ರೈತರಲ್ಲಿ ಬೆಳೆ ವಿಮೆಯ – ಅರಿವು ಮೂಡಿಸಿ.

ಇಂಗಳಗಿ ಜೂ.23

ಕೃಷಿ ಅಧಿಕಾರಿಗಳು ಪ್ರತಿ ಹಳ್ಳಿಗೂ ತೆರಳಿ ಎಲ್ಲಾ ರೈತರ ಬೆಳೆ ವಿಮೆಯ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಿ ಅತಿ ಹೆಚ್ಚು ರೈತರನ್ನು ನೋಂದಣಿ ಮಾಡಿಸ ಬೇಕು ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಪವಾರ ಹೇಳಿದರು.ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ವಿಮಾ ಯೋಜನೆಯಡಿ ತಾಲೂಕಿನ ರೈತರಿಗೆ ಬೆಳೆ ವಿಮೆಯ ಬಗ್ಗೆ ಅರಿವು ಮೂಡಿಸಲು ಚಾಲನೆ ನೀಡಿ ಮಾತನಾಡಿದರು. ಈ ಬಾರಿ ಮುಂಗಾರು ಕೆಲವು ಕಡೆ ಚೆನ್ನಾಗಿ ಆಗಿದ್ದರೆ ಕೆಲವು ಕಡೆ ಕಡಿಮೆ ಮಳೆಯಾಗುತ್ತಿದೆ. ಇದರ ಆಧಾರದ ಮೇಲೆ ಇಲಾಖೆಯವರು ಸರ್ವೇ ಮಾಡಿ ಯಾವ ಬೆಳೆಗೆ ವಿಮೆ ಮಾಡಬೇಕು ಎಂಬುದರ ಕುರಿತು ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.ಬೆಳೆ ಸಾಲ ಪಡೆಯುವ ರೈತರಿಗೆ ನಾವು ಕಡ್ಡಾಯವಾಗಿ ಬೆಳೆ ವಿಮೆ ಮಾಡಿರುತ್ತೇವೆ. ಬೆಳೆ ಸಾಲ ಪಡೆಯದ ರೈತರಿಗೆ ಅಧಿಕಾರಿಗಳು ಜಾಗೃತಿ ಮೂಡಿಸಿ ವಿಮೆ ಕಂತು ಪಾವತಿಸುವಂತೆ ಮಾಡಬೇಕು. ರೈತರಿಗೆ ಬಿತ್ತನೆ ಬೀಜ ವಿತರಣೆ ಹಾಗೂ ಯಾವ ಬೆಳೆಗೆ ಯಾವ ಗೊಬ್ಬರ ಹಾಕಬೇಕು ಎಂಬುದನ್ನು ಕೃಷಿ ವಿಜ್ಞಾನ ಕೇಂದ್ರಗಳಿಂದ ಕೃಷಿ ಇಲಾಖೆಯಿಂದ ತಿಳಿವಳಿಕೆ ನೀಡಲಾಗುವುದು ಎಂದರು. ಹೆಸರು, ಉದ್ದು, ತೊಗರಿ, ಹತ್ತಿ, ಸೂಯಾ, ಮುಸುಕಿನ ಜೋಳ, ಜೋಳ, ಎಳ್ಳು ನೊಂದಣಿ ಮಾಡಲು ಜುಲೈ ೩೧ ಕೊನೆಯ ದಿನ, ಸೂರ್ಯಕಾಂತಿಗೆ ೧೬ ಅಗಸ್ಟ ಕೊನೆಯ ದಿನ ವಾಗಿರುತ್ತದೆ ಎಂದರು.ರೈತರ ವಂತಿಕೆ ಪ್ರತಿ ಎಕರೆಗೆ ಹೆಸರು ೨೬೯ ರೂ, ಉದ್ದು ೨೬೫ ರೂ, ತೊಗರಿ ೩೮೮, ಹತ್ತಿ ೮೬೫ ಮುಸುಕಿನ ಜೋಳ ೪೫೭, ಸೂರ್ಯಕಾಂತಿ ೩೨೯ ರೂ ಪಾವತಿಸ ಬೇಕಾಗುತ್ತದೆ ಎಂದರು. ಓರಿಯಂಟಲ್ ತಾಲೂಕು ಬೆಳೆ ವಿಮೆ ಇಂಡಿ ಪ್ರತಿ ನಿಧಿ ಚನಬಸಪ್ಪ ಝಳಕಿ, ಚಡಚಣ ಪ್ರತಿ ನಿಧಿ ಚಂದ್ರು ಮೇತ್ರಿ ಬೆಳೆ ವಿಮೆ ಕುರಿತು ಮಾತನಾಡಿದರು. ಇಂಗಳಗಿ ಗ್ರಾಮದ ಶರಣಪ್ಪ ಶಂಕರೆಪ್ಪ ತೆಗ್ಗೆಳ್ಳಿ, ಸಾತಪ್ಪ ಮಲ್ಲಪ್ಪ ನಿವಾಳಶೆಟ್ಟಿ,ನಿಂಗಪ್ಪ ಶಿವಪ್ಪ ಶಿರನಾಳ, ಜಗದೇವ ಚನಬಸಪ್ಪ ಬಳಬಟ್ಟಿ, ಶರಣು ಕುಂಬಾರ ಮತ್ತಿತರಿದ್ದರು.

ಬಾಕ್ಸ್ ಸುದ್ದಿ:-

ಇಂಡಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಬೆಳೆ ವಿಮೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ಮಾತನಾಡಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button