ಬಡತನ ರೇಖೆಗಿಂತ ಕೇಳ ಮಟ್ಟದಲ್ಲಿ ಜೀವನ ಸಾಗಿಸುತ್ತಿದ್ದ ಬಡ ಕುಟುಂಬದ ಮೋಕ್ಷಿತ್ ನನ್ನು ಇಂಗ್ಲೀಷ್ ಮೆಡಿಯಮ್ ಗೆ – ಶಾಲಾ ದಾಖಲಿಸುವಲ್ಲಿ ಶ್ರಮಿಸಿದ ಕೆ.ನಂಜಪ್ಪ ಬಸವನಗುಡಿ.
ಜೈನಹಳ್ಳಿ ಜೂ.18

ಮೈಸೂರು ಜಿಲ್ಲೆಯ ಹುಣಸೂರು ಟೌನ್ ಪೌರ ಕಾರ್ಮಿಕರ ಕಾಲೋನಿಯಲ್ಲಿ ವಾಸವಾಗಿರುವ ದಿವ್ಯ ಮತ್ತು ಮಹೇಶ್ ರವರ ಪುತ್ರನಾದ ಮೋಕ್ಷಿತ್ ಎಂಬ ಬಾಲಕನನ್ನು ದಿನಾಂಕ 18/6/2025 ರ ಬುಧವಾರ ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕು ಜೈನಹಳ್ಳಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ 6 ನೇ. ತರಗತಿಗೆ ಸೇರಿಸಲಾಯಿತು ಈ ಸಂದರ್ಭದಲ್ಲಿ ಮುಖಂಡ ಹಾಗೂ ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣ ಜಾಗೃತಿ ಸಮಿತಿಯ ಶಾಶ್ವತ ಸದಸ್ಯರಾದ ಕೆ.ನಂಜಪ್ಪ ಬಸವನಗುಡಿ ರವರು ಮಾತನಾಡಿ ಮೋಕ್ಷಿತ ಎಂಬ ಬಾಲಕನ ತಂದೆ ತಾಯಿ ಕಡು ಬಡತನದಲ್ಲಿದ್ದು ಸಪಾಯಿ ಕರ್ಮಚಾರಿಗಳಾಗಿದ್ದು ಜೀವನ ನಡೆಸಲು ಕೂಲಿ ನಾಲಿ ಮಾಡಿ ಬದುಕುತ್ತಿದ್ದರು. ಇದ್ದ ಒಬ್ಬ ಮಗ ಮೋಕ್ಷಿತ್ ನನ್ನು ಇಂಗ್ಲಿಷ್ ಮೀಡಿಯಂನಲ್ಲಿ ಓದಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು ಆದರೆ ಕಡು ಬಡತನ ಇವರ ಕನಸಿಗೆ ಅಡ್ಡಿಯಾಗುತ್ತಿತ್ತು. ಇವರ ಈ ಪರಿಸ್ಥಿತಿಯನ್ನು ಹುಣಸೂರು ಉಪ ವಿಭಾಗ ಮಟ್ಟದ ಸಪಾಯಿ ಕರ್ಮಚಾರಿ ಜಾಗೃತಿ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಕೆ.ಲಕ್ಷ್ಮಣ್ ರವರ ಗಮನಕ್ಕೆ ಬಂದು ಈ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದರು ಆಗ ನಾನು ಮೋಕ್ಷಿತ್ ಎಂಬ ಬಾಲಕನ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅರಿತು ಕೊಂಡು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರಾದ ರಂಗೇಗೌಡರ ಗಮನಕ್ಕೆ ತಂದು ಅವರಿಂದ ದೂರವಾಣಿ ಮೂಲಕ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಜೈನಲ್ಲಿ ಗ್ರಾಮದಲ್ಲಿ ಇರುವ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ಪ್ರವೇಶ ಕಲ್ಪಿಸಿ ಕೊಡುವಂತೆ ಹೇಳಿಸಲಾಯಿತು. ಅದರಂತೆ ಇಂದು ಡಾಕ್ಟರ್, ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ಮೋಕ್ಷಿತ್ ಪೋಷಕರೊಂದಿಗೆ ಖುದ್ದಾಗಿ ಭೇಟಿ ನೀಡಿ ವಸತಿ ಶಾಲೆಯ ಪ್ರಿನ್ಸಿಪಾಲ್ರಾದ ರಾಜಣ್ಣ ರವರನ್ನು ಭೇಟಿ ಮಾಡಿ ಬಾಲಕನಿಗೆ ಪ್ರವೇಶ ಕಲ್ಪಿಸಿ ಕೊಡಲಾಯಿತು ದ.ಸಂ.ಸ ಮುಖಂಡ ಮತ್ತು ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾದ ನಿಂಗರಾಜ್ ಮಲಾಡಿ ಮಾತನಾಡಿ ಶಿಕ್ಷಣ ವಂಚಿತ ನಾಗಿದ್ದ ಸಪಾಯಿ ಕರ್ಮಚಾರಿ ಕುಟುಂಬಕ್ಕೆ ಸೇರಿದ ಬಾಲಕನಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಕೆ.ನಂಜಪ್ಪ ಬಸವನ ಗುಡಿ ರವರು ಬಹಳ ಶ್ರಮಪಟ್ಟು ಕಾಳಜಿ ವಹಿಸಿ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ದಾಖಲಾತಿ ಮಾಡಿರುವುದು ಅಭಿನಂದನಾ ರ್ಹವಾಗಿದೆ ಎಂದರು. ಈ ಸಂದರ್ಭದಲ್ಲಿ ದ.ಸಂ.ಸ ಮುಖಂಡ ಎಚ್.ಬಿ ದಿವಾಕರ್ ಹುಣಸೂರು ಉಪ ವಿಭಾಗ ಮಟ್ಟದ ಸಪಾಯಿ ಕರ್ಮಚಾರಿ ಜಾಗೃತಿ ಸಮಿತಿ ಸದಸ್ಯರಾದ ಕೆ.ಲಕ್ಷ್ಮಣ್ ಹಾಗೂ ವಿದ್ಯಾರ್ಥಿ ಮೋಕ್ಷಿತ್ ಇವರ ತಾಯಿ ದಿವ್ಯ ಹಾಜರಿದ್ದರು ಎಂದು ವರದಿಯಾಗಿದೆ.