ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಖಾಲಿ ಕೊಡ ಹಿಡಿದು ಮಹಿಳೆಯರಿಂದ – ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ.

ಹುಣಶ್ಯಾಳ ಜೂ.09

ದೇವರ ಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಖಾಲಿ ಕೊಡ ಹಿಡಿದು ಮಹಿಳೆಯರು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ ದೇವರ ಹಿಪ್ಪರಗಿ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಮತಿ ಭಾರತಿ ಚಲುವಯ್ಯ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಹುಣಶ್ಯಾಳ ಗ್ರಾಮದ ಮುಖಂಡರಾದ ಟಿಪ್ಪು ಸುಲ್ತಾನ್ ಸಿಪಾಯಿ ಹುಣಶ್ಯಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಗ್ರಾಮದ ವಿಜಯಪುರಗೆ ಹೊಗುವ ಮುಖ್ಯ ರಸ್ತೆ ಕಾಂಕ್ರೀಟ್ ಹಾಕುವುದು, ಚರಂಡಿ ಸ್ವಚ್ಚತಾ, ಗ್ರಾಮದಲ್ಲಿ ಎಲ್ಲಾ ರಸ್ತೆಗಳು ಸುಧಾರಣೆ, ಮಾಡಬೇಕಾಗಿದ್ದು ಗ್ರಾಮ ಪಂಚಾಯತಿ ಸದಸ್ಯರ ಜವಾಬ್ದಾರಿ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ. ಹಾಗೂ ಸಿಬ್ಬಂದಿಗಳ ಮೊಂಡತನ, ದುರಾಡಳಿತ. ಹಾಗೂ ಗಗ್ರಾಮ ಪಂಚಾಯತಿ ಎಲ್ಲಾ ಸಿಬ್ಬಂದಿಗಳಿಗೆ ವರ್ಗಾವಣೆ ಮಾಡಬೆಕು ಒಂದು ವಾರದೊಳಗೆ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದೆ ಇದ್ದರೆ ಗ್ರಾಮ ಪಂಚಾಯತಿಗೆ ಬೀಗ ಜಡಿದು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು, ಈ ಸಂದರ್ಭದಲ್ಲಿ ಶಂಕ್ರೇಪ್ಪ ಬಂಗಾರಗುಂಡ. ಶಪೀಕ ಸಿಪಾಯಿ. ನಿಂಗಪ್ಪ ಪಾಕಿ. ಪರಶುರಾಮ ಬಡಗೇರ. ವಾಜಿದ ಉಸ್ತಾದ. ಮೈನುದ್ದೀನ ಬಾಗವಾನ‌. ಇಬ್ರಾಹಿಂ ಹವಾಲ್ದಾರ. ಮಹ್ಮದ ಬಾಗವಾನ. ಶಕಿಲ ಪೊಲಾಸಿ. ಇರಣ್ಣ ಬಡಗೇರ. ತೌಪಿಕ ಸಿಪಾಯಿ. ಸದ್ದಾಂ ಬಿಂಜಲಬಾವಿ. ಇಸ್ಮಾಯಿಲ್ ಬಡೇಘರ. ಸದ್ದಾಂ ಪೊಲಾಸಿ. ಮುರ್ತುಜ ಸವಾರ. ಗಪ್ಪಾರ ಮೋಮಿನ. ಹಾಗೂ ಗ್ರಾಮದ ಮುಖಂಡರು ನೂರಾರು ಮಹಿಳೆಯರು ಭಾಗವಹಿಸಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button