ಸಾಹಿತಿ ಎಚ್.ಎಸ್ ವೆಂಕಟೇಶ್ ಮೂರ್ತಿ – ರವರಿಗೆ ಶ್ರದ್ಧಾಂಜಲಿ.

ತರೀಕೆರೆ ಮೇ.31

ಜನರ ಜೀವನಕ್ಕೆ ಹತ್ತಿರವಾದ ಸಾಹಿತ್ಯ ಜನಪದ ಲೋಕದ ಅಗ್ರಗಣ್ಯರಲ್ಲಿ ಸಾಹಿತಿ ಎಚ್.ಎಸ್ ವೆಂಕಟೇಶ್ ಮೂರ್ತಿ ರವರು ಒಬ್ಬರು, ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ರವರು ಹೇಳಿದರು. ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸಾಹಿತಿ ಎಚ್.ಎಸ್ ವೆಂಕಟೇಶಮೂರ್ತಿ ರವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿ ದಳವಾಯಿ ರವರು ಮಾತನಾಡಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಆಗಿದ್ದರು ಎಂದು ಹೇಳಿದರು. ಬಿ.ಎಸ್ ಭಗವಾನ್ ರವರು ಮಾತನಾಡಿ ಅವರು ಬರೆದಿದ್ದ ಭಾವಗೀತೆಯನ್ನು ಹಾಡಿದರು. ಪುರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ದಾದಾಪೀರ್ ರವರು ಮಾತನಾಡಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿರುತ್ತಾರೆ ಭಾವ ಗೀತೆಗಳಲ್ಲಿ ಭಾವನೆಗಳು ತುಂಬಿರುವಂತೆ ಅವರ ಭಾವಗೀತೆಗಳು ಪ್ರಸಿದ್ಧವಾಗಿದ್ದವು ಎಂದು ಹೇಳಿದರು.

ಸುನಿತಾ ಕಿರಣ್ ರವರು ವೆಂಕಟೇಶ್ ಮೂರ್ತಿರವರು ರಚಿಸಿದ ಕವನ ರಾಗ ಸಂಯೋಜನೆ ಯೊಂದಿಗೆ ಹಾಡಿದರು. ನಾಗಜೋತಿ ರವರು ಭಾವ ಗೀತೆಗಳು ಸಹ ಸಂಗೀತಕ್ಕೆ ಹೊಂದಿ ಕೊಳ್ಳುವಂತಿತ್ತು ಸರಳವಾದ ಸಾಹಿತ್ಯ ದೊಂದಿಗೆ ಮನುಷ್ಯರಲ್ಲೂ ಪ್ರೀತಿ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು. ಈ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಪುರಸಭಾ ಸದಸ್ಯರಾದ ಶ್ರೀಧರ್ ಇಮ್ರಾನ್ ಖಾನ್ ಉಮಾ ಮಹೇಶ್ವರಿ ಮಿಲ್ಟ್ರಿ ಶ್ರೀನಿವಾಸ್ ನವೀನ್ ಪೆನ್ನಯ್ಯ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button