“ತ್ಯಾಗಮಯಿ ತಾಯಿ”…..

ತಾಯಿಯ ಮಡಿಲೇ ಸ್ವರ್ಗದ ತೊಟ್ಟಲಿನ
ಸೋಪಾನ
ನಡೆಸುವಳು ಕೈ ಹಿಡಿದು ಎಚ್ಚರದಿ ಜೋಪಾನ
ಬೆಳೆಸಿ ರಕ್ಷಿಸುತಿಹಲು ಕಣ್ಣಿನ ರೆಪ್ಪೆಯಂತೆ
ತಾಯಿಯ ಕೈ ತುತ್ತೆ ಜೇನಿನ ಸಿಹಿಯೇ
ನಾಚುವಂತೆ.
ಉಸಿರು ಹೆಸರು ಬದುಕು ಕೊಡುವವಳು
ಹಸಿದಾಗ ಹಸಿವ ನೀಗಿಸುವವಳು
ಎಲ್ಲವನ್ನು ಸಹಿಸಿ ಸಲುವವಳು
ತಪ್ಪು ಮಾಡಿದಾಗ ತಿದ್ದಿ ತೀಡುವವಳು.
ಬೈಗುಳದಲ್ಲೂ ಪ್ರೀತಿ ಕೊಡುವವಳು
ಬದುಕಿನ ನೀತಿ ನಿಯಮಗಳ ಕಲಿಸುವವಳು
ಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಲ್ಲುವವಳು
ನಾವು ಗೆದ್ದಾಗ ತಾನೆ ಗೆದ್ದಂತೆ
ಸಂಭ್ರಮಿಸುವವಳು.
ನಾವು ಸೋತಾಗ ಆತ್ಮಸ್ಥೈರ್ಯ
ತುಂಬುವವಳು
ನೋವಿನಲ್ಲೂ ನಗುವ ಹಂಚುವವಳು
ಅಂತರಂಗದಲ್ಲಿ ಕಲ್ಮಶವಿಲ್ಲದವಳು
ಕನಸಿನಲ್ಲೂ ನಮ್ಮನ್ನು ಕಾಯುವಳು
ಅನಂತವನ್ನೇ ಮೀರಿದ ಮುಗಿಲು
ಪೂಜಿಸೋ ದೇವರಿಗಿಂತ ಮಿಗಿಲು
ಹೃದಯ ಮಿಡಿತಕ್ಕೆ ಅಪ್ಪುಗೆಯ ಹೆಗಲು
ಭಾನು ಭುವಿಯ ಅಂತರಕ್ಕಿವಳೇ ಆಸರೆ
ತೊಟ್ಟಿಲು.
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ – 9980180487