ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ – ವೀರೇಶ್ ದೊಡ್ಡಣ್ಣನವರ್.
ರೋಣ ಜೂ.21

ಈ ಸಮಯದಲ್ಲಿ ಯೋಗ ತಜ್ಞರಾದ ವೀರೇಶ್ ದೊಡ್ಡಣ್ಣನವರ್ ಯೋಗ ದಿನದ ಮಹತ್ವ ಕುರಿತು ಯೋಗವು ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಯೋಗ ಕ್ಷೇಮವನ್ನು ಹೆಚ್ಚಿಸುತ್ತದೆ.ರೋಣ ನಗರದ ಪ್ರಸಿದ್ಧ ಮಹಾವಿದ್ಯಾಲಯದ ಶ್ರೀ ಶರಣಬಸವೇಶ್ವರ ಪದವಿ ಪೂರ್ವ ಹಾಗೂ ಪ್ರೌಢ ಶಾಲೆ ಹಾಗೂ ಕೆ.ಎಸ್.ಎಸ್ ಪದವಿ ಮಹಾವಿದ್ಯಾಲಯ ಎಲ್ಲಾ ಸಂಸ್ಥೆಗಳ ಅಡಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತುಇಂದಿನ ವೇಗದ ಮತ್ತು ಒತ್ತಡದ ಜಗತ್ತಿನಲ್ಲಿ, ನೆಮ್ಮದಿ ಮತ್ತು ಆಂತರಿಕ ಶಾಂತಿಯ ಕ್ಷಣಗಳನ್ನು ಕಂಡ ಕೊಳ್ಳುವುದು ಒಂದು ಅಸ್ಪಷ್ಟ ಅನ್ವೇಷಣೆಯಂತೆ ಕಾಣಿಸಬಹುದು. ದೈನಂದಿನ ಜೀವನದ ಗದ್ದಲದ ನಡುವೆ, ದೇಹ ಮತ್ತು ಮನಸ್ಸು ಎರಡನ್ನೂ ಪೋಷಿಸುವ ಅಭ್ಯಾಸವನ್ನು ಸಂಯೋಜಿಸುವುದು ಅತ್ಯುನ್ನತವಾಗಿದೆ.

ಭಾರತದಲ್ಲಿ ಹುಟ್ಟಿದ ಪ್ರಾಚೀನ ಅಭ್ಯಾಸವಾದ ಯೋಗವು ಜಗತ್ತಿನಾದ್ಯಂತದ ಲಕ್ಷಾಂತರ ಜನರಿಗೆ ಭರವಸೆ ಮತ್ತು ಸಮಗ್ರ ಯೋಗ ಕ್ಷೇಮದ ದಾರಿ ದೀಪವಾಗಿ ಹೊರ ಹೊಮ್ಮಿದೆ. ದೈಹಿಕ ವ್ಯಾಯಾಮವನ್ನು ಮೀರಿ, ಯೋಗವು ನಮ್ಮ ಅಸ್ತಿತ್ವದ ಪ್ರತಿಯೊಂದು ಅಂಶವನ್ನು ಸ್ಪರ್ಶಿಸುವ ಜೀವನ ವಿಧಾನವಾಗಿದೆ. ಈ ಬ್ಲಾಗ್ನಲ್ಲಿ, ನಮ್ಮ ದೈನಂದಿನ ಜೀವನದಲ್ಲಿ ಯೋಗದ ಆಳವಾದ ಪ್ರಾಮುಖ್ಯತೆಯನ್ನು ಮತ್ತು ಅದು ನಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗ ಕ್ಷೇಮವನ್ನು ಹೇಗೆ ಸಕಾರಾತ್ಮಕವಾಗಿ ಪರಿವರ್ತಿಸುತ್ತದೆ ಎಂಬುದನ್ನು ನಾವು ಅನ್ವೇಷಿಸುತ್ತೇವೆ ಎಂದು ಈ ಸಮಯದಲ್ಲಿ ಯೋಗ ತಜ್ಞರಾದ ವೀರೇಶ್ ದೊಡ್ಡಣ್ಣನವರ್ ಯೋಗ ದಿನದ ಮಹತ್ವ ಕುರಿತು ಮಾತನಾಡಿದರು. ನಂತರ ಹಲವಾರು ಪ್ರಮುಖ ಯೋಗಾಸನಗಳನ್ನು ವಿದ್ಯಾರ್ಥಿಗಳಿಗೆ ಅವರ ಮಾರ್ಗದರ್ಶನದಲ್ಲಿ ಹೇಳಿ ಕೊಡಲಾಯಿತು. ಈ ಸಮಯದಲ್ಲಿ ವೇದಿಕೆ ಮೇಲೆ ಸ್ಥಾನಿಕ ಮುಖ್ಯಸ್ಥರಾದ ಐ, ಬಿ, ದಂಡಿನ ಶ್ರೀ ಶರಣಬಸವೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವಾಯ,ಎಸ್ ಕುರಿ, ಶರಣಬಸವೇಶ್ವರ ಪದವಿ ಪೂರ್ವ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಎ ಎಚ್ ನಾಯ್ಕರ,ಕೆ ಎಸ್ ಎಸ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಿ, ಬಿ, ಪೊಲೀಸ್ ಪಾಟೀಲ್ ಹಾಗೂ ಪದವಿ ಏನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ, ಎಸ್.ಆರ್ ನಧಾಫ್, ಹಾಗೂ ಪದವಿ ಪೂರ್ವ ಮಹಾ ವಿದ್ಯಾಲಯದ ಕಾರ್ಯಕ್ರಮ ಅಧಿಕಾರಿಗಳಾದ ಎಂ, ಎಚ್, ನಾಯ್ಕರಹಾಗೂ, ಉಪನ್ಯಾಸಕ ಬಳಗ, ಶಿಕ್ಷಕ ಬಳಗ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ