ಪದವಿ ಕಾಲೇಜಿನಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಮೇಳ, ಸದುಪಯೋಗ ಪಡೆದು ಕೊಳ್ಳಲು – ಡಾ, ಪಿ.ಎಂ ವಾಗಿಶಯ್ಯ ಮನವಿ.
ಕೊಟ್ಟೂರು ಜೂ.17

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದ ಹೊರ ವಲಯದಲ್ಲಿ ಬರುವ ಇಂದು ಪದವಿ ಕಾಲೇಜಿನಲ್ಲಿ ದಿನಾಂಕ 20.06.2025 ರಂದು ಹಮ್ಮಿ ಕೊಳ್ಳಲಾಗಿರುವ ನಿರುದ್ಯೋಗ ಯುವಕ ಯುವತಿಗಾಗಿ ಉದ್ಯೋಗ ಮೇಳವನ್ನು ಸಮರ್ಥನಂ ಅಂಗವಿಕಲರ ಸಂಸ್ಥೆ ಬಳ್ಳಾರಿ ಹಾಗೂ ಇಂದು ಕಾಲೇಜ್ ಕೊಟ್ಟೂರು ಇವರುಗಳ ಸಂಯುಕ್ತ ಅಕ್ಷರದಲ್ಲಿ ನಡೆಯುವಂತಹ ಉದ್ಯೋಗ ಮೇಳಕ್ಕೆ ಯುವಕ ಯುವತಿಯರು ವಯೋಮಿತಿ 18 ರಿಂದ 35 ವರ್ಷ ಇರಬೇಕು ಮತ್ತು ಶೈಕ್ಷಣಿಕ ವಿದ್ಯಾರ್ಥಿಯು ಎಸ್.ಎಸ್.ಎಲ್.ಸಿ ಪದವಿ ಪೂರ್ವ ಮತ್ತು ಪದವಿ ಪಡೆದಿರುವಂತಹ ಎಲ್ಲಾ ಉದ್ಯೋಗಾರ್ತಿ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಹಲವಾರು ಉದ್ಯೋಗಾಂಕಾಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಈ ಉದ್ಯೋಗ ಮೇಳದ ಉದ್ದೇಶವಾಗಿದೆ. ಈ ಮೇಳದಲ್ಲಿ 20 ಕ್ಕೂ ಹೆಚ್ಚು ಉದ್ಯೋಗದಾತರ ಭಾಗವಹಿಸುವಿಕೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಹಾಗೂ ಈ ಉದ್ಯೋಗ ಮೇಳದಲ್ಲಿ ವಿಶೇಷ ಚೇತನರಿಗೆ ಅವಕಾಶವನ್ನು ನೀಡಲಾಗಿದೆ. ಆದ ಕಾರಣ ಎಲ್ಲಾ ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಸ್ವ ವಿವರಗಳೊಂದಿಗೆ ಆಗಮಿಸಿ ಈ ಉದ್ಯೋಗ ಮೇಳದ ಲಾಭವನ್ನು ಪಡೆದು ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕೆಂದು ವಿನಂತಿಸಿ ಕೊಂಡಿರುತ್ತಾರೆ. ಹಾಗೆ ಈ ಉದ್ಯೋಗ ಮೇಳವನ್ನು ಯಶಸ್ವಿ ಗೊಳಿಸಲು ತಮ್ಮ ಅಮೂಲ್ಯವಾದ ಬೆಂಬಲವನ್ನು ಬಯಸುತಿದ್ದೇವೆ ನಿಮ್ಮ ಬೆಂಬಲವೂ ಅರ್ಹರನ್ನು ತಲುಪಲು ನಮಗೆ ಸಹಾಯ ಮಾಡುತ್ತದೆ ಮತ್ತು ವಿಕಲ ಚೇತನರ ಮತ್ತು ವಿಕಲೆ ಚೇತನರು ಉದ್ಯೋಗ ಪಡೆಯುವುದರ ಮುಖಾಂತರ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿ ಕೊಳ್ಳುವಲ್ಲಿ ಪತ್ರಿಕೋದ್ಯಮದ ಸಹಾಯ ಸಹಕಾರ ಕೊಡಿಗೆ ಯಾಗಲಿದೆ, ಎಂದು ಡಾ. ಪಿ.ಎಂ ವಾಗೀಶಯ್ಯ ಪ್ರಾಂಶುಪಾಲರು ಹಿಂದೂ ಪದವಿ ಕಾಲೇಜ್ ಕೊಟ್ಟೂರು ಇವರು ಪತ್ರಿಕೆ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ