ಸಾಗುವಳಿ ಪಟ್ಟಾ ನೀಡುವಂತೆ ಆಗ್ರಹಿಸಿ – ಎ.ಐ.ಕೆ.ಎಸ್ ಸಂಘದಿಂದ ಪ್ರತಿಭಟನೆ.
ಮಾನ್ವಿ ಜೂ.05

ಮಾನ್ವಿ ಹಾಗೂ ಸಿರವಾರ ತಾಲೂಕಿನಲ್ಲಿ ಭೂಮಿ ಇಲ್ಲದವರು ಸರಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದು, ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರ ಸಾಗುವಳಿ ಪಟ್ಟಾ ನೀಡುತ್ತಿಲ್ಲ ಎಂದು ಆರೋಪಿಸಿ ಎ.ಐ.ಕೆ.ಎಸ್ ಸಂಘಟನೆಯಿಂದ ಮಾನ್ವಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಭೂಮಿ ಇಲ್ಲದವರು ಉಳುಮೆ ಮಾಡುತ್ತಿದ್ದು, ಆದರೆ ಸರಕಾರ ಸಾಗುವಳಿ ಚೀಟಿ ನೀಡದೆ ಶೋಷಿತರನ್ನು ಸತಾಯಿಸ ಲಾಗುತ್ತದೆ, ಇದು ಅನ್ಯಾಯ ಎಂದು ಕಾಮ್ರೇಡ್ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾನ್ವಿ ಪಟ್ಟಣದಲ್ಲಿ ನಿವೇಶನ ಇಲ್ಲದೆ ಬಡ ಜೀವಿಗಳು ಬಾಡಿಗೆ ಮನೆಯಲ್ಲಿ ಜೀವನ ಕಳೆಯುತ್ತಿದ್ದಾರೆ. ಆದರೆ ಬುರಾಂಪುರ ಗ್ರಾಮದಲ್ಲಿ ಸರ್ವೆ ನಂಬರ್ 54 ರಲ್ಲಿ ಸರಕಾರಿ ಜಾಗ ಇದ್ದು ಕೂಡಲೇ ನೊಂದವರಿಗೆ ನಿವೇಶನ ಕೊಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ