ತಂಬಾಕು ರಹಿತ ಜೀವನ ಆರೋಗ್ಯವಂತ – ಜೀವನಕ್ಕೆ ಸೋಪಾನ.
ಗುಂಡಿನಪಲ್ಲೆ ಮೇ.31

ಬಾಗಲಕೋಟ ಜಿಲ್ಲೆಯ ಬಾಗಲಕೋಟ ತಾಲೂಕಿನ ಗುಂಡನಪಲ್ಲೆ ಗ್ರಾಮದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೆಕ್ಷಣಾ ಇಲಾಖೆ, ತಂಬಾಕು ನಿಯಂತ್ರಣ ಕೋಶ, ಬಾಗಲಕೋಟ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ, ಗುಂಡನಪಲ್ಲೆ ಗ್ರಾಮದ ಚವಡಿ ಕಟ್ಟೆಯಲ್ಲಿ, “ವಿಶ್ವ ತಂಬಾಕು ರಹಿತ ದಿನಾಚರಣೆ” ಆಯೋಜಿಸಲಾಗಿತ್ತು. ಶ್ರೀ ಶ್ರೀಶೈಲ ಬಸಪ್ಪ ಉಳ್ಳಾಗಡ್ಡಿ, ನಿಂಗಪ್ಪ ಜುಮನಾಳ, ರಮೇಶ ಬೇನಾಳ ಮಂಜುನಾಥ ಪಾಟೀಲ್, ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್.ಎಸ್ ಅಂಗಡಿಯವರು ತಂಬಾಕು ಉತ್ಪನ್ನಗಳ ಮಾರಾಟ ಸೇವನೆಯ ದುಷ್ಪರಿಣಾಮಗಳ ವೈಜ್ಞಾನಿಕ ಮಾಹಿತಿ ಕರ ಪತ್ರಗಳ ಸಾರ್ವಜನಿಕರಿಗೆ ವಿತರಿಸುವ ಮುಖಾಂತರ ವಿಶ್ವ ತಂಬಾಕು ರಹಿತ ದಿನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ತಂಬಾಕು ಉತ್ಪನ್ನುಗಳ ಮಾರಾಟ ಸೇವನೆ ಕಾನೂನು ಪ್ರಕಾರ ಅಪರಾಧ, ತಂಬಾಕಿನಲ್ಲಿ ‘ನಿಕೋಟಿನ್’ಎಂಬ ಹಾನಿಕಾರ ಅಂಶದಿಂದ ಮಾನವ ದೇಹಕ್ಕೆ ಹಾನಿಕಾರಕ ಇದರಿಂದ ರಕ್ತದೊತ್ತಡ, ವಿವಿಧ ತರಹ ಕ್ಯಾನ್ಸರ್, ರಕ್ತ ಹಿನತೆ ಅನೇಕ ಮಾರಣಂತಿಕ ರೋಗಗಳು ಆವರಿಸಿ ಮಾನವನನ್ನು ನರಕ ಕೂಪಕ್ಕೆ ತಳ್ಳುವುದು. 2003 ರಿಂದ ತಂಬಾಕು ಉತ್ಪನ್ನ ಮಾರಾಟ ನಿಷೇಧ ಕಾನೂನು ಜಾರಿಯಲ್ಲಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ ಸಿಗರೇಟ್ ದೂಮ್ರಪಾನ ತಂಬಾಕು ಜಿಗಿದು ಉಗುಳ ಬಾರದು, ಪರಿಸರ ಸ್ವಚ್ಛತೆ ಕಾಪಾಡಬೇಕು, ದೃಢ ಮನಸ್ಸಿನಿಂದ ದುಶ್ಚಟಗಳನ್ಪು ದೂರ ತಳ್ಳಬೇಕು, ವ್ಯಸನ ಮುಕ್ತ ಕೇಂದ್ರಕ್ಕೆ ಭೇಟಿ ನೀಟಿ ಸೂಕ್ತ ಚಿಕಿತ್ಸೆ ಸಲಹೆ ಪಡೆಯಬಹುದು ತಂಬಾಕು ರಹಿತ ಜೀವನ ನಡೆಸಿ ಆರೋಗ್ಯಕರ ಜೀವನ ಸಾಗಿಸಿ “ತಂಬಾಕು ರಹಿತ ವ್ಯಸನ ಮುಕ್ತ ಸಮಾಜ ನಿರ್ಮಾಣ ಉತ್ತಮ ಕಾಯಕ. ತಂಬಾಕು ತ್ಯಜಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಲು ಕರೆ ನೀಡಿದರು. ಯಾವುದೇ ತರಹ ಆರೋಗ್ಯ ಸಮಸ್ಯೆಗಳಿಗೆ 104 ಉಚಿತ ಕರೆ ಮಾಡಿ ಆರೋಗ್ಯ ಸಲಹೆಗಳನ್ನು ಪಡೆದು ಕೊಳ್ಳಿರಿ ಎಂದು ಸಾರ್ವಜನಿಕರಲ್ಲಿ ಆರೋಗ್ಯದ ಅರಿವು ಮೂಡಿಸಿದರು. ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ ಶಿಕ್ಷಕರು, ಆಶಾ ಗ್ರಾಮದ ಮುಖಂಡರು, ಮಹಿಳಾ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು, ಯುವಕರು ಭಾಗವಹಿಸಿದ್ದರು.