ಅನಿರ್ದಿಷ್ಟಾವಧಿ ಮುಷ್ಕರ – ಪಟ್ಟಣ ಪಂಚಾಯಿತಿಯಲ್ಲಿ ಮುಂದುವರಿಕೆ.

ಶಿರೂರು ಮೇ.30

ಬಾಗಲಕೋಟ ಜಿಲ್ಲೆಯ ಬಾಗಲಕೋಟ ತಾಲೂಕಿನ ಶಿರೂರು ಪಟ್ಟಣ ಪಂಚಾಯತ ಪೌರ ಕಾರ್ಮಿಕರು ತಮ್ಮ ನಾನಾ ರೀತಿಯ ಬೇಡಿಕೆಯನ್ನು ಈಡೇರಿಸಲು ಅನಿರ್ದಿಷ್ಟಾವದಿ ಮುಷ್ಕರ ಕೈಗೊಂಡಿದ್ದು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ನೌಕರರಂತೆ ಪೌರ ಕಾರ್ಮಿಕ ಇಲಾಖೆಯ ನೌಕರರನ್ನು ಸರ್ಕಾರಿ ನೌಕರ ರೆಂದು ಪರಿಗಣಿಸಬೇಕು ಮತ್ತು ಇತರೆ ಇಲಾಖೆ ನೌಕರರಿಗೆ ದೊರೆಯುವ ಸೌಲಭ್ಯಗಳು ದೊರೆಯಬೇಕು ಎಂದು ಪೌರ ಕಾರ್ಮಿಕ ಸಂಘದ ಅಧ್ಯಕ್ಷರಾದ ಪ್ರಶಾಂತ ಬೂದಿಹಾಳ ಮಾತನಾಡಿ ಗ್ರಾಮ ಪಂಚಾಯತ, ಜಿಲ್ಲಾ ಪಂಚಾಯತ ಸೇರಿದಂತೆ ಎಲ್ಲಾ ಸ್ಥಳೀಯ ನೌಕರರನ್ನು ಪೂರ್ಣಾವಧಿ ನೌಕರರೆಂದು ಪರಿಗಣಿಸಲಾಗುತ್ತದೆ ಆದರೆ ಪೌರ ಕಾರ್ಮಿಕರ ಸೇವೆಯನ್ನು ಕಡೆಗಣಿಸಿ ಯಾವುದೇ ಸೌಲಭ್ಯ, ಸೌಕರ್ಯವನ್ನು ಕೊಡದೆ ವಂಚಿಸುತ್ತಾ ಬಂದಿದ್ದು ಖಂಡನೀಯವಾಗಿದೆ. ಈ ಕುರಿತು ನಮ್ಮ ಬಹು ದಿನದ ಬೇಡಿಕೆ ಇದ್ದು ದಿನ ನಿತ್ಯದ ಕಸ ಸಂಗ್ರಹಣೆ, ಕಛೇರಿ ಕೆಲಸ, ವಿಲೇವಾರಿ ಹಾಗೂ ಇನ್ನಿತರ ಕಾರ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಿ ಮುಷ್ಕರದಲ್ಲಿ ನಾವೆಲ್ಲರೂ ಬಾಗವಹಿಸಿದ್ದೇವೆ, ಉಪಾಧ್ಯಕ್ಷರು ಸೋಮು ಕುರಿಗಾರ ಕಾರ್ಯದರ್ಶಿ ಹಿರೇಮಠ್ ಹಣಮಂತ ಚನ್ನಾದಾಸರ ಹುಸೇನ ಸಾಬ್ ಮ್ಯಾಗೇರಿ ಗ್ಯಾನಪ್ಪ ಚಿಮಲಾ ದ್ಯಾಮಣ್ಣ ಹಲಗಿ ಯಲ್ಲಪ್ಪ ಹಲಗಿ ಯಮನಪ್ಪ ಸನಗಿನ ಮುತ್ತವ್ವ ಬಾಣದ ಶಂಕರ ರಾಟೋಡ್ ಹಣಮಂತ ಸಿಂಗಿ ಪರಶುರಾಮ್ ನಿಂಗದಳ್ಳಿ ಮಾಡು ಪೂಜಾರಿ ಸಿದ್ದು ಹಲಗಿ ಮುಂತಾದವರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹಲಗಿ.ಶಿರೂರು. ಬಾಗಲಕೋಟ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button