ಯಲಗೋಡ ಗ್ರಾ.ಪಂ ಹಣೆಬರಹ – ಮುಕ್ತ ಮನಸ್ಸಿನಿಂದ ನೋಡಿರೀ.
ಯಲಗೋಡ ಜೂ.21

ಹಳ್ಳಿಗಳು ಅಭಿವೃದ್ಧಿ ಆಗಲಿ ಎಂದು ಸರ್ಕಾರ ಮೂರು ನಾಲ್ಕು ಹಳ್ಳಿಗಳು ಕೂಡಿ ಒಂದು ಗ್ರಾಮ ಪಂಚಾಯತಿ ನಿರ್ಮಾಣ ಮಾಡಿದೆ ಆದರೆ ಅಭಿವೃದ್ಧಿ ಮಾಡದೆ ಬೋಗಸ್ ಬಿಲ್ ಮಾಡಿ ಹಣವನ್ನು ನುಂಗ್ಗುವ, ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು, ಸದಸ್ಯರು ಕೂಡಿ ರಾಜ್ಯಗಳಲ್ಲಿನ ಗ್ರಾಮ ಪಂಚಾಯತಿಗಳು ಹದಗೆಟ್ಟು ಹೋಗಿವೆ. ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮ ಪಂಚಾಯತಿಯಲ್ಲಿ ಹಳ್ಳಿಗಳಲ್ಲಿ ಸಾರ್ವಜನಿಕರು ಕೊಡುವ ಸ್ಥಳಗಳಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ, ದೇವರ ಸ್ಥಾನಗಳ ಮುಂದೆ ಸಾರ್ವಜನಿಕರು ವಿಶ್ರಾಂತಿ ಮಾಡಲು ಸರ್ಕಾರ ಸಿಮೆಂಟ್ ನ ಕುರ್ಚಿಗಳನ್ನು ನಿರ್ಮಾಣ ಮಾಡುವುದಕ್ಕೆ ೧೫ ಹಣಕಾಸಿನ ಅನುದಾನದಲ್ಲಿ ಬಳಸಬೇಕು ಎಂದು ಸರ್ಕಾರ ಹೇಳಿದೆ. ಆದರೆ ಈ ಊರಿನ ಗ್ರಾಮ ಪಂಚಾಯತಿಯಲ್ಲಿ ಸಿಮೆಂಟ್ ಕುರ್ಚಿಗಳು ತಂದಿದ್ದಾರೆ. ಸರಿಯಾದ ಕುರ್ಚಿಗಳು ತಂದಿಲ್ಲಾ ಅವುಗಳಿಗೆ ಸುಣ್ಣ ಬಣ್ಣ ಮಾಡಿ ಗ್ರಾಮ ಪಂಚಾಯತಿ ಹೆಸರು ಬರೆದು ಸಾರ್ವಜನಿಕರು ಇರುವ ಸ್ಥಳಗಳಲ್ಲಿ ನಿಲ್ಲಿಸಬೇಕು ಆದರೆ ಇಲ್ಲ ಬಸ್ ನಿಲ್ದಾಣದಲ್ಲಿ ಎರಡೂ ಬಿದ್ದಿವೆ. ಕರಿಸಿದ್ದೇಶ್ವರ ದೇವಸ್ಥಾನ ಹತ್ತಿರ ಎರಡೂ ಬಿದ್ದಿವೆ.

ದಾವಲಮಲ್ಲಿಕ ದೇವಸ್ಥಾನ ಹತ್ತಿರ ಎರಡೂ ಬಿದ್ದಿವೆ. ಅಂಬೇಡ್ಕರ್ ಸರ್ಕಲ್ ಹತ್ತಿರ ಎರಡು ಬಿದ್ದಿವೆ ಹಾಗೂ ಗ್ರಾಮ ಪಂಚಾಯತಿ ವಾಪ್ತಿಯಲ್ಲಿ ಬರುವ ಹಳ್ಳಿಗಳಾದ ವಂದಾಲ, ಕದರಾಪೂರ ಈ ಗ್ರಾಮದಲ್ಲಿ ಹೇಗೆ ಬಿದ್ದಿವೆ. ಲಕ್ಷಗಟ್ಟಲೆ ಖರ್ಚು ಮಾಡಿ ಹಾಗೆ ಬಿದ್ದಿವೆ. ಇದರ ಬಗ್ಗೆ ಅಧಿಕಾರಿಗಳು ಹಾಗೂ ಅಧ್ಯಕ್ಷರು ಇದರ ಬಗ್ಗೆ ಗಮನವಿಲ್ಲ ಒಂದು ಅಭಿವೃದ್ಧಿ ಕಾರ್ಯ ಯಾವುದೇ ಇಲ್ಲಾ ಇವರು ಏನು ಮಾಡುತ್ತಾರೆ. ಎಂದು ಸಾರ್ವಜನಿಕರು ಪ್ರಶ್ನೆ ಆಗಿದೆ. ಹಾಗೂ ಯಲಗೋಡ ಗ್ರಾಮದ ಅಂಬೇಡ್ಕರ್ ಸರ್ಕಲ್ ಹತ್ತಿರ ಒಂದು ಶುದ್ಧ ನೀರು ಕುಡಿಯುವ ಘಟಕ ನಿರ್ಮಾಣವಾಗಿ ಏಳು ವರ್ಷವಾಗಿ ಆದರೆ ಅದಕ್ಕೆ ಉದ್ಘಾಟನೆ ಭಾಗ್ಯ ಯಾವಾಗ ಎಂದು ಸಾರ್ವಜನಿಕರು ಪ್ರಶ್ನೆ. ಗ್ರಾಮೀಣ ಜನರು ಶುದ್ಧ ನೀರು ಕುಡಿಯುವುದಕ್ಕೆ ಸರ್ಕಾರ ನಿರ್ಮಾಣ ಮಾಡಿದೆ ಅದನ್ನು ಸರಿಯಾದ ನೋಡಿ ಕೊಳ್ಳುವ ಕರ್ತವ್ಯ ಗ್ರಾಮ ಪಂಚಾಯತಿ ಇದೇ ಏಳು ಆದರೂ ಇನ್ನೂ ಚಲಾವಣೆಗೆ ಇಲ್ಲಾ. ಆ ಘಟಕದಲ್ಲಿ ಸಾಮಾನ್ಯಗಳು ಒಂದು ಇಲ್ಲ, ಹಂದಿಗಳು ಹಾಗೂ ನಾಯಿಗಳು ವಿಶ್ರಾಂತಿಯ ತಾಣವಾಗಿದೆ. ಪ್ರತಿದಿನ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಬರುವುದಿಲ್ಲಾ ಹಾಗಾಗಿ ಸಾರ್ವಜನಿಕರು ತುಂಬಾ ತೊಂದರೆ ಆಗಿದೆ ಎಂದು ಸಾರ್ವಜನಿಕರು ಹೇಳಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ.ದೇವರ ಹಿಪ್ಪರಗಿ