ಬಕ್ರೀದ್ ಹಬ್ಬವನ್ನು – ವಿಜೃಂಭಣೆಯಿಂದ ಆಚರಿಸಿದರು.
ಮಾನ್ವಿ ಜೂ.07

ಇಂದು ಮಾನ್ವಿ ಪಟ್ಟಣದಲ್ಲಿ ಬಕ್ರೀದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಮುಸ್ಲಿಂ ಸಹೋದರರು ಬೆಳಿಗ್ಗೆ ಈದ್ ಮೈದಾನಕ್ಕೆ ಭೇಟಿ ನೀಡಿ ನಮಾಜನ್ನು ಮಾಡಿ ಹಬ್ಬವನ್ನು ಆಚರಿಸಿದರು. ಈ ಹಬ್ಬ ತ್ಯಾಗ ಬಲಿದಾನದ ಹಬ್ಬವಾಗಿದೆ. ಎಲ್ಲಾ ಹಿಂದೂ ಮತ್ತು ಮುಸ್ಲಿಂ ಸಹೋದರರು ಸೇರಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಹಾಗೂ ಈದ್ ಮೈದಾನಕ್ಕೆ ಹಿಂದೂ ಸಹೋದರರು ಬಂದು ಮುಸ್ಲಿಂ ಸೋದರರಿಗೆ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮಾನ್ವಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಜಿ.ಹಂಪಯ್ಯ ನಾಯಕ್ ಸೌಕಾರ್ ಹಾಗೂ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್ ಮತ್ತು ರಾಜ ಸುಭಾಷ್ ಚಂದ್ರ ನಾಯಕ್ ಹಾಗೂ ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಹಮತ್ ಅಲಿ. ಕಾಂಗ್ರೆಸ್ ಮುಖಂಡರಾದ ಮಿರ್ಜಾ ಆದಮ್ ಬೇಗ್. ರೌಡೆರ್ ಸ್ವಾಮಿ. ಬಿಕೆ. ಅಂಬರೀಶಪ್ಪ. ಇದಾಯತ್ ನೈಕ್. ಉದಯ್ ಟೈಲರ್. ನಾಗರಾಜ್. ಕನಕಪ್ಪ ಯಾದವ್. ಸೈಯದ್ ಫಯಾಜ್ ಉದ್ದೀನ್. ಸೈಯದ್ ಏಜಾಜ್ ಖಾದ್ರಿ. ಹುಸೇನ್ ಭಾಷಾ. ಜಾವೇದ್ ಖಾನ್. ಮಿರ್ಜಾ ಆರಿಫ್ ಬೇಗ್. ಅಬ್ಬು ಪಟೇಲ್. ಹಾಗೂ ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ