ಡಿ.ಎಸ್.ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾಗಿ – ಯಮನಪ್ಪ.ಪಿ. ಭಜಂತ್ರಿ ಆಯ್ಕೆ.
ಬಾಗಲಕೋಟ ಜೂ.07

ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಯಮನಪ್ಪ.ಪಿ ಭಜಂತ್ರಿ ಇವರನ್ನು ಆಯ್ಕೆ ಮಾಡಿದ್ದಾರೆಂದು ಸಮಿತಿಯ ಜಿಲ್ಲಾ ಸಂಚಾಲಕರಾದ ಯಮನಪ್ಪ.ಸಿ ಹಲಗಿ ತಿಳಿಸಿದ್ದಾರೆ. ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಸಮಿತಿಯ ಸಕ್ರೀಯ ಕ್ರೀಯಾಶೀಲ ಕಾರ್ಯಕರ್ತರಾಗಿ ಸುದೀರ್ಘ ಇಪ್ಪತ್ತೈದು ವರ್ಷಗಳ ಕಾಲ ನಿರಂತರವಾಗಿ ನೇರ & ವಸ್ತು ನಿಷ್ಠುರ ತನ್ನ ಬದ್ಧತೆ ಹಾಗೂ ಸಾಂಘಿಕ ಸೈದ್ಧಾಂತಿಕ ಮತ್ತು ತಾತ್ವಿಕ ನೆಲೆಗಟ್ಟಿನ ಮೇಲೆ ಬೆಳೆದ ಸಂಘಟನೆಯ ಮುಂಚೂಣಿ ಕಾರ್ಯಕರ್ತರಾಗಿ ವಿವಿಧ ಹಂತದ ಪದಾಧಿಕಾರಿಯಾಗಿ ಜಿಲ್ಲಾ ಸಂಘಟನಾ ಸಂಚಾಲಕರಾಗಿ ನಿಯುಕ್ತಿ ಆಗಿರುವುದು ಅತ್ಯಂತ ವೈಶಿಷ್ಟ್ಯಗಳಲ್ಲಿ ಇದೊಂದು ವಿಶೇಷ ಅನ್ನುವುದರಲ್ಲಿ ಅತಿಶಯೋಕ್ತಿ ಅನ್ನುವುದರಲ್ಲಿ ಎರಡು ಮಾತಿಲ್ಲ ಇಂತಹ ಒಬ್ಬ ಗಟ್ಸ್ ನಾಯಕನ ಅವಶ್ಯಕತೆ ಸಂಘಟನೆಗೆ ಇದೆ. ಇವರನ್ನು ಈ ಕೂಡಲೇ ಜಿಲ್ಲೆಯ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಆಯ್ಕೆ ಮಾಡಿ ಆದೇಶಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಗೆ ಜಿಲ್ಲಾ ಸಂಚಾಲಕರಾದ ಯಮನಪ್ಪ.ಸಿ ಹಲಗಿ. ತಿಳಿಸಿದ್ದಾರೆ ಎಂದು ವರದಿಯಾಗಿದೆ.