ರಾಜ್ಯ ಸರಕಾರದ ವಿರುದ್ಧ ಜೆಡಿಎಸ್ ಪಕ್ಷದಿಂದ – ತೀವ್ರ ಪ್ರತಿಭಟನೆ.
ಮಾನ್ವಿ ಜೂ.05

ಮಾನ್ವಿ ಮತ್ತು ಸಿರವಾರ ತಾಲೂಕಿನ ಭಾಗದಲ್ಲಿ ರೈತರು ಜೋಳ ಬೆಳೆದಿದ್ದು, ಕೂಡಲೇ ಸರಕಾರ ಹೆಚ್ಚುವರಿ ಜೋಳವನ್ನು ಖರೀದಿ ಮಾಡಬೇಕು ಎಂದು ಆಗ್ರಹಿಸಿ ಮಾನ್ವಿ ಪಟ್ಟಣದ ಬಸವ ವೃತ್ತದಲ್ಲಿ ಜೆಡಿಎಸ್ ಪಕ್ಷದಿಂದ ತೀವ್ರ ಪ್ರತಿಭಟನೆ ನಡೆಸಲಾಯಿತು.

ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಮಾತನಾಡಿ, ಸಿಂಧನೂರು ಸೇರಿದಂತೆ ರಾಯಚೂರು ಜಿಲ್ಲೆಯ ಭಾಗದಲ್ಲಿ ರೈತರು ಜೋಳ ಬೆಳೆದಿದ್ದಾರೆ. ಆದರೆ ಸರಕಾರ ತಿಳಿಸಿದಂತೆ ರೈತರ ಜೋಳವನ್ನು ಖರೀದಿ ಮಾಡದ ಹಿನ್ನೆಲೆಯಲ್ಲಿ ರೈತರು ಹೋರಾಟ ಮಾಡಿದ್ದಾರೆ, ಹೀಗಾಗಿ ನಮ್ಮ ಪಕ್ಷ ರೈತಪರ ಇರುವ ಕಾರಣದಿಂದ ಹೋರಾಟ ಹಮ್ಮಿಕೊಂಡು ಸರಕಾರವನ್ನು ಖಂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಬೆಳೆದ ಜೋಳವನ್ನು ಸರಕಾರ ಕೂಡಲೇ ಖರೀದಿ ಮಾಡುವ ಕೆಲಸ ಮಾಡಬೇಕು. ಒಂದು ವೇಳೆ ರೈತರು ಬೆಳೆದ ಜೋಳಕ್ಕೆ ಏನಾದರು ಅನಾಹುತ ವಾದರೆ ಯಾರು ಹೊಣೆ ಕೂಡಲೇ ರೈತರ ಸ್ಥಿತಿಯನ್ನು ಅರಿತು ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ