ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿ ನಿಧಿಸಿದ – ಕುಮಾರಿ ಹಿಮಜ.
ಕೂಡ್ಲಿಗಿ ಜೂ.10

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರತಿಭೆ ಇಡೀ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತಂದ ಹಿಮಜ ದಿನಾಂಕ 07.06.2025 ರಂದು ವಿಯೆಟ್ನಾಂ ದೇಶದ ಹೊಚಿಮಿನ್ ನಗರದಲ್ಲಿ ನಡೆದ ಎರಡನೇ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿ ನಿಧಿಸಿ ವಿಜಯನಗರ ಕೂಡ್ಲಿಗಿ ತಾಲೂಕಿನ ನಾಗರಾಜ್ ಕೊಟ್ರಪ್ಪನವರ ಇವರ ಮಗಳಾದ ಹೆಮ್ಮೆಯ ಯೋಗಪಟು ಕುಮಾರಿ ಹಿಮಜ ಇವರು ಸಾಂಪ್ರದಾಯಿಕ ಯೋಗಾಸನ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿರುವುದು ದೇಶ ರಾಜ್ಯ ಮತ್ತು ಜಿಲ್ಲೆಗೆ ತಾಲೂಕಿಗೆ ಹೆಮ್ಮೆಯ ಸಂಗತಿ ಸದರಿ ಸ್ಪರ್ಧೆಯಲ್ಲಿ 19 ದೇಶದಿಂದ ಸುಮಾರು 450 ಕ್ಕೂ ಹೆಚ್ಚು ಯೋಗ ಪಟುಗಳು ಸ್ಪರ್ಧಿಸಿದ್ದು ಕುಮಾರಿ ಕೆ.ಎನ್ ಹಿಮಜ ಅವರ ಕಳೆದ ಮೂರು ವರ್ಷಗಳ ಅದ್ಭುತ ಸಾಧನೆ ಪರಿಗಣಿಸಿ ಅಂತರಾಷ್ಟ್ರೀಯ ಜಾಗತಿಕ ಯೋಗ ಶ್ರೇಷ್ಠ ಪ್ರಶಸ್ತಿ 2025 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಮಾರಿ ಕೆ.ಎನ್ ಹಿಮಜ ರವರು ವಿಯೆಟ್ನಾಂ ದೇಶದ ಹೋಚಿಮಿನ್ ಸಿಟಿಯಲ್ಲಿ ನಡೆದ 2 ನೇ .ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿTraditional Yogasana, Junior Girls ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.

ಈ ಹಿಂದೆ 7 ನೇ. ತರಗತಿಯ ವರೆಗೆ ಶ್ರೀ ಶಾರದಾ ಪ್ರಾಥಮಿಕ ಶಾಲೆ, ಕೂಡ್ಲಿಗಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ್ದಾರೆ, ಚಿಕ್ಕ ವಯಸ್ಸಿ ನಿಂದಲೇ ಅಜ್ಜಿ ಗೌರಮ್ಮ ಬ್ಯಾಳಿ ಇವರ ಪ್ರೇರಣೆಯಿಂದ ಯೋಗಾಭ್ಯಾಸ ಕೈಗೊಂಡು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಹಲವು ಕಡೆ ಯೋಗ ಪ್ರದರ್ಶನ ನೀಡಿ ಬಹುಮಾನ ಪಡೆದು, ಪ್ರಾಣಾಯಾಮ, ಯೋಗ ಅಭ್ಯಾಸ ಮಾಡಿದ್ದು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿದ್ದು ಪಾಲಕರಿಗೆ ಸಂತೋಷ ನೀಡಿದೆ. ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆ, ಮೂಡುಬಿದರೆಯಲ್ಲಿ 8 ನೇ. ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ, ಹಿಮಜಳ ಯೋಗ ಸಾಧನೆ ಗಮನಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯವರು ಉಚಿತ ವಸತಿಯುತ ಶಿಕ್ಷಣ ನೀಡುತ್ತಿದ್ದಾರೆ. ಶ್ರೀ ಶಾರದಾ ಪ್ರಾಥಮಿಕ ಶಾಲೆ, ಕೂಡ್ಲಿಗಿಯ ಮುಖ್ಯ ಗುರುಗಳು, ಶಿಕ್ಷಕರು, ಆಡಳಿತ ಮಂಡಳಿಯ ಸಹಕಾದಿಂದ ಮತ್ತು ಯೋಗ ತರಬೇತುದಾರರಾದ ಕು.ನಿರ್ಮಲ ಸುಭಾಷ್ ಕೊಡ್ಲಿಕರ್, ಹಾಗೂ ಪ್ರೇಮ್ ಕುಮಾರ್ ಮುದ್ದಿ ರವರ ಮಾರ್ಗದರ್ಶನದಲ್ಲಿ ಭಾರತದ ತಂಡ ಸಾಧನೆ ಮಾಡಿದ್ದಾರೆ ನಾಗರಾಜ್ ಕೊಟ್ರಪ್ಪನವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು. ಕುಮಾರಿ ಹಿಮಜ ಇವರಿಗೇ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ, ಎನ್.ಟಿ. ಶ್ರೀನಿವಾಸ್ ಇವರು ಸಹ ಶುಭ ಹಾರೈಸಿದರು ಹಾಗೂ ಎಲ್ಲಾ ವೀರಶೈವ ಮುಖಂಡರು ನೌಕರ ಘಟಕ ಸರಕಾರಿ ನೌಕರರು ಶುಭ ಹಾರೈಸಿದರು ಎಂದು ತಿಳಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ