ಅಂಡಮಾನ್ ನಲ್ಲಿ ಕನ್ನಡ – ಸಂಭ್ರಮೋತ್ಸವ.

ಅಂಡಮಾನ್ ಜೂ.20

ಅಂಡಮಾನಿನ ಪೋರ್ಟ್ ಬ್ಲೇರ್ (ಶ್ರೀ ವಿಜಯಪುರಂ) ನಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆ ಹಾಗೂ ಮನ್ವಂತರ ಮೀಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ “ಕನ್ನಡ ಸಂಭ್ರಮೋತ್ಸವ” ಕಾರ್ಯಕ್ರಮ ಜರುಗಿತು. ಮನ್ವಂತರ ಮೀಡಿಯಾ ಅಕಾಡೆಮಿ ಅಧ್ಯಕ್ಷರಾದ ಕೆ.ಸಿ ವೇದಮೂರ್ತಿರವರು ಕನ್ನಡ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ “5,000 ವರ್ಷಗಳ ಹಿಂದೆ ನಮ್ಮ ಕನ್ನಡದಲ್ಲಿ ಜನಪದರ ಬಾಯಲ್ಲಿ ಬಂದಂತಹ ಕಾವ್ಯದಲ್ಲಿ ಬರುವಂತೆ…… “ಬೆಳಗಾಗಿ ನಾವೆದ್ದು ಯಾರ್ಯಾರ ನೆನೆಯಲಿ…..ಎಂಬ ಜಾನಪದ ನುಡಿಯಂತೆ “ಹೆತ್ತ ತಾಯಿಯ ಜೊತೆ ಭೂಮಿತಾಯಿಯನ್ನು ಯಾರ್ಯಾರು ಹೆಚ್ಚು ಮಹತ್ವ ಕೊಟ್ಟು ಗೌರವಿಸುತ್ತಾನೋ ಹಾಗೂ ಪ್ರೀತಿಸುತ್ತಾನೋ ಅವನು ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುತ್ತಾನೆ ಎಂದರು.

ವಿಶ್ವ ಕನ್ನಡ ಕಲಾ ಸಂಸ್ಥೆಯ ಸ್ಥಾಪಕರು ಹಾಗೂ ಅಧ್ಯಕ್ಷರು ಆದಂತಹ ರವೀಶ್ ಈ ಅಕ್ಕರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಎಲ್ಲರೂ “ಶತ್ರುತ್ವವನ್ನು ತ್ಯಜಿಸಿ ಮಿತೃತ್ವದಿಂದ ಬಾಳೋಣ” “ಸ್ನೇಹ ನಮ್ಮ ಬಹುದೊಡ್ಡ ಆಸ್ತಿ” ಎಂದರು. ಕಾರ್ಯಕ್ರಮದ ಅತಿಥಿಗಳಾಗಿದ್ದ ಸಂಪಾದಕರಾದ ವೆಂಕಟಮುನಿ ರವರು ಸಾಹಿತ್ಯದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕಿರುತೆರೆ ಕಲಾವಿದರಾದ ವಿದುಷಿ ಶೋಭಾ ಲೋಲನಾಥ್ ಮತ್ತು ಭರತನಾಟ್ಯ ಹಾಗೂ ಕಂಠದಾನ ಕಲಾವಿದರಾದ ದೇವುರೂಪಾಂತರ ಅವರು ಹಾಜರಿದ್ದರು. ಕಾರ್ಯಕ್ರಮವನ್ನು ಚಳ್ಳಕೆರೆಯ ವಿಜಯಾಗುರು ನಿರೂಪಿಸಿದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button