ವಿಶ್ವ ಪರಿಸರ ದಿನಾಚರಣೆ, ವನ ಮಹೋತ್ಸವಕ್ಕೆ – ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಚಾಲನೆ.

ಚಿಕ್ಕ ಜೋಗಿಹಳ್ಳಿ ಜೂ.13

ಮರ ಗಿಡಗಳನ್ನು ಬೆಳೆಸುವ ಮೂಲಕ ನಮ್ಮ ಪರಿಸರವನ್ನು ಕಾಪಾಡಿ ಕೊಳ್ಳುವ ಜವಾಬ್ದಾರಿ ಎಲ್ಲಾರ ಮೇಲಿದೆ ಎಂದು ಶಾಸಕ ಡಾ, ಶ್ರೀನಿವಾಸ್ ಎನ್.ಟಿ. ಹೇಳಿದರು. ಚಿಕ್ಕಜೋಗಿಹಳ್ಳಿಯಲ್ಲಿನ ಪಿ.ಎಂ ಶ್ರೀ ಜವಹರ್ ನವೋದಯ ವಿದ್ಯಾಲಯದಲ್ಲಿ ಕೂಡ್ಲಿಗಿ ಸಾಮಾಜಿಕ ಅರಣ್ಯ ಮತ್ತು ಕೂಡ್ಲಿಗಿ, ಗುಡೇಕೋಟೆ ವಲಯ ಅರಣ್ಯ ಇಲಾಖೆಗಳಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಗಿಡಗಳನ್ನು ನೆಟ್ಟರೆ ಸಾಲದು, ಅವುಗಳಿಗೆ ನೀರುಣಿಸಿ, ಪೋಷಣೆ ಮಾಡುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ನೆಟ್ಟಂತಹ ಪ್ರತಿ ಗಿಡವೂ ಮರವಾಗಿ ಬೆಳೆಯಬೇಕು. ಆಗದಾಗ ಮಾತ್ರ ಗಿಡ ನೆಟ್ಟಿದ್ದಕ್ಕೆ, ಬೆಳಸಿದ್ದಕ್ಕೆ ಸಾರ್ಥಕವಾಗುತ್ತದೆ. ನಿಮ್ಮ ಹಾಗೆಯೇ ನಾನು ಗ್ರಾಮೀಣ ಭಾಗದಿಂದ ಬಂದಿದ್ದೇನೆ.‌ ಕಠಿಣ ಪರಿಶ್ರಮ ಮತ್ತು ಆಸಕ್ತಿಯಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತು ಈ ಮಟ್ಟಕ್ಕೆ ಬೆಳೆದಿರುವೆ. ನಮ್ಮಲ್ಲಿ ಬಡತನ ಇದೆ ಎಂದೂ ಕುಗ್ಗಬಾರದು. ಸಿಕ್ಕ ಅವಕಾಶ ಬಳಸಿಕೊಂಡು ಐ.ಎ.ಎಸ್ ಹಾಗೂ ಉನ್ನತ ಹುದ್ದೆಗಳನ್ನು ಪಡೆಯುವ ಕಡೆ ಗುರಿ ಇಟ್ಟು ಕೊಳ್ಳುವ ನಿಟ್ಟಿನಲ್ಲಿ ದೇಶದ ಭವಿಷ್ಯದ ಕಡೆ ಗಮನ ಹರಿಸಬೇಕು ಎಂದರು.ಈ ಸಂದರ್ಭದಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೆ.ಟಿ ಲತಾ, ವಲಯ ಅರಣ್ಯಾಧಿಕಾರಿಗಳಾದ ಕೂಡ್ಲಿಗಿಯ ಸಂದೀಪ್ ನಾಯಕ್, ಗುಡೇಕೋಟೆಯ ಜಗದೀಶ್ ಮೇದಾ, ಮಾಕನಡಕು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಎಂ.ಸಿ ಆಶೋಕ ನಾಯ್ಕ್, ಸದಸ್ಯರಾದ ಓಬಣ್ಣ, ರಾಜೇಶ್ ನಾಯ್ಕ್ ಜೆ.ಎಂ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್, ರಾಮಚಂದ್ರಪ್ಪ ಗ್ರಾ.ಪಂ ಮಾಜಿ ಅಧ್ಯಕ್ಷರು ಹೂಡೇಂ, ಎಚ್ ಕೆ ಹಟ್ಟಿ ಸುರೇಶ್, ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯ ಸುದೇಶ ಗೋಪಾಲ್ ಮಲ್ಜುರೆ ಹಾಗೂ ಸಿಬ್ಬಂದಿ, ಆರಣ್ಯ ಇಲಾಖೆ ಸಿಬ್ಬಂದಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ಯಾಮ್, ವಿಸ್ತೀರಣಾಧಿಕಾರಿ ಟಿ. ಆಹಮದ್ ಸವೇಬ್, ವಸತಿ ನಿಲಯದ ಮೇಲ್ವೀಚರಕಿ ಆರ್.ಬಿ. ಕೊಟ್ರಮ್ಮ, ಕುಮಾರಸ್ವಾಮಿ, ಅಂಜಿನಪ್ಪ, ನಿಂಗಣ್ಣ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ. ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button