ಯಲಗೋಡದಲ್ಲಿ ಕೃಷಿ – ಅಭಿಮಾನ ಕಾರ್ಯಕ್ರಮ.
ಯಲಗೋಡ ಜೂ.07

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮ ಪಂಚಾಯತಿಯಲ್ಲಿ ದಿನಾಂಕ 07.06.2025 ರಂದು ವಿಕಸಿತ ಕೃಷಿ ಅಭಿಯಾನ ಕಾರ್ಯಕ್ರಮ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳು ಆಗಮಿಸಿ ಮುಂಗಾರು ಹಂಗಾಮಿನ ಬಿತ್ತನೆ ವಿಧಾನಗಳ ಬಗ್ಗೆ ಹಾಗೂ ಬೀಜ ಮೊಳಕೆ ಪ್ರಮಾಣ ಗುರುತಿಸುವುದು ಕೀಟನಾಶಕ ಸಿಂಪಡಣಾ ವಿಧಾನ ಹಾಗೂ ಕೀಟ ಬಾಧೆಯ ರೋಗ ಲಕ್ಷಣಗಳ ಹತೋಟಿ ಕ್ರಮಗಳ ಬಗ್ಗೆ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ಮತ್ತು ಜಾನುವಾರುಗಳ ಸಂರಕ್ಷಣೆ ಹಾಗೂ ರೋಗ ಭಾದೆಯ ಹತೋಟಿಯ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ರೈತ ಬಾಂಧವರಿಗೆ ವಿವರಿಸಿ ಕೃಷಿ ವಿಜ್ಞಾನಿಗಳಾದ ಡಾಕ್ಟರ್, ಪ್ರೇಮ್ ಚಂದ್ರ ಇಂಡಿ ಡಾಕ್ಟರ್, ಪ್ರಸಾದ್ ಹಾಗೂ ಕೃಷಿ ಅಧಿಕಾರಿಗಳಾದ ಶ್ರೀ ಶರಣಗೌಡ ಬಿರಾದಾರ್ ಮಾಹಿತಿಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಯಲಗೋಡ ಗ್ರಾಮದ ರೈತ ಮುಖಂಡರಾದ ಅಣ್ಣಪ್ಪಗೌಡ ಪಾಟೀಲ ಸೋಮು ಹೋಸಮನಿ, ಮುರಗೇಪ್ಪ ದೊಡ್ಡಮನೆ ಬಾಬು ಬಾಗೇವಾಡಿ ಮಾಂತು ಉತ್ಯಾಳ ಮಾಂತಪ್ಪ ಗಾಣಗೇರ ನೀಲಪ್ಪ ಹಡಪದ ಹಾಗೂ ಸರ್ವ ರೈತ ಬಾಂಧವರು ಹಾಗೂ ಮಹಿಳಾ ಒಕ್ಕೂಟದ ಎಂ.ಬಿ.ಕೆ ಕೃಷಿ ಸಖಿ ಪಶು ಸಖಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ