ಕಲ್ಯಾಣ ಕರ್ನಾಟಕವನ್ನು ಹಸಿರುಕರಣ ಮಾಡುವ ಗುರಿಯನ್ನು ಹೊಂದಿರುವ ವನಸಿರಿ ಅಮರೇಗೌಡ ಮಲ್ಲಾಪುರ ಕಾರ್ಯ ಶ್ಲಾಘನೀಯ – ಶಾಸಕ ಹಂಪನಗೌಡ ಬಾದರ್ಲಿ.

ಸಿಂಧನೂರು ಜೂ.19

ವಾರ್ಡ್ ನಂ 14 ರ ಗಂಗಾ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರಿ ಶಾಲೆ ಶೃಂಗಾರ ಕಾರ್ಯಕ್ರಮ ಹಾಗೂ ವನಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ಕಾರ್ಯಕ್ರಮವನ್ನು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ಸಸಿ ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿ ಉದ್ಘಾಟಿಸಿದರು.ನಂತರ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ ಅವರು ಇತ್ತೀಚಿಗೆ ಸಿಂಧನೂರು ಹಸಿರುಕರಣ ದಿಂದ ಕಂಗೊಳಿಸುತ್ತಿರುವ ನಗರವಾಗಿದೆ. ಇದಕ್ಕೆ ಕಾರಣ ನಗರದಲ್ಲಿನ ಹಲವಾರು ಪರಿಸರ ಪ್ರೇಮಿಗಳು ಮತ್ತು ಸಂಘ ಸಂಸ್ಥೆಗಳು. ಅದರಲ್ಲಿ ಹೆಚ್ಚು ಮುಂಚೂಣಿಯಲ್ಲಿರುವುದು ವನಸಿರಿ ಅಮರೇಗೌಡ ಮಲ್ಲಾಪುರ. ಪ್ರತಿ ದಿನ ಪರಿಸರ ಸೇವೆಯಲ್ಲಿ ತೊಡಗಿ ಕೊಂಡು ಗಿಡ ಮರಗಳ ರಕ್ಷಣೆಯಲ್ಲಿ ತೊಡಗಿದ್ದಾನೆ. ಕೇವಲ ಸಿಂಧನೂರು ಅಲ್ಲದೆ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಹಸಿರು ಕ್ರಾಂತಿ ಮಾಡುತ್ತಿದ್ದಾನೆ. ಇದೊಂದು ಅದ್ಭುತವಾದ ಕಾರ್ಯ. ಬಿಸಿಲ ನಾಡನ್ನು ಹಸಿರು ನಾಡಗಿ ಪರಿವರ್ತನೆ ಗೊಳಿಸುವ ಕಾರ್ಯದಲ್ಲಿ ತೊಡಗಿರುವುದನ್ನು ಗುರುತಿಸಿ ನಮ್ಮ ಕರ್ನಾಟಕದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ 2023 ರಲ್ಲಿ ಕರ್ನಾಟಕ ರಾಜ್ಯ ಪರಿಸರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹವರನ್ನು ನಾವುಗಳೆಲ್ಲರೂ ಇನ್ನಷ್ಟು ಹೆಚ್ಚಿನ ಕೆಲಸ ಮಾಡಲು ಪ್ರೋತ್ಸಾಹಿಸ ಬೇಕು. ಮತ್ತು ಅದೇ ರೀತಿ ಸರಕಾರಿ ಶಾಲೆಗಳನ್ನು ಉಳಿಸಿ ಬೆಳಸುವುದು ನಮ್ಮೆಲ್ಲರ ಜವಾಬ್ದಾರಿ.

ಡಾ, ಶರಣಬಸವ ದೇವರಡ್ಡಿ ಅವರು ಕೂಡಾ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಬಡ ಮಕ್ಕಳಿಗೆ ಅನುಕೂಲ ಆಗಲೆಂದು ಶಾಲೆಗೆ ಸುಣ್ಣ ಬಣ್ಣ ಹೊಡಿಸಿರುವುದು ತುಂಬಾ ಒಳ್ಳೆಯ ಕಾರ್ಯ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿರುವ ಎಲ್ಲರಿಗೂ ನಾವುಗಳು ಸಹಾಯ ಸಹಕಾರ ನೀಡಬೇಕು ಇಂತಹ ಕಾರ್ಯಕ್ಕೆ ನಮ್ಮ ಸರ್ಕಾರ ಯಾವತ್ತೂ ಸಹಕಾರ ನೀಡುತ್ತದೆ ಎಂದು ತಿಳಿಸಿದರು.ಇದೇ ಸಂಧರ್ಭದಲ್ಲಿ ಗವಿಸಿದ್ದೇಶ್ವರ ಆಸ್ಪತ್ರೆ ವೈದ್ಯರಾದ ಡಾ, ಶರಣಬಸವ ದೇವರಡ್ಡಿ ಅವರು ಶಾಲೆಯನ್ನು ಶೃಂಗಾರ ಗೊಳಿಸಲು ಸುಣ್ಣ ಬಣ್ಣ ನೀಡಿದರು. ನಂತರ ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ ಅವರ ಸಮ್ಮುಖದಲ್ಲಿ ವನಸಿರಿ ಅಮರೇಗೌಡ ಮಲ್ಲಾಪುರ ಮತ್ತು ಡಾ, ಶರಣಬಸವ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಆದೇಶ ಶಿಕ್ಷಕರು ನಿರೂಪಣೆ ಮಾಡಿದರು. ಇದೇ ವೇಳೆ ವನಸಿರಿ ಫೌಂಡೇಶನ್ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ ವಿತರಣೆ ಮಾಡಲಾಯಿತು.ಈ ಸಂಧರ್ಭದಲ್ಲಿ ಶಾಸಕ ಹಂಪನಗೌಡ ಬಾದರ್ಲಿ, ತಹಸೀಲ್ದಾರ್ ಶ್ರೀಮತಿ ಶೃತಿ, ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಡಾ, ಶರಣಬಸವ ಪಾಟೀಲ್, ಬಸಲಿಂಗಪ್ಪ BEO, ರುದ್ರಮುನಿ ಅರಣ್ಯ ಅಧಿಕಾರಿ, ರಾಮಲಿಂಗಯ್ಯ ಪ್ರಿನ್ಸಿಪಾಲರು, ಡಾ, ನವೀನ್ ದಂತ ವೈದ್ಯರು, ಅಶೋಕ ಉಮಲೂಟಿ, ಶರಣಪ್ಪ ಉಪ್ಪಲದೊಡ್ಡಿ ನಗರಸಭೆ ಸದಸ್ಯರು, ಅಮರೇಗೌಡ, ಖಾದರ್ ಪಾಷಾ SDMC ಅಧ್ಯಕ್ಷರು, ದೊಡ್ಡಪ್ಪಗೌಡ, ಶ್ರೀಮತಿ ಸುಜಾತ ಮುಖ್ಯ ಗುರುಗಳು, CRP ಪ್ರಮೋದ್, ಆದೇಶ ಶಿಕ್ಷಕರು, ಪೊಲೀಸ್ ಅಧಿಕಾರಿಗಳು, ವನಸಿರಿ ಪೌಂಡೇಷನ್ ಸದಸ್ಯರು ಹಾಗೂ ಶಾಲೆಯ ಶಿಕ್ಷಕ ವೃಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button