ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಲಿಖಿತ ಭರವಸೆ ಮೇಲೆ – ಧರಣಿ ಹಿಂಪಡೆದರು.

ಗೂಡುರ ಜೂ.16

ಇಲಕಲ್ಲ ತಾಲೂಕಿನ ಗುಡೂರ ಎಸ್/ಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಡ ನಿರ್ಗತಿಕರಿಗೆ ನಿವೇಶನೆ ಮತ್ತು ವಸತಿ ಪೂರೈಸುವ ಕುರಿತು.

ದಿನಾಂಕ:- 12/6/2025 ರಂದು ಗುಡೂರ ಎಸ್/ಸಿ ಗ್ರಾಮದ ಸಮಸ್ತ ಬಡ ನಿರ್ಗತಿಕ ಕಾರ್ಮಿಕರು ಗುಡೂರ ಎಸ್/ಸಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಹಾಗೂ ತಾಲೂಕ ಪಂಚಾಯತ ಪಂಚಾಯತ ಕಾರ್ಯಾಲಯಕ್ಕೆ ಮತ್ತು ಜಿಲಾ ಪಂಚಾಯತ ಕಾರ್ಯಾಲಯಗಳಿಗೆ ನಿವೇಶನ ಮತ್ತು ವಸತಿ ಸೌಲಭ್ಯಗಳನ್ನು ಗ್ರಾಮ ಪಂಚಾಯತಿಗೆ ಸಂಬಂಧಪಟ್ಟ ಜಮೀನ 8 ಎಕ್ರೆ ಇಂದ 10 ಎಕ್ಕರೆ ಜಮೀನ ಇದ್ದರು.

ಕೂಡ ಗ್ರಾಮದ ಬಡ ನಿರ್ಗತಿಕರಿಗೆ ನಿವೇಶನ ಮತ್ತು ವಸತಿ ಸೌಕರ್ಯ ನೀಡಲಿಕ್ಕೆ ಪಂಚಾಯತಿಯವರು ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಧರಣಿ ನಿರತ ಮಹಿಳೆಯರಾದ ಶ್ರೀ ಮತಿ ಕೌಸರ ಬಳ್ಳಾರಿ, ನಾಗವ್ಯ ಮಾರನಕ್ಕೂಳದ ಆಸ್ಮಾತಾ ಸೇದ ಶಿವವ ಕುರಿ ರೆಷ್ಮಾಗಣಪೊರಿ ಬಸವ ಮಂತ್ರಿ.ರೇಷ್ಮ ಗಣಿ. ಷ ಣ್ಮುಕವ್ವ.ತಿಲಗರ. ದಾವಲಬಿ ಮುಲ್ಲಾ ಹಾಗೂ ಗುಡೂರಿನ. ಬಡ ಕೂಲಿ ಕಾರ್ಮಿಕರು ಆಗ್ರಹಿಸಿ ತಿಳಿಸಿದರು.

ಇದಕ್ಕೆ P.D.0 ಅಧಿಕಾರಿಗಳಾದ ಬಸವರಾಜ ರೇವಡಿ. ಮತ್ತು ಅಧ್ಯಕ್ಷರಾದ ಶಶಿಧರ ಮ್ಯಾಗೇರಿ ಉಪಾದ್ಯಕ್ಷರಾದ ಶಶಿಕಲಾ ಮಿಟ್ಟಲಕೊಡ ಹಾಗೂ ಸರ್ವ ಸದಸ್ಯರು ಹಾಗೂ ಪೋಲಿಸ್ ಇಲಾಖೆಯ ಎ.ಎಸ್.ಐ ಅಧಿಕಾರಿಗಳು. ಮತ್ತು ಅವರ ಸಿಬ್ಬಂದಿಗಳು ಹಾಗೂ ಧರಣಿ ನಿರತ ಕಾರ್ಮಿಕರು ಸಮ್ಮುಖದಲಿ ಗ್ರಾಮ ಪಂಚಾಯತಗೆ ಸಂಬಂಧಪಟ್ಟ ಜಮೀನುಗಳಲ್ಲಿ ನಿಮ್ಮ ಬೇಡಿಕೆಯ ಪ್ರಕಾರ ನಮ್ಮ ಮೇಲಾಧಿಕಾರಿಗಳಿಗೆ ಈ ವಿಷಯದ ಬಗ್ಗೆ ಲಿಖಿತವಾಗಿ ತಿಳಿಸಿ ಮುಂದಿನ 15 ದಿನಗಳಲ್ಲಿ ನಿಮ್ಮ ಬೇಡಿಕೆಯ ಬಗ್ಗೆ ನಿರ್ಣಯ ತೆಗೆದು ಕೊಂಡಿರುವ ಬಗ್ಗೆ ತಿಳಿಸುತ್ತೇನೆ. ಅಂತಾ ಲಿಖಿತವಾಗಿ ಪ್ರಕಟಣೆಯಲ್ಲಿ ನೀಡಿದ ಮೇಲೆ ಧರಣಿ ಹಿಂಪಡೆಯಲಾಯಿತು. ಅಂತಾ ಶ್ರೀ ಇಬ್ರಾಹಿಂ.ಗೂಡೇಕಾರ. ತಾಲೂಕ ಮಾನವ ಹಕ್ಕುಗಳ ಅಧ್ಯಕ್ಷರು. ಹಾಗೂ ಸಾಮಾಜಿಕ ಕಾರ್ಯಾಕರ್ತರಾದ. ಆನಂದ. ಎಚ್ ವಡ್ಡರ ಇವರು ತಿಳಿಸಿದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button