ತಾಲೂಕಿನ ವಕೀಲರ ಸಂಘದ ಸರ್ವ ಸದಸ್ಯರುಗಳು ವಕೀಲರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ – ತಹಶೀಲ್ದಾರ್ ಅವರಿಗೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಕುಷ್ಟಗಿ ಜೂ.13

ಅಖಿಲ ಭಾರತ ವಕೀಲರ ಒಕ್ಕೂಟ ವತಿಯಿಂದ ಕುಷ್ಟಗಿ ತಾಲೂಕಿನ ವಕೀಲರ ಸಂಘದ ಸರ್ವ ಸದಸ್ಯರುಗಳು ವಕೀಲರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕುಷ್ಟಗಿ ತಾಲೂಕಿನ ತಹಶೀಲ್ದಾರ್ ಅವರಿಗೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಬೇಡಿಕೆಗಳು:-
1) ಪೊಲಿಸರ ಏಕ್ ಪಕ್ಷೀಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೆಕು. ಮತ್ತು ವಕೀಲರ ಸಂರಕ್ಷಣಾ ಕಾಯ್ದೆ 2024 ಕ್ಕೆ ಸೂಕ್ತ ತಿದ್ದುಪಡೆ ಯಾಗಬೇಕು. ಸರ್ವೋಚ್ಚ ನ್ಯಾಯಾಲಯದ ಮತ್ತು ಉಚ್ಚ ನ್ಯಾಯಾಲಯದ ಮಾರ್ಗ ಸೂಚಿಯನ್ನು ಪಾಲಿಸ ಬೇಕು.
2) ಅಖಂಡ ಅಖಿಲ ಭಾರತ ಬಾರ ಪರೀಕ್ಷೆ (AIBE) ರದ್ದು ಪಡಿಸಬೇಕು.
3) ಕಿರಿಯ ವಕೀಲರಿಗೆ 2 ವರ್ಷಗಳ ಕಾಲ ರೂ. ಮಾಸಿಕ 10,000/- ಸ್ಟೈಫಂಡ (ಸಹಾಯಧನ) ನೀಡಬೇಕು.
4) ರಾಜ್ಯದ ಎಲ್ಲಾ ತಾಲೂಕಾ ವಕೀಲರ ಸಂಘಗಳಿಗೆ ಮಾಸಿಕ ರೂ. 5,00,000 ಲಕ್ಷ ಮತ್ತು ಜಿಲ್ಲಾ ವಕೀಲರ ಸಂಘಗಳಿಗೆ ರೂ. 10,000,00/- ಅನುದಾನ ಮಂಜೂರ ಮಾಡಬೇಕು. ರಾಜ್ಯ ಸರಕಾರವು ವಕೀಲರಿಗೆ ಕಡ್ಡಾಯವಾಗಿ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯವನ್ನು ಒದಗಿಸಬೇಕು.

5) ವಕೀಲರಿಗೆ ಟೋಲ್ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸ ಬೇಕು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕಛೇರಿಯನ್ನು ವಿಭಾಗೀಯ ಮಟ್ಟದಲ್ಲಿ ಸ್ಥಾಪಿಸ ಬೇಕು.
6) ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ವಕೀಲರ ಅಕ್ಯಾಡೆಮಿಗಳನ್ನು ಸ್ಥಾಪಿಸಬೇಕು.
7) ಕರ್ನಾಟಕ ರಾಜ್ಯದಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸ ಬೇಕು ಮತ್ತು ಈಗಿರುವ ನ್ಯಾಯಾಲಯಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
8) ರಾಜ್ಯದಲ್ಲಿನ ಎಲ್ಲಾ ನ್ಯಾಯಾಲಯಗಳ ಆವರಣದಲ್ಲಿ ವಕೀಲರಿಗೆ ಚೆಂಬರ್ ಗಳನ್ನು ವ್ಯಾಪಿಸ ಬೇಕು.
9) ರೆವೆನ್ಯೂ ಎಸಿ,ಡಿಸಿ ನ್ಯಾಯಾಲಗಳಲ್ಲಿ ನಡೆಯುವ ಕಂದಾಯ ಪ್ರಕರಣಗಳಲ್ಲಿ, ಬೆರೆ ಬೆರೆ ರೀತಿಯ ಒತ್ತಡಗಳು ಮತ್ತು ವಿಳಂಬದ ಕಾರಣ ಸರಿಯಾಗಿ ವಿಚಾರಣೆ ಮಾಡದೆ ಸಕ್ರಮದ ತಿರ್ಪುಗಳು ಆಗದೆ ಇರುವದರಿಂದ ಕಂದಾಯ ಪ್ರಕರಣಗಳನ್ನು ಸಿವಿಲ್ ನ್ಯಾಯಾಲಗಳಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳ ಬೇಕು.
ಈ ಮೇಲ್ಕಂಡ ನಮ್ಮೆಲ್ಲಾ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಕೆಗಾಗಿ ಸರ್ಕಾರ ತೀವ್ರ ಕ್ರಮ ವಹಿಸಿರಿ ಅಂತಾ ಈ ಸಂದರ್ಭದಲ್ಲಿ ಶ್ರೀ ಸಿ.ಪಿ ಪಾಟೀಲ್ ಹಿರಿಯ ವಕೀಲರು, ಆರ್.ಕೆ ದೇಸಾಯಿ, ಹಿರಿಯ ವಕೀಲರು, ಶಿವಕುಮಾರ ದೊಡ್ಡಮನಿ ಮಾಜಿ ಉಪಾಧ್ಯಕ್ಷರು, ವಕೀಲರು ವಿರೇಶ ನಾಲತವಾಡ ವಕೀಲರು, ರಾಮಣ್ಣ ಮೇಟಿ, ಬಿ.ಆರ್ ಪಾಟೀಲ್ ವಕೀಲರು, ಎಸ್.ಎನ್ ನಾಯಕ್ ವಕೀಲರು, ರಾಜೇಂದ್ರ ಮೂಲಿಮನಿ ವಕೀಲರು, ಹುಲುಗಪ್ಪ ಚೂರಿ ವಕೀಲರು, ನಿತಿಶ್ ಕುರಿ ವಕೀಲರು, ಹಾಗೂ ತಾಲೂಕಿನ ಮುಂತಾದ ಎಲ್ಲಾ ವಕೀಲರು ಹಾಜರಿದ್ದರು ಎಂದು ವರದಿಯಾಗಿದೆ.