ಸಸಿ ನಾಟಿ ಸಂಕಲ್ಪ ರಸ್ತೆ ಬದಿ, ಶಾಲೆ ಕಾಲೇಜು, ಆವರಣದಲ್ಲಿ ಸಸಿ ನೆಟ್ಟು ಪೋಷಕ ಹಸರೀಕರಣಕ್ಕೆ – ಅರಣ್ಯ ಇಲಾಖೆ ಪಣ.
ಇಂಡಿ ಜೂ.05

ತಾಲೂಕಿನ ನಾನಾ ಕಡೆ ಇರುವ ಸರಕಾರಿ ಜಮೀನು ಸೇರಿದಂತೆ ರಸ್ತೆ ಬದಿಯಲ್ಲಿ ಶಾಲಾ ಕಾಲೇಜುಗಳ ಆವರಣದಲ್ಲಿ ಸಸಿ ನೆಡುವ ಮೂಲಕ ಹಸರೀಕರಣ ಗೊಳಿಸಲು ಅರಣ್ಯ ಇಲಾಖೆ ಪಣ ತೊಟ್ಟಿದೆ. ಈಗಾಗಲೇ ತಾಲೂಕಿನ ಸಾವಳಸಂಗ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೆಧಾಮ ಗ್ರಾಮದ ಅಂದಾಜು ೨೭೦ ಎಕರೆ ಅದರಲ್ಲಿ ೩೦ ಎಕರೆ ಪ್ರದೇಶದಲ್ಲಿ ಅರಣ್ಯಿಕರಣ ಅಂದಾಜು ೩೭ ಸಾವಿರ ಸಸಿ ಕಳೆದ ಆರು ವರ್ಷಗಳಲ್ಲಿ ನೆಟ್ಟಿದ್ದಾರೆ.

ಅದಲ್ಲದೆ ಪಟ್ಟಣದ ಆಡಳಿತ ವಿಕಾಸ ಸೌಧ, ಬಸವೇಶ್ವರ ವೃತ್ತದಿಂದ ಸ್ಟೇಷನ್ ರಸ್ತೆ, ಸಿಂದಗಿ ರಸ್ತೆ, ವಿಜಯಪುರ ರಸ್ತೆ ಮತ್ತು ಅಗರಖೇಡ ರಸ್ತೆ ಎರಡು ಬದಿಗೆ ಗಿಡಗಳನ್ನು ನೆಟ್ಟು ಕಳೆದ ಆರು ವರ್ಷಗಳಿಂದ ಪೋಷಿಸುತ್ತ ನಗರದ ಸೌಂದರ್ಯ ಹೆಚ್ಚಿಸಲಾಗಿದೆ.

ಮಂಜುನಾಥ ದೂಳೆ
ಎಲ್ಲಾ ಸರಕಾರಿ ಕಚೇರಿಗಳು ಎಲ್ಲಾ ಸರಕಾರಿ ಮತ್ತು ಖಾಸಗಿ ಪದವಿ ಮತ್ತು ಪದವಿ ಪೂರ್ವ ಮಹಾ ವಿದ್ಯಾಲಯಗಳು ಪ್ರೌಢ ಶಾಲೆಗಳಲ್ಲಿ ನೆಟ್ಟ ಗಿಡಗಳನ್ನು ಆರು ವರ್ಷದಿಂದ ಪೋಷಣೆ ಮಾಡಲಾಗುತ್ತಿದೆ. ಪ್ರಸಕ್ತ ವರ್ಷ ಪಟ್ಟಣ ಹೋರ್ತಿ ವಲಯ, ದೆಗಿನಾಳ, ತಾಂಬಾ, ಬೆನಕನಹಳ್ಳಿ, ಬಾಲಗಾಂವ ಕಾತ್ರಾಳ ರಸ್ತೆ ಸೇರಿದಂತೆ ಮತ್ತಿತರ ಕಡೆ ಹತ್ತು ಸಾವಿರ ಸಸಿ ನೆಡುವ ಗುರಿ ಹೊಂದಲಾಗಿದೆ. ಸಾವಳಸಂಗದಲ್ಲಿ ಕಾರ್ಯಕ್ರಮವೂ ಇದೆ.ರೀಯಾಯತಿ ದರ- ಜೂ ೧ ರಿಂದ ರೈತರಿಗೆ ಸಸಿಗಳನ್ನು ರಿಯಾಯತಿ ದರದಲ್ಲಿ ವಿತರಿಸಲಾಗುತ್ತಿದೆ.

ಎಸ್.ಜಿ ಸಂಗಾಲಕ
ಸಾಗವಾನಿ, ಮಹಾಗನಿ, ನಿಂಬೆ, ನೇರಳೆ, ಪೇರಲ, ಮಾವು ಕರಿಬೇವು ಸೇರಿ ನಾನಾ ಸಸಿಗಳನ್ನು ರೈತರಿಗೆ ರಿಯಾಯತಿ ದರದಲ್ಲಿ ವಿತರಿಸಲಾಗುತ್ತಿದೆ. ಸಾಮಾಜಿಕ ಅರಣ್ಯ ಸಸ್ಯ ಪಾಲನಾ ಕ್ಷೇತ್ರ ಮತ್ತು ಪ್ರಾದೇಶಿಕ ಅರಣ್ಯ ಸಸ್ಯ ಪಾಲನಾ ಕ್ಷೇತ್ರದಲ್ಲಿ ಸಸಿ ವಿತರಿಸಲಾಗುತ್ತಿದೆ.
ಬಾಕ್ಸ್ ಸುದ್ದಿ:-
ಸರಕಾರಿ ಜಮೀನು ಸೇರಿ ನಾನಾ ಕಡೆ ಸಾವಿರಾರು ಸಸಿ ನೆಡಲಾಗುತ್ತಿದೆ. ಈಗಾಗಲೇ ಎಲ್ಲಾ ಸಿದ್ದತೆ ಮಾಡಿ ಕೊಂಡಿದ್ದೇವೆ. ಇಂಡಿ ತಾಲೂಕಿನಲ್ಲಿ ಅರಣ್ಯ ಬೆಳೆಸುವ ಗುರಿ ಹೊಂದಲಾಗಿದೆ ಮಂಜುನಾಥ ಧೂಳೆ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳು ಇಂಡಿ.
ಬಾಕ್ಸ್ ಸುದ್ದಿ:-
ಪರಿಸರ ರಕ್ಷಣೆ ನಮ್ಮೇಲ್ಲರ ಮಹತ್ತರ ಜವಾಬ್ದಾರಿಯಾಗಿದೆ. ಹಾಗಾಗಿ ಎಲ್ಲರೂ ಹೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರ ಉಳಿಸಬೇಕು ಎಸ್.ಜಿ.ಸಂಗಾಲಕ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳು ಇಂಡಿ.