ನರೇಗಾ ಕೂಲಿ ಕೆಲಸ ಮಾಡದಿದ್ದರೂ ಇಲ್ಲಿ ಕಾರ್ಮಿಕರಿಗೆ – ಪೇಮೆಂಟ್ ಪಾವತಿಯಾಗುತ್ತೆ.
ಸೀಕಲ್ ಜೂ.14

ಮಾನ್ವಿ ತಾಲೂಕಿನ ಸಾದಾಪುರ ಗ್ರಾಮ ಪಂಚಾಯತಿಯಲ್ಲಿ ಕೋಟಿ ಗಟ್ಟಲೆ ಅಭಿವೃದ್ಧಿ ಕಡತದಲ್ಲಿ ಮಾತ್ರ ಇದೆ, ಆದರೆ ವಾಸ್ತವವಾಗಿ ನೋಡಿದರೆ ಇಲ್ಲಿ ಕಳಪೆ ಕಾಮಗಾರಿ ಮಾಡಿ ಪಿಡಿಓ ಫ್ರಭುವಿನ ಕೃಪಾಕಟಾಕ್ಷ ದಿಂದ ಲೂಟಿಯಾಟ ನಡೆದಿರುವುದು ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಾದಾಪುರ ಗ್ರಾಮ ಪಂಚಾಯತಿಗೆ ನರೇಗಾ ಯೋಜನೆ ಅಡಿಯಲ್ಲಿ ಕೋಟಿ ಗಟ್ಟಲೆ ಅನುದಾನ ಬಳಕೆಯಾಗಿದೆ, ಆದರೆ ನರೇಗಾ ಕೆಲಸ ಮಾಡದ ಕೂಲಿಕಾರರಿಗೆ ಹಣ ಪಾವತಿ ಮಾಡುವ ದಂಧೆ ನಡೆದಿದೆ ಎಂದು ಸೀಕಲ್ ಗ್ರಾಮಸ್ಥರ ಆರೋಪವಾಗಿದೆ.
ಮಾನ್ವಿ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಸಾಹೇಬ್ರೆ ತಾವು ಮೇಲಿನ ಅಧಿಕಾರಿಗಳು ಇದ್ದೀರಾ ಪಂಚಾಯತಿ ಪಿಡಿಓ ಪ್ರಭು ಸಾಹೇಬ್ರು ಕೂಲಿ ಕೆಲಸ ಮಾಡದ ವ್ಯಕ್ತಿಗಳಿಗೆ ನರೇಗಾ ಹಣ ಸಂದಾಯ ಮಾಡುತ್ತಾರೆ. ಅಂದರೆ ಇದು ಯಾವ ಲೆಕ್ಕ ಸ್ವಾಮಿ, ನರೇಗಾ ಯೋಜನೆಯ ಹಣ ಅಧಿಕಾರಿಗಳಿಂದಲೇ ಲೂಟಿ ಯಾಗುತ್ತದೆ ಅಂದರೆ ಇಂತಹ ಅಧಿಕಾರಿಗಳನ್ನ ವಿಧಾನ ಸಭೆಯಲ್ಲಿ ಸನ್ಮಾನ ಮಾಡಬೇಕು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ