ಗ್ರಾಮದ ವಾರ್ಡ್ ನಂ.1 ರಲ್ಲಿ ರಸ್ತೆಯೇ ಇಲ್ಲಾ, ವಿದ್ಯುತ್ ಇಲ್ಲಾ – ಸಾರ್ವಜನಿಕರ ಆರೋಪ.
ಸುಂಕೇಶ್ವರ ಜೂ.14

ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಸರಕಾರ ಕೋಟಿ ಗಟ್ಟಲೆ ಅನುದಾನ ನೀಡುತ್ತದೆ. ಆದರೆ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮದ ವಾರ್ಡ್ ನಂಬರ್ 1 ರಲ್ಲಿ ಚರಂಡಿ ತುಂಬಿದ ರಸ್ತೆಯಲ್ಲಿಯೇ ಜನರು ಸಂಚಾರ ಮಾಡಬೇಕಾದ ದುಃಸ್ಥಿತಿ ಬಂದಿದ್ದು, ಪಿಡಿಓ ನಾಗಭೂಷಣರ ದುರಾಡಳಿತ ಮತ್ತೊಂದು ಬಯಲಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮದ ಜನರು ಮುಗ್ಧರಿದ್ದಾರೆಂದು ಅರಿತುಕೊಂಡು ಪಿಡಿಓ ನಾಗಭೂಷಣ ಪಂಚಾಯತಿಗೆ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಬರುತ್ತಿದ್ದರಿಂದ ಜನರಂತು ಸಮಸ್ಯೆಗಳನ್ನು ಯಾರ ಮುಂದೆ ಹೇಳಬೇಕು ಎಂದು ತಿಳಿಯದಾಗಿದ್ದರಿಂದ ಪಿಡಿಓ ನಾಗಭೂಷಣಗೆ ಇಡೀ ಶಾಪ ಹಾಕುತ್ತಿದ್ದಾರೆ.
ಮಾನ್ವಿ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಸಾಹೇಬ್ರೆ ಪಿಡಿಓ ನಾಗಭೂಷಣರ ದುರಾಡಳಿತವನ್ನು ಕಂಡು ತಾವು ಕ್ರಮ ಜರುಗಿಸುವಿರಾ ಅಥವಾ ನಮಗ್ಯಾಕೆ ಬೇಕು ಎಂದು ಪಿಡಿಓ ನಾಗಭೂಷಣಗೆ ಪ್ರಶಸ್ತಿ ಕೊಟ್ಟು ಸನ್ಮಾನಿಸುವಿರಾ…..? ಎಂದು ಸುಂಕೇಶ್ವರ ಗ್ರಾಮದ ಸಾರ್ವಜನಿಕರ ಕೂಗಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ