ಶಾಸಕ ಅಜಯ್ ಸಿಂಗ್ ಯಡ್ರಾಮಿ ವಿರಕ್ತ ಮಠದ – ಆಸ್ತಿ ಕೈ ಬಿಡುವಂತೆ ತಹಶೀಲ್ದಾರರಿಗೆ ಮನವಿ.

ಯಡ್ರಾಮಿ ಜೂ.12

ಪಟ್ಟಣದಲ್ಲಿರುವ ಶ್ರೀ ಸಿದ್ಧಲಿಂಗೇಶ್ವರ ವಿರಕ್ತ ಮಠದ ಆಸ್ತಿಯನ್ನು ಶಾಸಕ ಡಾ, ಅಜಯ್ ಧರ್ಮ ಸಿಂಗ್ ರವರು ತಮ್ಮ ತಾಯಿಯವರಾದ ಪ್ರಭಾವತಿ ಧರ್ಮಸಿಂಗ್ ರವರ ಹೆಸರಿನ ಮೇಲೆ ಖರೀದಿಸಿ ಪಹಣಿ ಮಾಡಿಸಿ ಕೊಂಡಿದ್ದು ಸ್ಥಳೀಯ ಮತ್ತು ಸುತ್ತ ಮುತ್ತಲಿನ ಗ್ರಾಮದ ಭಕ್ತರು ವಿರೋಧ ವ್ಯಕ್ತಪಡಿಸಿ ಶಾಸಕರ ವಿರುದ್ಧ ಕಿಡಿಕಾರಿ ಗರಂ ಆಗಿದ್ದಾರೆ ಒಬ್ಬ ಜನ ಪ್ರತಿ ನಿಧಿ ಯಾಗಿ ಹೀಗೆ ಮಾಡೋದು ಎಷ್ಟರ ಮಟ್ಟಿಗೆ ಸರಿ ಹಣ ಇದ್ದ ಮಾತ್ರಕ್ಕೆ ನೀವು ಏನ್ ಬೇಕಾದ್ರೂ ಮಾಡಬಹುದಾ ಹೇಗೆ ನಿಮಗೆ ಮಿನಿ ವಿಧಾನ ಸೌಧ ಕಟ್ಟಲಿಕ್ಕೆ ನಮ್ಮ ಮಠದ ಆಸ್ತಿನಾ ಬೇಕಾ ಬೇರೆ ಯಾವ್ದು ಬೇಡ್ವಾ ಎಂದು ಪ್ರಶ್ನಿಸಿದರು. ಈಗಾಗಲೇ ಪಟ್ಟಣದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಜಮೀನು ಖಾಲಿ ಬಿದ್ದಿದ್ದು ಈ ಭೂಮಿ ಮಿನಿ ವಿಧಾನ ಸೌಧ ಕಟ್ಟಲು ಎಂದು ಪಹಣಿಯಲ್ಲಿ ದಾಖಲಾಗಿದ್ದು ಆದರೂ ಶಾಸಕರಿಗೆ ನಮ್ಮ ಮಠದ ಆಸ್ತಿಯ ಮೇಲೆ ಕಣ್ಣು ಎಂದು ಆರೋಪಿಸಿದರು. ಸ್ಥಳೀಯ ಗ್ರಾಮದ ಭಕ್ತರಿಗೆ ಕೇಳದೆ ಮಠದ ಕಿರಿಯ ಸ್ವಾಮೀಜಿಯವರಿಗೆ ಮನ ವೊಲಿಸಿ ಆಸ್ತಿ ನೋಂದಣಿ ಮಾಡಿಸಿ ಕೊಂಡಿದ್ದಾರೆ. ಇದಕ್ಕೂ ಮೊದಲು ನಾವು ಸ್ವಾಮೀಜಿಯವರಿಗೆ ಭೇಟಿಯಾಗಿ ಮಠಕ್ಕೆ ಹಣದ ಅವಶ್ಯಕತೆ ಇದೆಯಾ ಇದ್ರೆ ಹೇಳಿ ನಾವೆಲ್ಲಾ ಸೇರಿ ಚಂದ ಪಟ್ಟಿ ಎತ್ತಿ ಪೂರೈಕೆ ಮಾಡುತ್ತೇವೆ ಅಂತಾ ಸ್ವಾಮೀಜಿ ಅವರಿಗೆ ಪ್ರಶ್ನಿಸಿದ್ದೇವೆ. ಈ ಕೂಡಲೇ ನೀವು ಮ್ಯೂಟೇಶಟೇಶನ್ ತಡೆಯುವಂತೆ ಮಠದಲ್ಲಿ ಸ್ವಾಮೀಜಿಯವರಿಗೆ ಮನವಿ ಮಾಡಿದ್ದೇವೆ.ಶಾಸಕರು ಈ ಕೂಡಲೇ ಮಠದ ಆಸ್ತಿ ಕೈ ಬಿಡುವಂತೆ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ರವರಿಗೆ ಮನವಿ ಸಲ್ಲಿಸಿದರು.ಒಂದು ವೇಳೆ ಶಾಸಕರು ಮತ್ತು ಸ್ವಾಮೀಜಿಯ ಇಬ್ಬರು ಸೇರಿ ಮಠದ ಆಸ್ತಿ ಉಳಿಸದಿದ್ದರೆ ಅಥವಾ ಶಾಸಕರು ಮಠದ ಆಸ್ತಿ ಕೈ ಬಿಡ್ಲಿಲ್ಲ ಅಂದ್ರೆ ಯಡ್ರಾಮಿ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ಆಗ್ರಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ.ಎನ್.ನೀಲಕೋಡ.ಇಜೇರಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button