ಮನಸ್ಸಿಗೆ ಸಕಲವನ್ನೂ ಸಾಧಿಸುವ ಅದ್ಭುತ ಶಕ್ತಿಯಿದೆ – ಚೇತನ್ ಕುಮಾರ್.
ಚಳ್ಳಕೆರೆ ಜೂ.12

ನಮ್ಮ ಮನಸ್ಸಿಗೆ ಸಕಲವನ್ನೂ ಸಾಧಿಸುವ ಅದ್ಭುತವಾದ ಶಕ್ತಿಯಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಚೇತನ್ ಕುಮಾರ್ ಅಭಿಪ್ರಾಯ ಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದ ಆರಂಭದಲ್ಲಿ ಭಜನೆಯನ್ನು ಯತೀಶ್.ಎಂ ಸಿದ್ದಾಪುರ ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ಆರತಿ ಮತ್ತು ಸಂನ್ಯಾಸಿ ಗೀತೆ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಮಾತಾಜೀ ತ್ಯಾಗಮಯೀ, ಮಾತಾಜೀ ಜ್ಯೋತ್ಸ್ನಾಮಯೀ, ಜಿ.ಯಶೋಧಾ ಪ್ರಕಾಶ್, ಸಂತೋಷಕುಮಾರ್, ಋತಿಕ್, ಪುಷ್ಪಲತಾ, ಸಂಜನ, ತಪಸ್ವಿನಿ, ಸಂಧ್ಯಾ, ರಶ್ಮಿ, ವಾಣಿ, ದಾನೇಶ್ವರಿ, ಸಹನಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.