ಆಧುನಿಕ ಜೀವನದಲ್ಲಿ ಯೋಗಕ್ಕೆ ಆದ್ಯತೆ ನೀಡಿ – ಶಿಕ್ಷಕ ಸಂತೋಷ ಬಂಡೆ.

ಹಿರೇರೂಗಿ ಜೂ. 21

ಆಧುನಿಕ ಜೀವನ ಪದ್ಧತಿಯಲ್ಲಿ ಒತ್ತಡ ಹಾಗೂ ಆಹಾರ ಪದ್ಧತಿಯಿಂದಾಗಿ ದೇಹ ಸದೃಢವಾಗಿರಲು ಸಾಧ್ಯವಾಗುತ್ತಿಲ್ಲ. ಪೂರ್ಣ ಆಯಸ್ಸು ಪಡೆಯ ಬೇಕಾದರೆ ಯೋಗಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.ಶನಿವಾರ ದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಯೋಗ ದಿನವನ್ನು ಉದ್ಧೇಶಿಸಿ ಅವರು ಮಾತನಾಡಿದರು. ಭಾರತವು ವಿಶ್ವಕ್ಕೆ ಯೋಗದ ಮೂಲಕ ಶಾಂತಿಯನ್ನು ರಫ್ತು ಮಾಡಿದೆ. ಜೀವನದಲ್ಲಿ ಯೋಗವನ್ನು ಅಳಪಡಿಸಿ ಕೊಳ್ಳುವುದರಿಂದ ಆರೋಗ್ಯ ಕಾಪಾಡಿ ಕೊಳ್ಳಬಹುದು ಎಂದರು. ಶಿಕ್ಷಕ ಎಸ್.ಆರ್ ಚಾಳೇಕರ ಮಾತನಾಡಿ, ಸದೃಢ ಆರೋಗ್ಯ ಹೊಂದಲು ಯೋಗ ಸಹಕಾರಿಯಾಗಿದ್ದು, ರೋಗಗಳಿಂದಲೂ ದೂರ ವಿರಬಹುದು. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ’ ಎಂದು ಹೇಳಿದರು. ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಯೋಗವು ಮನುಷ್ಯನ ಮನಸ್ಸು ಏಕಾಗ್ರತೆ ಗೊಳಿಸುವ ಶಿಕ್ಷಣ ಕ್ರಮವಾಗಿದೆ.

ಯೋಗವು ಸೀಮಿತ ಧರ್ಮ, ಜಾತಿ, ಪಂಗಡ ರಾಷ್ಟ್ರೀಯತೆಗಳ ಭೇದ ಮೀರಿ ನಿಂತಿದೆ. ಇದು ಒಂದು ರಾಷ್ಟ್ರೀಯ ಭಾವೈಕ್ಯತೆ ಸಮನ್ವಯ ಜೀವನದ ಶಿಕ್ಷಣವಾಗಿದೆ ಎಂದರು. ಮುಖ್ಯ ಶಿಕ್ಷಕ ಎಸ್.ಎಸ್ ಅರಬ ಹಾಗೂ ಶಿಕ್ಷಕರಾದ ಎಸ್.ಎಂ ಪಂಚಮುಖಿ, ಸುರೇಶ ದೊಡ್ಯಾಳಕರ, ಜೆ ಎಂ ಪತಂಗಿ, ಸಾವಿತ್ರಿ ಸಂಗಮದ, ಎಸ್ ಎನ್ ಡಂಗಿ, ಎಸ್ ಬಿ ಕುಲಕರ್ಣಿ, ಎಸ್ ಡಿ ಬಿರಾದಾರ, ಎಫ್ ಎ ಹೊರ್ತಿ, ಶೃದ್ಧಾ ಬಂಕಲಗಾ, ಎಸ್ ವ್ಹಿ ಬೇನೂರ, ಸುಮಿತ್ರಾ ನಂದಗೊಂಡ, ಜೆ ಸಿ ಗುಣಕಿ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಬಿ ಎಸ್ ಹೊಸೂರ, ಪ್ರಜ್ವಲ ಕುಲಕರ್ಣಿ, ಅಲ್ಫಿಯಾ ಅಂಗಡಿ ಸೇರಿದಂತೆ ಅನೇಕರು, ಶಾಲಾ ಮಕ್ಕಳು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button