ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ – ಗ್ರಾಹಕರ ಸಭೆ ಜರುಗಿತು.

ಢವಳಗಿ ಜೂ.19

ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದಲ್ಲಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಢವಳಗಿ ಶಾಖೆಯಲ್ಲಿ ಬುಧವಾರ ದಂದು ಶಾಖೆಯ ಗ್ರಾಹಕರ ಸಭೆಯನ್ನು ಕರೆಯಲಾಗಿತ್ತು. ಶಾಖಾ ವ್ಯವಸ್ಥಾಪಕರಾದ ಎಲ್.ಎಎಚ್ ರಾಠೋಡ ಅವರು ಮಾತನಾಡಿ ಢವಳಗಿಯಲ್ಲಿ ವಿ.ಡಿ.ಸಿ.ಸಿ ಬ್ಯಾಂಕ್ 2020 ಜನೇವರಿಯಲ್ಲಿ ಪ್ರಾರಂಭ ಗೊಂಡು ಕೇವಲ 5 ವರ್ಷ ಅಷ್ಟೇ ಪೂರ್ಣ ಗೊಂಡಿದೆ. ಶಾಖೆಯ ಪ್ರಾರಂಭದಲ್ಲಿ ಒಟ್ಟು ಎರಡು ಕೋಟಿ ಇಪ್ಪತ್ತೆಂಟು ಲಕ್ಷದಿಂದ ಪ್ರಾರಂಭ ಗೊಂಡ ಶಾಖೆಯು 2025 ಜೂನ್ 17 ಕ್ಕೆ ಕೇವಲ ಐದು ವರ್ಷದ ಸಾಧನೆಯಲ್ಲಿ 22 ಕೋಟಿ 32 ಲಕ್ಷ ಠೇವಣಿಯನ್ನು ಗ್ರಾಹಕರಿಂದ ಸ್ವೀಕರಿಸಿ ಉತ್ತಮ ಪ್ರಗತಿ ಸಾಧಿಸಿದೆ. ಶಾಖೆಯ ಈಗಿನ ಠೇವಣಿ ಒಟ್ಟು 24 ಕೋಟಿ 60 ಲಕ್ಷಕ್ಕೆ ಬಂದಿದೆ. ಢವಳಗಿ ಶಾಖೆಗೆ ಸಂಬಂಧಿಸಿದ 4 ಪಿ.ಕೆ.ಪಿ.ಎಸ್ ಬ್ಯಾಂಕ್‌ಗಳಾದ ಢವಳಗಿ, ತಾರನಾಳ, ಮಡಿಕೇಶ್ವರ, ಮತ್ತು ಬಸರಕೋಡ ಬ್ಯಾಂಕುಗಳು ಒಳ ಗೊಂಡಿವೆ. ನಮ್ಮ ಢವಳಗಿ ಶಾಖೆಯು ಇಷ್ಟು ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡಲು ನಮ್ಮ ಸಂಬಂಧಿಸಿದ ನಾಲ್ಕು ಪಿ.ಕೆ.ಪಿ.ಎಸ್ ಬ್ಯಾಂಕ್‌ಗಳು ಮತ್ತು ಸುತ್ತ ಮುತ್ತಲಿನ ಗ್ರಾಮದ ರೈತರ ಹಾಗೂ ಗ್ರಾಹಕರಿಂದ ಸಾಧ್ಯವಾಗಿದೆ ಹಾಗೂ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಇಟ್ಟು ನಮ್ಮ ಶಾಖೆಯ ಪ್ರಗತಿಗೆ ಕಾರಣವಾಗ ಬೇಕು ಎಂದು ಹೇಳಿದರು. ನಂತರ ಶಾಖೆಯ ಕ್ಷೇತ್ರಾಧಿಕಾರಿಯಾದ ರವಿ.ಎಮ್ ಗುರಿಕಾರ ಅವರು ಮಾತನಾಡಿ ಶಾಖೆಯಲ್ಲಿ ಗ್ರಾಹಕರಿಗೆ, ರೈತರಿಗೆ ಸಿಗುವಂತಹ ಸಾಲದ ಬಗ್ಗೆ ಮಾಹಿತಿ ನೀಡಿದರು. ರೈತರಿಗಾಗಿ ಅಲ್ಪಾವಧಿ ಕೃಷಿ ಸಾಲ (ಕೆಸಿಸಿ ರೈತ ಮಿತ್ರ) ಮಧ್ಯಮಾವಧಿ ತೋಟಗಾರಿಕೆ ಸಾಲ, ದ್ರಾಕ್ಷಿ ಬೆಳೆದ ರೈತರಿಗೆ ಮನುಕ ಶೆಡ್ ಸಾಲ, ಟ್ರಾಕ್ಟರ್ ಸಾಲ, ಪೈಪಲಾಯಿನ್ ಸಾಲ, ಫಾರ್ಮಹೌಸ್ ಸಾಲ, ಸುಲಭ ಸಾಲ, ಸೇರಿದಂತೆ ಇನ್ನಿತರ ಸಾಲದ ಸೌಲಭ್ಯ ನಮ್ಮಲ್ಲಿ ಸಿಗುತ್ತದೆ. ಆದರೆ ಸಾಲ ಪಡೆದ ರೈತರು ಮತ್ತು ಗ್ರಾಹಕರು ಸಾಲದ ಮರು ಪಾವತಿಯ ಮಿತಿಯನ್ನು ಅರಿತು ಮರು ಪಾವತಿಯ ದಿನಾಂಕದ ಒಳಗಡೆ ತಮ್ಮ ಸಾಲವನ್ನು ತುಂಬಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೆ ನಮ್ಮ ಬ್ಯಾಂಕ್ ಸಂಪೂರ್ಣ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಗ್ರಾಹಕರಿಗೆ ತ್ವರಿತ ಮತ್ತು ಸಮರ್ಪಕ ಸೇವೆಯನ್ನು ಗ್ರಾಹಕರಿಗೆ ನೀಡಲು RTGS, Neft, IMPS, phone pay, Google pay, ಮತ್ತು Mobile Banking ವ್ಯವಸ್ಥೆಯನ್ನು ಹೊಂದಿದೆ. ಅಷ್ಟೇ ಅಲ್ಲದೆ M.Poss ಮಶಿನ್ ಮತ್ತು ಸ್ಕ್ಯಾನರ್ ಕೋಡ್ ಹಾಗೂ poss ಮಶಿನ್ ಕೂಡಾ ಪ್ರಸ್ತುತ ವರ್ಷದಿಂದ ಜಾರಿಗೆ ಬಂದಿದೆ. ಇದರ ಲಾಭವನ್ನು ಸಣ್ಣ ಉದ್ದಿಮೆದಾರರು ಕೂಡಾ ಪಡೆಯಬಹುದು. ಇದಲ್ಲದೆ ನಮ್ಮ ಶಾಖೆಯಲ್ಲಿ 2022-23 ರಿಂದ ಯಶಸ್ವಿನಿ ಆರೋಗ್ಯ ವಿಮೆ ಕೂಡಾ ಜಾರಿಯಾಗಿದೆ. ಬ್ಯಾಂಕಿನಲ್ಲಿ ಸಿಗುವಂತಹ ಸಾಲಗಳ ಕುರಿತು ಹಾಗೂ ರೈತರಿಗೆ ಬಡ್ಡಿ ರಹಿತ ಸಾಲದ ಯೋಜನೆಗಳು ಮಾಹಿತಿ ನೀಡಿದರು. ಇದಲ್ಲದೆ ಇನ್ಸೂರೆನ್ಸ್ ಸ್ಕೀಮ್ ಗಳಾದ PMSBY ಮತ್ತು PMJJBY ಯೋಜನೆಯು ಕೂಡಾ ಇವೆ. ಗ್ರಾಹಕರು ಇದರ ಉಪಯೋಗವನ್ನು ಪಡೆದು ಕೊಳ್ಳಬೇಕೆಂದು ತಿಳಿಸಿದರು. ಇದೇ ವೇಳೆಯಲ್ಲಿ ಬ್ಯಾಂಕ್ ಸಿಬ್ಬಂದಿಗಳಾದ ಪರಶುರಾಮ ಪೂಜಾರಿ, ಸತೀಶ ಪ್ಯಾಟಿಗೌಡರ್, ಮಹಾಂತೇಶ ಚಲವಾದಿ, ಹಾಗೂ ಸ್ಥಳೀಯ ಢವಳಗಿ ಪಿಕೆಪಿಎಸ್ ಮುಖ್ಯ ಕಾರ್ಯ ನಿರ್ವಾಹಕರಾದ ಅಣ್ಣಗೌಡ ಬಿರಾದಾರ, ಸಿಬ್ಬಂದಿಗಳಾದ ಮಡಿವಾಳಪ್ಪ ರಕ್ಕಸಗಿ, ಸುರೇಶ ವಾಲಿಕಾರ, ಬಸವರಾಜ ಸರೂರ, ಮತ್ತು ಗ್ರಾಹಕರಾದ ಮಡಿವಾಳಪ್ಪಗೌಡ ಬಿರಾದಾರ, ತಮ್ಮಣ್ಣ ಬ್ಯಾಲ್ಯಾಳ, ನಾನಾಗೌಡ ಕೊಣ್ಣೂರ, ಶಂಕರಗೌಡ ಬಿರಾದಾರ, ಮಡಿವಾಳಪ್ಪ ಬೀರಗೊಂಡ, ಮನೋಹರ ಕೊಣ್ಣೂರ, ಸಂಗಣ್ಣ ಕೋಣನವರ, ಕಾಶಿರಾಯ ಕಾಮನಕೇರಿ, ಪ್ರಭುಗೌಡ ಬಿರಾದಾರ (ಹುನಕುಂಟಿ), ಮುರಿಗೆಪ್ಪ ಗುಡಿಮನಿ, ಚೌಡಪ್ಪ ಸುತಗುಂಡರ, ನಿಂಗಪ್ಪ ಕುಂಟೋಜಿ ಸೇರಿದಂತೆ ಇನ್ನಿತರರು ಇದ್ದರು.

ವರದಿ:ಜಿ.ಎನ್.ಬೀರಗೋಂಡ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button