ಪರಿಸರ ಸಂರಕ್ಷಿಸುವುದರೊಂದಿಗೆ ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನಾಗಿ ನಿರ್ಮಿಸಲು ಯುವಕರ ಪಾತ್ರ ದೊಡ್ಡದು – ಕೃಷ್ಣೇಗೌಡ ಪಾಟೀಲ.

ಗದಗ ಜೂ.18

ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಎನ್.ಎಸ್.ಎಸ್ ಕೋಶ ಹಾಗೂ ನಗರದ ಆದರ್ಶ ಶಿಕ್ಷಣ ಸಂಸ್ಥೆಗೆ ಪದವಿ ವಾಣಿಜ್ಯ ಮಹಾ ವಿದ್ಯಾಲಯದ ಎನ್.ಎಸ್.ಎಸ್ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ತರಬೇತಿ ಶಿಬಿರದ ನಾಲ್ಕನೇ ದಿನದ ವಿಶೇಷ ಅತಿಥಿಗಳಾಗಿ ಆಗಮಿಸಿದ ಯುವ ನಾಯಕರಾದ ಶ್ರೀ ಕೃಷ್ಣಗೌಡ.ಪಾಟೀಲ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ. ಜಲ ಮೂಲಗಳ ಸಂರಕ್ಷಣೆ ಎಂದರೆ ಲಭ್ಯವಿರುವ ನೀರಿನ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಕೊಳ್ಳಲು ಮತ್ತು ಪರಿಸರ ಸಮತೋಲನವನ್ನು ಕಾಪಾಡಲು ಅವುಗಳನ್ನು ಜಾಗರೂಕತೆ ಯಿಂದ ಮತ್ತು ಮಿತವಾಗಿ ಬಳಸುವುದು. ನೀರು ಜೀವನದ ಮೂಲವಾಗಿದೆ ಮತ್ತು ಎಲ್ಲಾ ಜೀವಿಗಳಿಗೂ ಅತ್ಯಗತ್ಯ. ಹೀಗಾಗಿ, ನೀರಿನ ಸಂರಕ್ಷಣೆ ಬಹಳ ಮುಖ್ಯವಾಗಿದೆ. ಜೀವನದ ಮೂಲ:-ನೀರು ಎಲ್ಲಾ ಜೀವಿಗಳಿಗೂ ಅತ್ಯಗತ್ಯ. ಕುಡಿಯಲು, ಅಡುಗೆ ಮಾಡಲು, ಸ್ವಚ್ಛತೆಗಾಗಿ ಮತ್ತು ಕೃಷಿಗಾಗಿ ನೀರು ಬೇಕು.ಪರಿಸರ ಸಮತೋಲನ:- ನೀರಿನಿಂದ ನದಿಗಳು, ಸರೋವರಗಳು ಮತ್ತು ಅಂತರ್ಜಲವು ಸಮೃದ್ಧ ವಾಗಿರುತ್ತವೆ. ಇದು ಪರಿಸರ ವ್ಯವಸ್ಥೆಯನ್ನು ಸಮತೋಲನ ದಲ್ಲಿಡುತ್ತದೆ. ಅದರೊಂದಿಗೆ ನೀರಿನ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತ ಗೊಳ್ಳುತ್ತವೆ. ನೀರಿನ ಸಂರಕ್ಷಣೆಯಿಂದ ಕೃಷಿ ಅಭಿವೃದ್ಧಿ ಸಾಧ್ಯ. ಪ್ರತಿ ದಿನ ನೀರು ಕುಡಿಯಲು ಮತ್ತು ಸ್ವಚ್ಛತೆಗೆ ಅಗತ್ಯ. ಶುದ್ಧ ನೀರಿನಿಂದ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು. ನೀರಿನ ಸಂರಕ್ಷಣೆ ಒಂದು ಸಾಮೂಹಿಕ ಪ್ರಯತ್ನ. ಪ್ರತಿಯೊಬ್ಬ ವ್ಯಕ್ತಿಯೂ ನೀರಿನ ಸಂರಕ್ಷಣೆಗೆ ಮುಂದಾಗಬೇಕು.

ಇದರಿಂದ ಮುಂದಿನ ಪೀಳಿಗೆಗೆ ಶುದ್ಧ ನೀರು ಸಿಗುತ್ತದೆ ಮತ್ತು ಪರಿಸರ ಸಮೃದ್ಧವಾಗಿರುತ್ತದೆ.ಅಭಿವೃದ್ಧಿಯ ಜೊತೆ ಜೊತೆಗೇ ಬೆಳೆದು ಬಂದು ಅವನತಿಗೂ ಕಾರಣವಾಗುತ್ತಿರುವ ವಸ್ತು ಪ್ಲಾಸ್ಟಿಕ್. ಇಂದು ನಾವು ನೋಡುವ ಬಹಳಷ್ಟು ವಸ್ತುಗಳು ಪ್ಲಾಸ್ಟಿಕ್‌ನಿಂದಲೇ ತಯಾರಾಗಿವೆ. ನಾವು ಉತ್ಪಾದಿಸುವ ಪ್ಲಾಸ್ಟಿಕ್‌ನಲ್ಲಿ ಹೆಚ್ಚಿನ ಮಟ್ಟದ ಪ್ಲಾಸ್ಟಿಕ್ ವಸ್ತುವನ್ನು ಒಂದು ಬಾರಿ ಬಳಸಿ ಎಸೆಯಲಾಗುತ್ತದೆ. ಅಧ್ಯಯನಗಳ ಪ್ರಕಾರ ಉತ್ಪಾದನೆಯಾದ ೯ ಬಿಲಿಯನ್ ಟನ್‌ನಷ್ಟು ಪ್ಲಾಸ್ಟಿಕ್‌ನಲ್ಲಿ ಕೇವಲ ೯% ಮಾತ್ರ ಮರು ಬಳಕೆಯಾಗುತ್ತಿದೆ. ಬಹಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಭೂಭರ್ತಿ ಅಥವಾ ತ್ಯಾಜ್ಯ ಸಂಗ್ರಹಣೆಯಾಗಿ ಪರಿಸರದಲ್ಲಿಯೇ ಉಳಿದು ಹೋಗುತ್ತವೆ ಎಂದು ಜೀವ ಜಲ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಹಸಿರು ಕ್ಯಾಂಪಸ್ ಹೀಗೆ ಅನೇಕ ವಿಚಾರಗಳನ್ನು ತಮ್ಮ ಉದ್ಘಾಟನಾ ನುಡಿಗಳಲ್ಲಿ ಹಂಚಿ ಕೊಂಡರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಉದ್ಯಮದಾರಾದ ಶ್ರೀ ಬಸವರಾಜ ತಿರ್ಲಾಪುರ ಆಗಮಿಸಿದ್ದರು ಅವರೊಂದಿಗೆ ಮೈಲಾರಪ್ಪ ಮೆಣಸಗಿ ಮಹಾವಿದ್ಯಾಲಯದ ಆಡಳಿತ ಅಧಿಕಾರಿಗಳಾದ ಶ್ರೀ. ನದ್ದಿಮುಲ್ಲಾ ಸರ್ ಎನ್.ಎಸ್.ಎಸ್ ನಡೆದು ಬಂದ ಹಾದಿ, ಲೋಗೋ ಬಗ್ಗೆ ಶಿಬಿರಗಳ ಬಗ್ಗೆ ಅನೇಕ ವಿಚಾರಗಳನ್ನು ತಮ್ಮ ಮಾತುಗಳಲ್ಲಿ ಹಂಚಿಕೊಂಡರು. ವೇದಿಕೆ ಮೇಲೆ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ. ಪಿ ಜೈನರ ಪ್ರೊ. ಪ್ರವೀಣ್ ಚಪ್ಪರಮನಿ, ಪ್ರೊ. ಶಿವಾನಂದ ಕೊರವರ, ಡಾ, ಎಸ್.ಆರ್ ನದಾಫ, ಡಾ, ಕಲ್ಲಯ್ಯ. ಹಿರೇಮಠ, ಪ್ರೊ ಮಂಜುಳಾ ಹೊಂಬಾಳಿ, ಡಾ, ದಳವಾಯಿ ಮೇಡಂ, ಶ್ರೀ‌. ವಿಜಯ ಹಿರೇಮಠ, ಶ್ರೀ ಸೋಮಶೇಖರ್ ಚಿಕ್ಕಮಠ, ಕಾರ್ತಿಕ್ ಬಾಗಲಕೋಟ, ಸ್ವಯಂ ಸೇವಕ ಸೇವಕರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button