ಕ್ಷೇತ್ರದ ಅಭಿವೃದ್ಧಿ ಹರಿಕಾರ ವಿವಿಧ ಗ್ರಾಮಗಳಿಗೆ ₹6 ಕೋಟಿ ವೆಚ್ಚದ ರಸ್ತೆಗಳನ್ನು – ಭೂಮಿ ಪೂಜೆ ಮಾಡಿದಂತ ಶಾಸಕರು.
ಮೊಳಕಾಲ್ಮುರು ಜೂ.12

ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಸುಮಾರು ₹6 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
1)ಸೂರಮ್ಮನಹಳ್ಳಿ :- ಚಿಕ್ಕೋಬನಹಳ್ಳಿ, ತುಮಕೂರ್ಲಳ್ಳಿ ಉಡೇವು ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಗ್ರಾಮದಿಂದ ಹರಿವಿನದೊಡ್ಡಿ ರಸ್ತೆ ಅಭಿವೃದ್ಧಿ ಕಾಮಗಾರಿ ₹2 ಕೋಟಿ.
2)ಚಿಕ್ಕುಂತಿ ಹತ್ತಿರ ಜಿನಗಿ ಹಳ್ಳಕ್ಕೆ ಚೆಕ್ ಡ್ಯಾಮ್ ನಿರ್ಮಾಣ ₹2 ಕೋಟಿ.
3)ರಾಜ್ಯ ಹೆದ್ದಾರಿ ಸಿ2 ಸಿದ್ದಯ್ಯನ ಕೋಟೆಯಿಂದ ಯರೇನಹಳ್ಳಿ ಕ್ರಾಸ್ ವರೆಗೆ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ₹2 ಕೋಟಿ.
ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಇಲಾಖೆಯ ಅಧಿಕಾರಿಗಳು ಪ್ರಮುಖರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು