“ಪರಿಸರ ಹಸಿರು ವನ ಕವಿಮನಗಳ ಕೃತಿ”…..

ಪ್ರಕೃತಿ ಭೂಮಾತೆಯ ಆಕೃತಿ
ಪರಿಸರ ನಮ್ಮ ಸಂಸ್ಕೃತಿ
ವಯಕ್ತಿಕ ಸ್ವಚ್ಛತೆ ಸ್ವಯಂ ರಕ್ಷಣೆ
ಪರಿಸರ ರಕ್ಷಣೆ ಸರ್ವರ ರಕ್ಷಣೆ
ಗಿಡಮರ ಬೆಳಸುವ ಆದ್ಯತೆ ನಮ್ಮ ಕಾಯಕ
ಪ್ರಕೃತಿಯ ಹಸಿರು ಜೀವಸಂಕುಲಗಳ ಸಾದಕ
ಸಸ್ಯಕುಲ ಬೆಳಸಿ ಜೀವಸಂಕುಲ ಉಳಿಸಿ
ಸರ್ವಜನಮನ ಅರಳಿಸಿ ಬೆಳಗಿಸಿ
ಉಸಿರು ನಿಂತರೆ ಜೀವಾತ್ಮ ಸ್ಥಬ್ಧ
ಹಸಿರು ನಿಂತರೆ ಜಗವೇ ನಿಶಬ್ಧ
ಪ್ರಕೃತಿ ಉಳಿವು ನಮ್ಮೆಲ್ಲರ ನಗುವು
ಸಸ್ಯಸಂಕುಲ ಸಿರಿ ನೆರೆಹೊರೆ ಉಳಿವು
ಪ್ರಕೃತಿ ಮಾತೆಯ ವರ ಸುಫಲ
ಆರೋಗ್ಯಕರ ಜೀವನದ ಸಫಲ
ಪರಿಸರ ಸ್ನೇಹ ಅವಿನಾಭವ ಅನುಬಂಧ
ಮಾನವ ಜೀವಿಗಳ ಸುಂದರ ಬಂಧನ
ಪರಿಸರ ನಿಜ ಆಭರಣ ಹಸಿರು
ಜೀವಸಂಕುಲಗಳ ಜೀವದ ಉಸಿರು
ಮುದೂಡಿದ ಮನಕೆ ಪರಿಸರ ಉತ್ಸಾಹದ ನೆಲೆ
ಬಾಳ ಪಯಣದ ನಿತ್ಯನೂತನದ ಸೆಲೆ
ಹಸಿರಿಲ್ಲದ ವನ ಸ್ಮಶಾನದ ಸಮಾನ
ಪ್ರಕೃತಿ ಹಸಿರು ವನ ಸ್ವರ್ಗದ ಸಮಾನ
ವಂಶವೃಕ್ಷದ ಜೋತೆ ಪ್ರಕೃತಿ ವೃಕ್ಷ ಬೆಳಸಿ
ಪರಿಸರ ರಕ್ಷಣೆ ಜೀವಸಂಕುಲ ಉಳಸಿ
ಉತ್ತಮ ಪರಿಸರ ನಮ್ಮತನದ ಸಂಕೇತ
ನಮ್ಮ ನಿತ್ಯ ಜೀವನೋತ್ಸವದ ಚೇತನ
ವೃಕ್ಷ ಮಾತೆಯ ಬೇರು ವಂಶವೃಕ್ಷದ ಚಿಗುರು
ವಿಶ್ವವು ನೋಡುಗರ ತನಮನ ಬೆರಗು
ನಿತ್ಯ ಪ್ರಕೃತಿ ಜಾಗೃತಿ ಸರ್ವರ ಬಾಳ್ವೇಗೆ ಆಕೃತಿ
“ಪರಿಸರ ಹಸಿರು ವನ ಕವಿಮನಗಳ ಕೃತಿ”
ಹಸಿರು ವನ ಭೂಮಿಯ ಮೇಲಿನ ಸ್ವರ್ಗದ
ಬನ
ಪರಿಸರ ಸ್ನೇಹ ಸುಖಮಯ ಜೀವನದ
ಸೋಪಾನ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿದೇವರ ಹಿಪ್ಪರಗಿ.