ಮೈತ್ರಿ ಕಲಾ ತಂಡ ( ನೋಂ) ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ – ರಾಜ್ಯ ಮಟ್ಟದ ರಾಷ್ಟ್ರ ಕವಿ ಕುವೆಂಪು ರತ್ನ ಪ್ರಶಸ್ತಿ ವಿತರಣೆ.

ಬೆಂಗಳೂರು ಜೂ.18

ಮೈತ್ರಿ ಕಲಾ ತಂಡ (ನೋಂ) ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದಿನಾಂಕ 15-06-2025 ರಂದು ಭಾನುವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಜಾತ್ಯಾತೀತ ಯುವ ಶಕ್ತಿ ವೇದಿಕೆಯ ಮಹಿಳಾ ಸಬಲೀಕರಣ ರಾಜ್ಯಾಧ್ಯಕ್ಷರಾದ ಲಕ್ಷ್ಮೀ ಅವರ ಕಾರ್ಯ ಸಾಧನೆ ಮತ್ತು ಸಮಾಜ ಮುಖಿ ಕೆಲಸಗಳು ಮತ್ತು ಸೇವೆಯನ್ನು ಗುರುತಿಸಿ ಮೈತ್ರಿ ಕಲಾ (ನೋಂ) ವತಿಯಿಂದ “ರಾಜ್ಯ ಮಟ್ಟದ ರಾಷ್ಟ್ರ ಕವಿ ಕುವೆಂಪು ರತ್ನ ಪ್ರಶಸ್ತಿ” ಯನ್ನು ಗಣ್ಯ ವ್ಯಕ್ತಿಗಳಿಂದ ಪಡೆದ ಸಂದರ್ಭ ಮತ್ತು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳು ವಿಶೇಷ ಆಹ್ವಾನಿತರು ಪ್ರಶಸ್ತಿ ಪುರಸ್ಕೃತರು ಹಾಗೂ ವಿದ್ಯಾರ್ಥಿಗಳು ಮೈತ್ರಿ ಕಲಾ ತಂಡದ ಮುಖ್ಯಸ್ಥರು ಭಾಗಿಯಾಗಿದ್ದರು.

ಇದೇ ಸಂದರ್ಭದಲ್ಲಿ ನಮ್ಮ ಕರ್ನಾಟಕ ಜಾತ್ಯಾತೀತ ಯುವ ಶಕ್ತಿ ವೇದಿಕೆಯ ಸಂಸ್ಥಾಪಕ ರಾಜ್ಯ ಕಾರ್ಯಧ್ಯಕ್ಷರು ಶ್ರೀ ಶಿವಕುಮಾರ್ ರವರು ಹಾಗೂ ಚಾಲಕರ ಘಟಕದ ರಾಜ್ಯ ಉಪಾಧ್ಯಕ್ಷರು ಶ್ರೀ ಮಲ್ಲಿಕಾರ್ಜುನ ರವರು ಇನ್ನೂ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button