ಅಕ್ರಮವಾಗಿ ಮಾರಾಟವಾಗುತ್ತಿರುವ ಸಾರಾಯಿಯನ್ನು ನಿಷೇಧಿಸಿ ಎಂದು ಅಬಕಾರಿ ಇಲಾಖೆಗೆ – ಬೀಗ ಹಾಕಿ ನಮ್ಮ ಕರ್ನಾಟಕ ಸೇನೆಯಿಂದ ಪ್ರತಿಭಟನೆ.

ಯಡ್ರಾಮಿ ಜೂ.05

ಯಡ್ರಾಮಿ ಮತ್ತು ಜೇವರ್ಗಿ ತಾಲೂಕಿನ ಕೆಲವು ಸಣ್ಣ ಪುಟ್ಟ ಗ್ರಾಮಗಳಲ್ಲಿ ಅಕ್ರಮವಾಗಿ ಮಾರಾಟ ವಾಗುತ್ತಿರುವ ಸಾರಾಯಿಯನ್ನು ನಿಷೇಧಿಸಿ ಎಂದು ಅಬಕಾರಿ ಇಲಾಖೆಗೆ ಬೀಗ ಹಾಕಿ ನಮ್ಮ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ.ಯಡ್ರಾಮಿ ತಾಲೂಕಿಗೆ ಸಮೀಪ ಇರುವ ಕೋಣಸಿರಸಗಿ ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಇದಕ್ಕೆ ಪ್ರತಿಯಾಗಿ ಊರಿನ ಕೆಲವು ಹೆಣ್ಣುಮಕ್ಕಳು ಸೇರಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿರುವವರನ್ನು ವಿಚಾರಿಸಿ ಮನವಿ ಮಾಡಿದ್ರೆ ಅವ್ನು ನಾನು ಇದನ್ನು ನಿಲ್ಲಿಸಲ್ಲಾ ನೀವೂ ಎಲ್ಲಿಗೆ ಹೊತಿರೋ ಹೋರಿ? ಯಾರಿಗೀ!?? ಹೇಳುತ್ತಿರೋ ಹೇಳಿ?? ಏನೂ ಮಾಡುತ್ತೀರೋ ಮಾಡಿ ಅಂತ ಸವಾಲ್ ಹಾಕಿ ಮಹಿಳೆಯರಿಗೆ ಬಾಯಿಗೆ ಬಂದಂಗೆ ಬೈದು ಕಳುಹಿಸಿದ್ದಾನೆ. ಇದಕ್ಕೆ ಪ್ರತೀಕಾರವಾಗಿ ನಮ್ಮ ಕರ್ನಾಟಕ ಸೇನೆ ಸಂಘಟನೆಯು ಮಹಿಳೆಯರಿಗೆ ಬೆಂಬಲವಾಗಿ ನಿಂತು ಜೇವರ್ಗಿ ನಗರದಲ್ಲಿರುವ ಅಬಕಾರಿ ಇಲಾಖೆಗೆ ಬೀಗ ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮನವಿ ಸಲ್ಲಿಸಲಾಯಿತು.

ಈ ಪ್ರಭಟನೆ ಕುರಿತು ಮಾತನಾಡಿದ ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಸುಧೀಂದ್ರ ಇಜೇರಿ ರವರು ಒಂದು ವಾರದೊಳಗೆ ಯಡ್ರಾಮಿ ಮತ್ತು ಜೇವರ್ಗಿ ತಾಲ್ಲೂಕಿನಾದ್ಯಂತ ಅಕ್ರಮವಾಗಿ ಮಾರುತ್ತಿರುವ ಸಾರಾಯಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಇಲ್ಲದಿದ್ರೆ ಮುಂದೇ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದರು.

ಜೇವರ್ಗಿ ತಾಲೂಕು ಘಟಕದ ಅಧ್ಯಕ್ಷ ಶಿವಲಿಂಗ ಹಳ್ಳಿ ಮಾತನಾಡಿದ ಅವರು ಕೆಲವು ಗ್ರಾಮಗಳಲ್ಲಿ ಅಕ್ರಮವಾಗಿ ಪಾನ್ ಶಾಪ್, ಕಿರಾಣಿ ಅಂಗಡಿಗಲ್ಲಿ ಸಾರಾಯಿ ಮಾರಾಟ ಮಾಡುವವರನ್ನು ಕೂಡಲೇ ಬಂಧಿಸಿ ಅವರಿಗೆ ತಕ್ಕ ಪಾಠ ಕಲಿಸಿ ಎಂದು ದೂರಿದರು. ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ಜೇವರ್ಗಿ ತಾಲೂಕಿನ ಉಪಾಧ್ಯಕ್ಷ ಶಂಕರ್ ದೋರನಹಳ್ಳಿ, ಯಡ್ರಾಮಿ ತಾಲೂಕು ಘಟಕದ ಅಧ್ಯಕ್ಷ ಭಗವಂತರಾಯ, ವಿಶ್ವ ಜನಿವಾರ, ಕೋಣಸಿರಸಗಿ ಗ್ರಾಮದ ಮಹಿಳೆಯರುಮತ್ತು ವಿವಿಧ ಸಂಘಟನೆಯ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ.ಎನ್.ನೀಲಕೋಡ.ಇಜೇರಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button