಾಟದಲ್ಲಿ ಮಾತನಾಡಿದರು.

ಸೋಮಶೇಖರ್ ಬಡಿಗೇರ್ ವಲಯ ಸಂಚಾಲಕರು ಡಿಎಸ್ಎಸ್ ವಲಯ ಕಲಕೇರಿ. ಪದಾಧಿಕಾರಿಗಳು ವಲಯ ಘಟಕ ಕಲಕೇರಿ ಯಮನೂರಿ ಸಿಂದಿಗಿರಿ. ತಿಪ್ಪಣ್ಣ ಮಾದರ್. ಪ್ರಕಾಶ್ ನಾಟಿಕರ್. ಸಂಜೀವ ಉತಾಳೆ. ಮರಲಿಂಗಪ್ಪ ಬಡಿಗೇರ್. ಪದಾಧಿಕಾರಿಗಳು ಗ್ರಾಮ ಘಟಕ ಕಲಕೇರಿ ಬಸವರಾಜ್ ಗುಡಸುಲಮನಿ ಸಂಚಾಲಕರು. ಮಲ್ಲಪ್ಪ ನಡುವಿನಕೇರಿ ಸಂಚಾಲಕರು. ಪ್ರಕಾಶ್ ದೊಡಮನಿ ಸಂಚಾಲಕರು. ಆನಂದ್ ಹೊಸಮನಿ ಸಂಚಾಲಕರು. ಸೋಮು ಹೊಸಮನಿ ಸಂಚಾಲಕರು. ದೇವೇಂದ್ರ ವಡ್ಡರ್ ಸಂಚಾಲಕರು. ಅರ್ಜುನ್ ನಡುವಿನಮನಿ. ಜೈ ಭೀಮ್ ಉತಾಳೆ. ಶರಣು ಚಲವಾದಿ. ಇನ್ನೂ ಅನೇಕ ಪದಾಧಿಕಾರಿಗಳು ಗ್ರಾಮಸ್ಥರು ಈ ಹೋರಾಟದಲ್ಲಿ ಪಾಲ್ಗೊಂಡು ಹಾಗೂ ಅಹೋರಾತ್ರಿಯ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ನಮ್ಮ ಹಲವಾರು ಬೇಡಿಕೆಗಳನ್ನು ಈಡೇರುವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಎಲ್ಲಾ ಹೋರಾಟಗಾರರು ಈ ಸಂದರ್ಭದಲ್ಲಿ ತಿಳಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button