ಪ್ರತಿದಿನ ಯೋಗ ಮಾಡುವುದರಿಂದ – ದೂರಾಗುವುದು ನಮ್ಮ ರೋಗ.

ಢವಳಗಿ ಜೂ.21

ಯೋಗ ಮಾಡುವುದರಿಂದ ನಮಗೆ ಹಲವಾರು ಲಾಭಗಳಿವೆ. ಪ್ರತಿ ದಿನ ನಾವು ಕಾಲಿ ಹೋಟ್ಟೆಯಿಂದ ಯೋಗಾಸನ ಮಾಡುವುದರಿಂದ ನಾವು ಹಲವಾರು ರೋಗ ದಿಂದ ಮುಕ್ತಿ ಯೊಂದಬಹುದು ಎಂದು ಕಾರ್ಯಕ್ರಮ ಆಯೋಜಕರು ಮತ್ತು ಮುಖ್ಯ ಶಿಕ್ಷಕರಾದ ರಮೇಶ ಮೂಲಿಮನಿ ಅವರು ಹೇಳಿದರು.ಢವಳಗಿ ಗ್ರಾಮದ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಗ್ರಾಮದ ಎಸ್ ವ್ಹಿ ವ್ಹಿ ಎಸ್ ಕಾಲೇಜಿನಲ್ಲಿ ಜೂನ್ 21 ರಂದು ವಿಜಯವಾಣಿ ಮಾಧ್ಯಮ ಸಹಯೋಗ ದೊಂದಿಗೆ 11 ನೇ. ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದರು. ನಾವು ಯೋಗ ದಿನಾಚರಣೆಯನ್ನು ಕೇವಲ ಜೂನ್ 21 ರಂದು ಮಾತ್ರ ಯೋಗಾಸನ ಮಾಡದೆ ಪ್ರತಿದಿನ ಮುಂಜಾನೆ ಯೋಗ ಮಾಡಬೇಕು. ಪ್ರತಿ ದಿನ ಯೋಗ ಮಾಡುವುದರಿಂದ ನಮಗೆ ಬರುವ ಹಲವಾರು ಕಾಯಿಲೆಗಳಿಗೆ ಗುಡ್ ಬಾಯ್ ಹೇಳಬಹುದು. ಹಾಗೆ ನಮ್ಮ ಮನಸ್ಸು ಕೂಡಾ ಇಡೀ ದಿನ ಭಾರವಾಗದೆ ಶಾಂತವಾಗಿರುತ್ತದೆ.

ಹೀಗೆ ಇನ್ನೂ ಅನೇಕ ಲಾಭಗಳು ನಾವು ಯೋಗ ಮಾಡುವುದರಿಂದ ಸಿಗುತ್ತದೆ ಎಂದು ಮಾತನಾಡಿದರು. ಯೋಗಾಸನದ ಮುಖ್ಯವಾದ ಕೆಲವು ಆಸನಗಳನ್ನು ವಿದ್ಯಾರ್ಥಿಗಳಿಗೆ ಮಾಡಿಸಿ ಆಸನದಿಂದ ಆಗುವ ಲಾಭಗಳನ್ನು ವಿವರಿಸಿದರು. ಹಾಗೆ ಸ್ಥಳೀಯ ಎಸ್ ವ್ಹಿ ವ್ಹಿ ಎಸ್ ಕಾಲೇಜಿನಲ್ಲಿಯೂ ಕೂಡಾ ವಿಜಯವಾಣಿ ಮಾಧ್ಯಮ ಸಹಯೋಗ ದೊಂದಿಗೆ ಅಂತರಾಷ್ಟ್ರೀಯ ವಿಶ್ವ ಯೋಗಾಸನ ದಿನಾಚರಣೆಯನ್ನು ಆಚರಿಸಿದರು. ಪ್ರಾಚಾರ್ಯರಾದ ಎನ್ ಎ ಬಿರಾಜದಾರ ಅವರು ಕಾಲೇಜು ವಿದ್ಯಾರ್ಥಿಗಳಿಗೆ ಯೋಗಾಸನದ ಮಾಹಿತಿ ನೀಡಿದರು, ಹಾಗೂ ಉಪನ್ಯಾಸಕರಾದ ವಿ ಕೆ ಮಾಲಗತ್ತಿ ಅವರು ಯೋಗಸನದ ಆಸನಗಳನ್ನು ಮಾಡಿಸಿದರು. ಇದೇ ವೇಳೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಆನಂದ ಹಿರೇಮಠ, ದ್ವೀತಿಯ ದರ್ಜೆಲೆಕ್ಕ ಸಹಾಯಕರಾದ ಎಮ್ ಕೆ ಗುಡಿಮನಿ, ಗ್ರಂಥಪಾಲಕರಾದ ಬಸನಗೌಡ ಪಾಟೀಲ, ಕಂಪ್ಯೂಟರ್ ಆಪರೇಟರ್ ಮಾಂತೇಶ ಯಾಳವಾರ, ಎಸ್ ವ್ಹಿ ವ್ಹಿ ಎಸ್ ಕಾಲೇಜಿನ ಉಪನ್ಯಾಸಕರಾದ ಎಮ್ ಎಚ್ ಚವ್ಹಾಣ, ಎನ್ ಎನ್ ಬಿರಾದಾರ ಮತ್ತು ಮುದ್ದೇಬಿಹಾಳ ಎಮ್ ಜಿ ವ್ಹಿ ಸಿ ಕಾಲೇಜಿನ ಸ್ಕೌಟ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿ ರಂಜಾನಸಾಬ ಪಿಂಜಾರ ಸೇರಿದಂತೆ ಡಿ ದರ್ಜೆಯ ಸಿಬ್ಬಂದಿಗಳು ಮತ್ತು ಶಾಲೆ ಅಡುಗೆ ಸಿಬ್ಬಂದಿಗಳು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬಾಕ್ಸ್ ಸುದ್ದಿ:-

ಗ್ರಾಮದ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜಯವಾಣಿ ಮಾಧ್ಯಮ ಸಹಯೋಗ ದೊಂದಿಗೆ 11 ನೇ. ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಮುಖ್ಯ ಗುರುಗಳಾದ ರಮೇಶ ಮೂಲಿಮನಿ, ಸಹ ಶಿಕ್ಷಕರಾದ ಹರಿನಾಥ ಎನ್, ಜೆ.ಎಸ್ ಪಾಟೀಲ, ಬಿ ಎಸ್ ಪಾಟೀಲ, ಎಸ್ ಬಿ ಪಾಟೀಲ, ಎಸ್ ಎಸ್ ಅವಟಿ, ಪಿಡಿಓ ಆನಂದ ಹಿರೇಮಠ, ದ್ವೀತಿಯ ದರ್ಜೆ ಲೆಕ್ಕ ಸಹಾಯಕರಾದ ಎಮ್ ಕೆ ಗುಡಿಮನಿ, ಗ್ರಂಥಪಾಲಕಾರದ ಬಸನಗೌಡ ಪಾಟೀಲ,ಕಂಪ್ಯೂಟರ್ ಆಪರೇಟರ್ ಮಾಂತೇಶ ಯಾಳವಾರ ಸೇರಿದಂತೆ ಅಡುಗೆ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.

ಬಾಕ್ಸ್ ಸುದ್ದಿ:-

ಗ್ರಾಮದ ಎಸ್ ವ್ಹಿ ವ್ಹಿ ಎಸ್ ಕಾಲೇಜಿನಲ್ಲಿ ವಿಜಯವಾಣಿ ಮಾಧ್ಯಮ ಸಹಯೋಗ ದೊಂದಿಗೆ ಅಂತರಾಷ್ಟ್ರೀಯ ವಿಶ್ವ ಯೋಗಾ ದಿನಾಚರಣೆಯನ್ನು ಆಚರಿಸಿದರು. ಕಾಲೇಜಿನ ಪ್ರಾಚಾರ್ಯರಾದ ಎನ್ ಎ ಬಿರಾಜದಾರ, ಉಪನ್ಯಾಸಕರಾದ ವಿ ಕೆ ಮಾಕಗತ್ತಿ, ಎಮ್ ಎಚ್ ಚವ್ಹಾಣ, ಎನ್ ಎನ್ ಬಿರಾದಾರ ಮತ್ತು ಎಮ್ ಜಿ ವಿ ಸಿ ಕಾಲೇಜಿನ ಸ್ಕೌಟ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿ ರಂಜಾನ ಸಾಬ ಪಿಂಜಾರ ಸೇರಿದಂತೆ ಡಿ ದರ್ಜೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವರದಿ:ಮುತ್ತು.ಬೀರಗೊಂಡ.ಢವಳಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button