“ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ” ಗೆ – ಕಲಾವಿದಾ ಸಿ.ಎಚ್ ಉಮೇಶ್ ನಾಯ್ಕ್ ಆಯ್ಕೆ.
ದಾವಣಗೆರೆ ಜೂ.20

ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ (ರಿ) ದಾವಣಗೆರೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರುಗಳಿಗೆ ಇದೇ ಜೂನ್ ತಿಂಗಳಿನಂದು ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರವನ್ನು ಹಮ್ಮಿಕೊಂಡಿರುತ್ತೇವೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ತಾವು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ನಮ್ಮ ಅಕಾಡೆಮಿ ವತಿಯಿಂದ ತಮಗೆ “ರಾಷ್ಟ್ರೀಯ ಸಮಾಜ ಸೇವಾ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಆದ್ದರಿಂದ ತಾವುಗಳು ಸ್ವ-ಕುಟುಂಬ ಸಮೇತ ಕಾರ್ಯಕ್ರಮಕ್ಕೆ ಆಗಮಿಸಿ, ನಾಡಿನ ಹೆಸರಾಂತ ಸ್ವಾಮೀಜಿಗಳು, ಸಾಹಿತಿಗಳು, ಹಾಗೂ ಚಿತ್ರ ನಟರು, ನಿರ್ದೆಶಕರು, ಪ್ರಮುಖ ಗಣ್ಯರ ಅಮೃತ ಹಸ್ತದಿಂದ ಪ್ರಶಸ್ತಿಯನ್ನು ಸ್ವೀಕರಿಸಲು ಪತ್ರಿಕಾ ಪ್ರಕಟಣೆಯ ಮೂಲಕ ಕೋರಲಾಗುವುದು.

ಎಂದ ಅವರು ಜಾನಪದ ಗಾಯನ ಕ್ಷೇತ್ರದಲ್ಲಿ ವೈಶಿಷ್ಟವಾಗಿ ಸಾಧನೆ ಗೈದ ಖ್ಯಾತ ಜನಪದ ಕಲಾವಿದರಾದ ಸಿ.ಎಚ್ ಉಮೇಶ್ ನಾಯ್ಕ ಚಿನ್ನ ಸಮುದ್ರ ಇವರಿಗೆ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ದಾವಣಗೆರೆ ಇವರಿಂದ ಸಿ.ಹೆಚ್ ಉಮೇಶ್ ನಾಯ್ಕ ಇವರಿಗೆ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ ವಿಚಾರ ಇದು ಬಂಜಾರ ಸಮುದಾಯಕ್ಕೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದು ವರದಿಯಾಗಿದೆ.