ದಲಿತರು ಸಂಘಟಿತರಾಗಿ ಸೌಲಭ್ಯ ಪಡೆಯಿರಿ – ತರೀಕೆರೆ ಎನ್.ವೆಂಕಟೇಶ್.

ನರಸಿಂಹರಾಜಪುರ ಜೂ .20

ಮಹಿಳೆಯರ ಮಾನ ಉಳಿಸುವಂತಹ ಕೆಲಸ ಮಹಾತ್ಮಾ ಪ್ರೊ, ಬಿ.ಕೃಷ್ಣಪ್ಪ ನವರ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ ಹೋರಾಟ ಮಾಡಿ ಚಂದ್ರಗುತ್ತಿ ಜಾತ್ರೆಯಲ್ಲಿ ಮಹಿಳೆಯರ ಬೆತ್ತಲೆ ಸೇವೆ ನಿಲ್ಲಿಸಲಾಯಿತು ಎಂದು ಕ.ದ.ಸಂ.ಸ ರಾಜ್ಯ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ರವರು ಹೇಳಿದರು. ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎನ್.ಆರ್ ಪುರ ತಾಲೂಕು ಸಮಿತಿ ಏರ್ಪಡಿಸಿದ್ದ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದಲಿತರು ಸಂಘಟಿತರಾಗ ಬೇಕು ಸದಸ್ಯತ್ವ ಹೊಂದಬೇಕು ಎಂದು ಕರೆ ನೀಡಿದರು. ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿಯಾದ ಎಂ.ವಿ ಭವಾನಿ ಮಾತನಾಡಿ ಮಹಿಳೆಯರು ತಮ್ಮ ಮಕ್ಕಳನ್ನು ವಿದ್ಯಾವಂತರಾಗಿಸಬೇಕು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅರಿವಿನೊಂದಿಗೆ ಜಾಗೃತ ರಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾದ ವೇದಾರ ಬೀದಿಯ ಸಾಗರ್ ಬಿನ್ ಕಲ್ಲೇಶ್ ರವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಎನ್.ಆರ್ ಪುರ ತಾಲೂಕು ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕರಾದ ಮೃತ್ಯುಂಜಯ ಮಾತನಾಡಿ ಬಾಬಾ ಸಾಹೇಬ್ ಡಾ, ಬಿ.ಆರ್ ಅಂಬೇಡ್ಕರ್ ರವರ ವಿಚಾರಗಳನ್ನು ತಿಳಿಯಿರಿ, ಸಂವಿಧಾನವನ್ನು ಓದಿರಿ ಎಂದು ಹೇಳಿದರು. ಅಬ್ದುಲ್ ರೆಹಮಾನ್ ರವರು ತಾಲೂಕಿನಲ್ಲಿ ಕ.ದ.ಸಂ.ಸ ಸದಸ್ಯತ್ವ ನೋಂದಣಿಯ ಜವಾಬ್ದಾರಿಯನ್ನು ತೆಗೆದು ಕೊಂಡರು. ರಾಜ್ಯ ಸಮಿತಿ ಸದಸ್ಯರಾದ ರಾಜೇಶ್ ರವರ ನೇತೃತ್ವದಲ್ಲಿ ಎನ್.ಆರ್ ಪುರ ತಾಲೂಕಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕು ಸಂಚಾಲಕರಾಗಿ ಸೀಜು.ಎಂ ಜೆ ರವರು ಹಾಗೂ ತಾಲೂಕು ಸಂಘಟನಾ ಸಂಚಾಲಕರಾಗಿ ಮುಳುವಳ್ಳಿ ಸಿದ್ದಪ್ಪ, ಇಳುವಳ್ಳಿ ರಾಜು, ರಾವೂರು ರವಿ, ಪ್ರಭು,ಕುಮಾರ್, ಎನ್ ಆರ್ ಪುರ ಕಧೀರ್, ಕೆ ಕಣಬೂರು ಉಮೇಶ, ವೇದರ ಬೀದಿ ಕಲ್ಲೇಶ್ ಖಜಾಂಚಿಯಾಗಿ ಮೃತ್ಯುಂಜಯ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ತಾಲೂಕು ಸಂಚಾಲಕಿಯಾಗಿ ರಾವೂರು ವಸಂತಿ ಹಾಗೂ ತಾಲೂಕು ಸಂಘಟನಾ ಸಂಚಾಲಕರಾಗಿ ಆರ್ ರೇಣುಕಾ,ಮಂಗಳ, ಎಲ್ ರೇಣುಕಾ, ಯಲ್ಲಮ್ಮ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹಾಗೂ ದಲಿತರ ಸಮಸ್ಯೆಗಳ ಬಗ್ಗೆ ಮತ್ತು ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್ ತರೀಕೆರೆ.ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button