ಮದುವೆಯಾಗಿದ್ದು ತಮ್ಮ, ಮಾನ್ವಿಯಲ್ಲಿ ಅಣ್ಣನ ಕಿಡ್ನಾಪ್ – ಪೋಪಕರ ನರಳಾಟ.
ಮಾನ್ವಿ ಜೂ.22

ಪೋಲಿಸ್ ಇಲಾಖೆಗೆ ಇಷ್ಟೋಂದು ಗೋಗೈರೆದರು ಕಂಪ್ಲೇಂಟ್ ತೋಗಳಲ್ಲಾ ಅಂದ್ರೆ ಯಾಕೇ ಬೇಕರೀ ನಮಗೆ ಈ ಸರ್ಕಾರ ಈ ಪೋಲಿಸ್ ಇಲಾಖೆ…..
ಪ್ರೀತಿಸಿ ಮದುವೆಯಾಗಲು ವಯಸ್ಕರಾಗಿದ್ದರೆ ಸಾಕು, ಕಾನೂನು ಪ್ರೇಮಿಗಳ ಬೆನ್ನೆಲುಬಾಗಿ ನಿಲ್ಲುತ್ತದೆ. ಆದರೆ ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದ ಗಂಗರಾಜು ಎಂಬ ಯುವಕನೊಬ್ಬ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೀಗೂಡಿಯ ಕಾವ್ಯ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ದುರುಳರು ಅಣ್ಣನನ್ನೆ ಕಿಡ್ನಾಪ್ ಮಾಡಿದ ಘಟನೆ ಮಾನ್ವಿ ತಾಲೂಕಲ್ಲಿ ಜರುಗಿದೆ.

ಹೌದು ಮಹಾ ಜನರೇ ಕಾಲೇಜು ಓದುತ್ತಿದ್ದ ನಾಗರಾಜ ಎಂಬ ಯುವಕನನ್ನು ಕಾವ್ಯ ಪೋಷಕರು ನೀರಮಾನ್ವಿ ಬಳಿ ಕಾರಲ್ಲಿ ಗ್ಯಾಂಗ್ ಕಟ್ಟಿಕೊಂಡು ಬಂದು ಯಾವುದೇ ಮಾಹಿತಿ ನೀಡದೆ ಎತ್ತಾಕೊಂಡು ಹೋಗಿರುವುದು, ಪೋಷಕರ ಆಕ್ರಂದನವೇ ಮುಗಿಲು ಮುಟ್ಟಿದೆ.ನಾವು ಪ್ರೀತಿಸಿ ಮದುವೆಯಾಗಿದ್ದೇವೆ, ನಾವು ಕಾನೂನು ಬದ್ಧವಾಗಿ ವಯಸ್ಕರಾಗಿದ್ದೇವೆ, ನಮ್ಮನ್ನು ಬೇರೆ ಮಾಡುವ ಉದ್ದೇಶದಿಂದ ನನ್ನ ಗಂಡನ ಅಣ್ಣ ನಾಗರಾಜನನ್ನು ಕಿಡ್ನಾಪ್ ಮಾಡಿದ್ದಾರೆ. ನಮಗೆ ನ್ಯಾಯಬೇಕು ಎಂದು ಕಾವ್ಯ ಸೇರಿದಂತೆ ಪೋಷಕರು ಮಾನ್ವಿ ಠಾಣೆಗೆ ದೂರು ಸಲ್ಲಿಸಲು ಬಂದರೆ ದೂರು ಸ್ವೀಕರಿಸದೆ ಇರುವುದು ಬೆಳಕಿಗೆ ಬಂದಿದೆ.
ನಾವು ಪ್ರೀತಿಸಿ ಮದುವೆಯಾಗಿದ್ದೇವೆ, ಆದರೆ ನಮ್ಮೂರಿಗೆ ನಾವು ಹೋದರೆ ಜೀವ ಸಹಿತ ಉಳಿಸಲ್ಲಾ ನಮ್ಮನ್ನು ಬೇರೆ ಮಾಡುತ್ತಾರೆಂದು ಮಾನ್ವಿ ಪೊಲೀಸ್ ಇಲಾಖೆಗೆ ಅಲೆದರೂ ನ್ಯಾಯ ಸಿಗುತ್ತಿಲ್ಲವೆಂದರೆ ಅಂಬೇಡ್ಕರ್ ಬರೆದ ಸಂವಿಧಾನ ಉಳ್ಳವರ ಪಾಲಾಗುತ್ತಿದೆನಾ ಅಥವಾ ಶೋಷಿತರ ವಿರುದ್ಧವಾಗಿದೆನಾ ಎಂದು ಕಾವ್ಯ,ನಾಗಮ್ಮ ಮಾನ್ವಿ ಠಾಣೆಗೆ ಅಲೆದಿರುವುದೇ ಸಾಕ್ಷಿಯಾಗಿದೆ.ನನ್ನ ಮಗ ನಾಗರಾಜ್ ಓದುತ್ತಿದ್ದಾನೆ, ಆದರೆ ನನ್ನ ಮಗನನ್ನು ಕಾವ್ಯ ಪೋಷಕರು ಹಾಗೂ ಬೀಗೂಡಿ ಪೊಲೀಸರು ಎತ್ತಾಕೊಂಡು ಹೋಗಿದ್ದಾರೆ. ಹೀಗಾಗಿ ನನ್ನ ಮಗನಿಗೆ ಏನಾದರು ಆದರೆ ಮಾನ್ವಿ ಪೊಲೀಸರು ಕಾರಣರಾಗುತ್ತಾರೆಂದು ನಾಗರಾಜನ ತಾಯಿ ನಾಗಮ್ಮಳ ಗಂಭೀರ ಆರೋಪವಾಗಿದೆ.
ಈ ಭೂಮಿಯ ಬದುಕುವ ಹಕ್ಕು ಇದೆ. ಅನ್ನುವುದಾದರೆ ಕಾನೂನು, ಸಂವಿಧಾನ, ಇದ್ದು ಜೀವಂತ ಸಮಾಧಿ ಆಗುವುದಾದರೆ ಪ್ರಜ್ಞಾವಂತ, ನಾಗರಿಕರ ಸಮಾಜಕ್ಕೆ ಧಿಕ್ಕಾರವಿರಲಿ…..
ಒಟ್ಟಾರೆಯಾಗಿ ನೋಡಿದರೆ ನಾನು ಮದುವೆಯಾಗಿದ್ದಕ್ಕೆ ನನ್ನ ಅಣ್ಣ ನಾಗರಾಜನನ್ನು ಕಿಡ್ನಾಪ್ ಮಾಡಲಾಗಿದೆ. ನಾವು ಅಂಬೇಡ್ಕರ್ ಬರೆದ ಸಂವಿಧಾನದಂತೆ ಮದುವೆ ಯಾಗಿದ್ದೇವೆ. ಆದರೆ ಸಂವಿಧಾನ ಜಾರಿಯಾಗಿ 75 ವರ್ಷ ಗತಿಸಿದರೂ ಅಮಾಯಕರನ್ನು ಕಿಡ್ನಾಪ್ ಮಾಡುತ್ತಾರೆ ಅಂದರೆ, ಮಾನ್ವಿ ಪೊಲೀಸ್ ಇಲಾಖೆ ನಮಗೆ ನ್ಯಾಯ ನೀಡುತ್ತಿಲ್ಲವೆಂದರೆ ನಮಗೆ ಇನ್ನೂ ಮುಂದೆ ದಿಕ್ಕು ಯಾರು ಎಂದು ಗಂಗರಾಜನ ನೋವಿನ ಮಾತುಗಳಿಗಿವೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ