ರಾಯರೆಡ್ಡಿ ಸಾಹೇಬ್ರೆ ರೈಲ್ವೆ ಸ್ಟೇಷನ್ ಗೆ ನಿತ್ಯ ಬಸ್ ಬಿಡುವಂತೆ – ಪ.ಪಂ ಸದಸ್ಯ ಅಶೋಕ ಅರಕೇರಿ ಆಗ್ರಹ.
ಯಲಬುರ್ಗಾ ಜೂ.08

ಇಲ್ಲಿಯ ರೈಲ್ವೆ ಸ್ಟೇಷನ್ ಗೆ ನಿತ್ಯ ಒಂದು ಬಸ್ ಓಡಿಸುವಂತೆ ರಾಯರೆಡ್ಡಿ ಸಾಹೇಬರಿಗೆ ಮತ್ತು ಅಧಿಕಾರಿಗಳಿಗೆ ಪ.ಪಂ ಸದಸ್ಯ ಅಶೋಕ ಅರಕೇರಿ ಸಾರಿಗೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಹು ದಿನದ ಕನಸಾಗಿದ್ದ ಗದಗ ವಾಡಿ ರೈಲ್ವೆಯು ಹುಬ್ಬಳ್ಳಿ ಯಿಂದ ಕುಷ್ಟಗಿ ಯವರೆಗೂ ಓಡಾಡುವುದರಿಂದ ಈ ಭಾಗದ ಪ್ರಯಾಣಿಕರಿಗೆ ಇದರಿಂದ ತುಂಬಾ ಅನುಕೂಲವಾಗಿದೆ. ಆದ್ರೆ ಪಟ್ಟಣದಲ್ಲಿರುವ ನೂತನ ರೈಲ್ವೆ ಸ್ಟೇಷನ್ ಸುಮಾರು 1/2 ಕಿ.ಮಿ ಅಂತರದಲ್ಲಿರುವುದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಯಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈಗಾಗಲೆ ಕುಷ್ಟಗಿ ಸಾರಿಗೆ ಘಟಕದಿಂದ ಬಸ್ ನಿಲ್ದಾಣದಿಂದ ರೈಲ್ವೆ ಸ್ಟೇಷನ್ ಯವರೆಗೂ ಬಸ್ ಆರಂಭಿಸಿದ್ದರಿಂದ ಅಲ್ಲಿಯ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿದೆ. ಅದ್ದರಿಂದ ಕುಷ್ಟಗಿಯಿಂದ ಬೆಳಿಗ್ಗೆ 7:30 ಕ್ಕೆ ಬರುವ ಈ ರೈಲ್ವೆ ಹುಬ್ಬಳ್ಳಿಗೆ ಹೊಗುತ್ತಿದೆ. ಕುಕನೂರು ಸಂಗನಾಳ.ಯಲಬುರ್ಗಾ ಸಾರಿಗೆ ಘಟಕದಿಂದ ಬೆಳಿಗ್ಗೆ 06:00 ಘಂಟೆಯಿಂದ ಬಸ್ ನಿಲ್ದಾಣದಿಂದ ಬಿಡುವ ವ್ಯವಸ್ಥೆ ಹಾಗೂ ರಾತ್ರಿ ಹುಬ್ಬಳ್ಳಿಯಿಂದ ಕುಷ್ಟಗಿಗೆ ಬರುವ ರೈಲ್ವೆ ಯಲಬುರ್ಗಾಕ್ಕೆ ರಾತ್ರಿ 8:30ಕ್ಕೆ ಬರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಇಂದು ಸಿಟಿ ಬಸ್ ಬಿಡುವ ವ್ಯವಸ್ಥೆ ಮಾಡಿದರೆ ಪ್ರಯಾಣಿಕರಿಗೆ ತುಂಬಾ ಅನುಕೂಲ. ಆಗುವುದರಿಂದ ಸಾರಿಗೆ ಇಲಾಖೆ ಗಮನ ಹರಿಸಿ ಒಂದು ಬಸ್ ಬಿಡುವ ವ್ಯವಸ್ಥೆ ಮಾಡುವಂತೆ ಪ.ಪಂ ಸದಸ್ಯ ಅಶೋಕ ಅರಕೇರಿ ಆಗ್ರಹ ಮಾಡಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ವೀರಯ್ಯ.ಹೀರೇಮಠ.ಕೊಪ್ಪಳ