ಕ್ಷೇತ್ರದ ಮತದಾರರಿಂದ ಅರ್ಜಿಗಳ ಮುಖಾಂತರ – ಅಹವಾಲಗಳನ್ನು ಸ್ವೀಕರಿಸಿದ ಶಾಸಕರು.
ರಾಂಪುರ ಜೂ.15

ಇಂದು ಜನಪ್ರಿಯ ಶಾಸಕರಾದ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ರಾಂಪುರ ನಿವಾಸದಲ್ಲಿ ಕ್ಷೇತ್ರದ ಸಾರ್ವಜನಿಕರನ್ನು ಭೇಟಿಯಾಗಿ ನಿಮ್ಮ ಗ್ರಾಮಗಳಿಗೆ ಯಾವ್ಯಾವ ಕೆಲಸ ಆಗಬೇಕು ಆ ಕೆಲಸ ಎಲ್ಲಾ ಸಾರ್ವಜನಿಕರಿಗೆ ಅನುಕೂಲವಾಗಬೇಕು ಅಂತಹ ಕೆಲಸಗಳನ್ನು ನೀವು ಅರ್ಜಿಯ ಮುಖಾಂತರ ಕೊಡಿ ನಾನು ಸರ್ಕಾರದಿಂದ ಮಂಜೂರು ಮಾಡಿಸಿ ಅನುದಾನವನ್ನು ಬಿಡುಗಡೆ ಮಾಡಿಸಿ ಯೋಜನೆಗಳನ್ನು ರೂಪಿಸುತ್ತೇನೆ.

ಶಿಕ್ಷಣ ಆರೋಗ್ಯ ವಿದ್ಯುತ್ ದೀಪ ರಸ್ತೆಗಳು ಚೆಕ್ ಡ್ಯಾಮ್ ಕೆರೆ ಕಟ್ಟೆಗಳು ರೈತರಿಗೆ ಕೃಷಿ ಯಂತ್ರೋಪಕರಣಗಳು ಬೀಜ ಗೊಬ್ಬರ ತಾಡ್ಪಲ್ಗಳು ಸರ್ಕಾರದಿಂದ ಮಂಜೂರು ಮಾಡಿಸಿ ನಿಮ್ಮ ಗ್ರಾಮಗಳಿಗೆ ತಲುಪಿಸುತ್ತೇನೆ ಎಂದು ಶಾಸಕರು ತಿಳಿಸಿದರು. ಗ್ರಾಮದ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದ ಶಾಸಕರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು.