ಮಲ್ಲಾಬಾದ್ ಏತ ನೀರಾವರಿ ಪೂರ್ಣ ಗೊಳಿಸಲು ಟೆಂಡರ್ ಆಹ್ವಾನ ಇದು ಹೋರಾಟಗಾರರಿಗೆ ಸಮರ್ಪಣೆ – ಶ್ರವಣಕುಮಾರ.ಡಿ ನಾಯಕ ಸಂತಸ.
ಜೇವರ್ಗಿ ಮೇ.30

ಯಡ್ರಾಮಿ ಮತ್ತು ಶಹಾಪೂರ ಭಾಗದ ರೈತರಿಗೆ ಅನುಕೂಲವಾಗುವ ಮಲ್ಲಾಬಾದ ಏತ ನೀರಾವರಿ ಕಾಲುವೆ ಕಾಮಗಾರಿ ಅಪೂರ್ಣವಾಗಿದ್ದು, ಏತ್ ನೀರಾವರಿ ಕಾಮಗಾರಿ ಪೂರ್ಣ ಗೊಳಿಬೇಕೆಂದು ಈ ಭಾಗದ ವಿವಿಧ ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಮತ್ತು ಜನಪರ ಸಂಘಟನೆಗಳು ಬಹಳ ವರ್ಷದಿಂದ ಸರ್ಕಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ಫಲವಾಗಿ ಹೋರಾಟಕ್ಕೆ ಮಣಿದ ಸರ್ಕಾರ ಮಲ್ಲಾಬಾದ ಏತ ನೀರಾವರಿ ಕಾಮಗಾರಿ ಪೂರ್ಣ ಗೊಳಿಸಲು ಟೆಂಡರ್ ಕರೆದಿರುವುದು ಎಲ್ಲಾ ಹೋರಾಟಗಾರರ ಫಲವಾಗಿ ಜಯ ಸೀಕಿದೆ. ಅದರಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ 2013 ರಿಂದ 2025 ರ ಪ್ರಸ್ತುತ ವರ್ಷದ ವರೆಗೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ, ಮಲ್ಲಾಬಾದ್ ಏತ್ ನೀರಾವರಿ ಕಾಲುವೆ ಪೂರ್ಣ ಗೊಳಿಸ ಬೇಕೆಂದು ಚಿಗರಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡುವ ಸಂದರ್ಭದಲ್ಲಿ ನಮ್ಮ ಮೇಲೆ ಆಗಿನ ಪಿ.ಎಸ್.ಐ ಕೇಸ್ ಹಾಕಿ ರೌಡಿ ಶಿಟ್ ಕೂಡ ಓಪನ್ ಮಾಡಿದ್ದರು, ಅಷ್ಟದಾರು ಕೂಡ ನಮ್ಮ ಸಂಘಟನೆ ಯಿಂದ ನಿರಂತರವಾಗಿ ಹೋರಾಟ ಬೀಡದೆ ಕೆ.ಬಿ.ಜೆ.ಎನ್.ಎಲ್. ಕಚೇರಿಗೆ ಬೀಗ್ ಹಾಕಿ ಹೋರಾಟ ಮಾಡಲಾಯಿತು, ನಂತರ ಆಗಿನ ರಾಜ್ಯದ ಸಿ.ಎಂ ನೀರಾವರಿ ಸಚಿವರು ಮತ್ತು ವಿರೋಧ ಪಕ್ಷದ ನಾಯಕರಿಗೆ ಮನವಿ ನೀಡುತ್ತಾ ಬಂದ್ದಿದ್ದೀವಿ ಈ ಮಲ್ಲಾಬಾದ ಏತ ನೀರಾವರಿ ಕಾಲುವೆ ಕಾಮಗಾರಿ ಪೂರ್ಣ ಗೊಳಿಸಲು ರೈತ ನಾಯಕ ಮತ್ತು ರಾಜಕೀಯ ಮುಖಂಡರಾದ ಸನ್ಮಾನ್ಯ ಶ್ರೀ ಕೇದಾರಲಿಂಗಯ್ಯ ಹಿರೇಮಠ ರವರು ಯಡ್ರಾಮಿ ತಾಲೂಕಿನ ಕಡಕೋಳ ಗ್ರಾಮದಿಂದ ಜೇವರ್ಗಿ ತಾಲೂಕಿನ ವರೆಗೆ ಪಾದ ಯಾತ್ರೆ ಮಾಡಿ ನಿರಂತರ ಧರಣಿ ಸತ್ಯಾಗ್ರಹ ಮಾಡಿದ್ದಾರೆ. ಅವರಿಗೂ ಕೂಡಾ ಈ ಗೌರವ ಸಲ್ಲಬೇಕು ಈ ಹೋರಾಟದಲ್ಲಿ ನಾವು ಕೂಡ ಸತತವಾಗಿ ಭಾಗವಹಿಸಿ ಹೋರಾಟ ಯಶಸ್ವಿಯಾಗಿ ಮಾಡಿದ್ದೇವೆ.ಆದರೆ ಈಗಿನ ಕೆಲವರು ನಮ್ಮ ಹೋರಾಟದಿಂದ ಟೆಂಡರ್ ಕರೆದಿದ್ದಾರೆ ಎಂದು ಹೇಳುತ್ತಿರುವುದು ಖಂಡನೀವಾಗಿದೆ. ಮಲ್ಲಾಬಾದ್ ಏತ ನೀರಾವರಿ ಕಾಲುವೆ ಕಾಮಗಾರಿಗೆ ಪ್ರಾರಂಭ ಮಾಡಲು ಟೆಂಡರ್ ಕರೆದಿರುವ ಸರ್ಕಾರಕ್ಕೆ ಮತ್ತು ನಿರಂತರವಾಗಿ ಹೋರಾಟ ಮಾಡಿದ ಎಲ್ಲಾ ಹೋರಾಟಗಾರರಿಗೆ ಅಭಿನಂದನೆಗಳು ತಮ್ಮ ಹೋರಾಟಗಳು ನ್ಯಾಯದ ಪರವಾಗಿ ಸದಾ ಇರಲ್ಲಿ ಎಂದು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಶ್ರವಣಕುಮಾರ.ಡಿ ನಾಯಕ ರವರು ಸಂತಸ ವ್ಯಕ್ತಪಡಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ.ಎನ್.ನೀಲಕೋಡ. ಜೇವರ್ಗಿ