ದಲಿತ ಸೂರ್ಯ ಚಳುವಳಿಯ ಪಿತಾಮಹ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ನವರ – ಜಯಂತಿ ಆಚರಣೆ.
ಬಾಗಲಕೋಟ ಜೂ.08

ಪೌರ ಕಾರ್ಮಿಕರ ಮಗನಾಗಿ ಜನಿಸಿದ ಪ್ರೊ, ಬಿ.ಕೃಷ್ಣಪ್ಪ ನವರು ದಲಿತರ ಹಿಂದುಳಿದವರ ಶೋಷಿತರ ಮೇಲೆ ಆಗುತ್ತಿರುವ ದೌರ್ಜನ್ಯ ಕೊಲೆ ಅತ್ಯಾಚಾರಗಳನ್ನು ಮಾಡಿದರು ಕೇಳುವವರಿಲ್ಲದ ಸಂದರ್ಭದಲ್ಲಿ ಸಮಾಜವಾದಿ ಹೋರಾಟಗಾರರಾದ ಪಿ.ಲಂಕೇಶ್ ಪ್ರೊ, ನಂಜುಂಡಸ್ವಾಮಿ ಮುಂತಾದವರೆಲ್ಲರೂ ಸೇರಿಕೊಂಡು 1974ರ ಕಾಲಘಟ್ಟದಲ್ಲಿ ದಲಿತ ಸಂಘರ್ಷ ಸಮಿತಿ ಚಿಂತಕರಾಗಿದ್ದ ವಿ.ಐ.ಎಸ್.ಎಲ್ ರವರು ಸೇರಿಕೊಂಡು ಸಂಘವನ್ನು ನೋಂದಾಯಿಸಿ 1977ರ ಜೂನ್ ತಿಂಗಳಲ್ಲಿ ಚಿಕ್ಕಮಗಳೂರಿನ ಎಲ್ಲಾ ಕಾರ್ಯಕರ್ತರೆಲ್ಲರೂ ಸೇರಿ ಒಂದೆ ಸಂಘಟನೆಯಡಿ ರಾಜ್ಯದಾದ್ಯಂತ ಸಂಘಟನೆ ಮಾಡಲು ನಿರ್ಧರಿಸಿ 1978ರ ಡಿಸೆಂಬರನಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಭೆ ನಡೆಸಿ 1976 ರಲ್ಲಿ ಮೈಸೂರಿನಲ್ಲಿ ಆರಂಭವಾದ ಶೋಷಿತ ಪತ್ರಿಕೆ (ಪಂಚಮ) ಯ ಸಹಯೋಗದಲ್ಲಿ ಹೋರಾಟಕ್ಕಿಳಿದ ಪ್ರೊ, ಬಿ.ಕೃಷ್ಣಪ್ಪ ನವರು ಬಾಬಾ ಸಾಹೇಬ ಅಂಬೇಡ್ಕರರ ತಾತ್ವಿಕ ಸೈದ್ಧಾಂತಿಕ ಹಾದಿಯಲ್ಲಿ ಶೋಷಿತರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ರಾಜ್ಯದಲ್ಲಿರುವ ಪೌರ ಕಾರ್ಮಿಕರ ಹೊರ ಗುತ್ತಿಗೆ ರದ್ದು ಮಾಡಿ ನೇರ ಪಾವತಿಯೊಂದಿಗೆ ಖಾಯಂ ಮಾಡಿಕೊಳ್ಳಲು ಹೋರಾಟ ಮಾಡಿದ್ದು ಅವಿಸ್ಮರಣೀಯ ಎಂದು ತಿಳಿಸುತ್ತಾ ದಲಿತ ಚಳುವಳಿಯ ಪಿತಾಮಹರಾದ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ನವರ 87 ನೇ. ಜಯಂತಿಯನ್ನು ಚಿಕ್ಕಮಗಳೂರಿನ ಡಾ, ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿರುದು ಕಾರ್ಯಕ್ರಮಕ್ಕೆ ನಮ್ಮ ಎಲ್ಲಾ ಕಾರ್ಯಕರ್ತರು, ಗ್ರಾಮ ಮಟ್ಟದ ಪದಾಧಿಕಾರಿಗಳು, ಹೋಬಳಿ & ತಾಲೂಕ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ದಲಿತ ಹಿತ ಚಿಂತಕರು, ಸಾಹಿತಿಗಳು ಸಮಾನ ಮನಸ್ಕರು, ಪೌರ ಕಾರ್ಮಿಕರು ಭಾಗವಹಿಸ ಬೇಕೆಂದು ತಿಳಿಸುತ್ತಾ ಸುದ್ದಿ ಗೊಷ್ಟಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ.ಬಿ ಹೊಸಮನಿ, ಬೆಳಗಾವಿ ವಿಭಾಗೀಯ ಸಂಚಾಲಕರಾದ ಹಣಮಂತ.ಎಚ್ ಹಿರೇಮನಿ, ಬಾಗಲಕೋಟ ಜಿಲ್ಲಾ ಸಂಚಾಲಕರಾದ ಯಮನೂರ.ಸಿ ಹಲಗಿ ಶಿರೂರ, ಯಮನಪ್ಪ.ಪಿ ಭಜಂತ್ರಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನೂರ.ಸಿ ಹಲಗಿ ಬಾಗಲಕೋಟ