ದೇಸಿ ತಳಿಯ ಹಸುಗಳಿಗೆ ಉಚಿತ ಮೇವು ವಿತರಣೆ ಮೆಚ್ಚುಗೆಯ ಸೇವೆ – ಭಜನೆ ಬೋರಣ್ಣ ಅಭಿಮತ.
ಚಳ್ಳಕೆರೆ ಜೂ.04

ನಮ್ಮ ದೇಸಿ ತಳಿಯ ಹಸುಗಳಿಗೆ ಉಚಿತ ಒಂದು ಲೋಡ್ ರಾಗಿ ಹುಲ್ಲಿನ ವಿತರಣೆ ಮೆಚ್ಚುಗೆಯ ಸೇವೆ ಎಂದು ಕಾಲುವೆಹಳ್ಳಿಯ ಶ್ರೀಆಂಜನೇಯ ಸ್ವಾಮಿ ಭಜನಾ ಮಂಡಳಿಯ ಕಲಾವಿದ ಬೋರಣ್ಣ ತಿಳಿಸಿದರು. ತಾಲೂಕಿನ ಕಾಲುವೆಹಳ್ಳಿಯ ಗೋಪಾಲಕಿ ಪಾರ್ವತಮ್ಮ ಸಾಕುತ್ತಿರುವ ದೇಸಿ ತಳಿಯ ಹಸುಗಳಿಗೆ ಚಿತ್ರದುರ್ಗದ ಸಮಾಜ ಸೇವಕರಾದ ಶ್ರೀಮತಿ ಶಿಲ್ಪಾ ರಮೇಶ್ ಮತ್ತು ಆಶಾ ಅನುಪ್ ಅವರ ಉದಾರ ಆರ್ಥಿಕ ನೆರವಿನಿಂದ ಒಂದು ಲೋಡ್ ರಾಗಿ ಹುಲ್ಲನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜ ಸೇವಕ ಯತೀಶ್.ಎಂ ಸಿದ್ದಾಪುರ ಮಾತನಾಡಿ ಕಾಲುವೆಹಳ್ಳಿಯ ಪಾರ್ವತಮ್ಮ ಎಲೆ ಮರೆಯ ಕಾಯಿಯಂತೆ ನಿಸ್ವಾರ್ಥವಾಗಿ ದೇಸಿ ತಳಿಯ ಹಸುಗಳನ್ನು ಪಾಲನೆ ಮತ್ತು ಪೋಷಣೆ ಮಾಡುವುದರಲ್ಲೇ ತನ್ನ ಜೀವನದ ಸಾರ್ಥಕತೆಯನ್ನು ಕಾಣುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಸಾಧಕರನ್ನು ಮತ್ತು ಗೋವುಗಳನ್ನು ಸಮಾಜದ ದಾನಿಗಳು ಗುರುತಿಸಿ ಮೇವು ವಿತರಿಸುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಒಂದು ಲೋಡ್ ರಾಗಿ ಹುಲ್ಲನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾರ್ವತಮ್ಮ, ಮಹೇಶ್ವರಿ, ಜ್ಯೋತಿ, ಸುಧಾ ಪ್ರಹ್ಲಾದ್, ಪದ್ಮ ನಾಗರಾಜ್, ನಾಗಶ್ರೀ, ಅರುಣ ಸುಬ್ಬರಾಜ್, ಡಾ, ವಿದ್ಯಾ, ಮೀರಾ ರಮೇಶ್, ಸುಜಾತ, ಚಂದ್ರಕಲಾ, ಅನಿತಾ, ಸೌರಭಿ, ಮಲ್ಲಿಕಾರ್ಜುನ, ಬ್ರಹ್ಮ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.