ಹಂಡೆ ಹನುಮಪ್ಪ ನಾಯಕರ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸುವಂತೆ – ಡಾ, ಎಸ್.ಎಸ್ ಪಾಟೀಲ್ ಸರ್ಕಾರಕ್ಕೆ ಆಗ್ರಹ.
ಮುದ್ದೇಬಿಹಾಳ ಜೂ.23

ಹಂಡೆ ಹನುಮಪ್ಪ ನಾಯಕರ ಇತಿಹಾಸ ಈಗಾಗಲೇ ಆಂಧ್ರಪ್ರದೇಶದ ಸರ್ಕಾರ ತನ್ನ ಶಾಲೆಗಳಲ್ಲಿನ ಪಠ್ಯ ಪುಸ್ತಕದಲ್ಲಿ ಅಳವಡಿಸಿದೆ. ಕರ್ನಾಟಕ ಸರ್ಕಾರವು ಹಂಡೆ ಅರಸರ ಜೀವನ ಸಾಧನೆಯನ್ನು ತಿಳಿಸಲು ಪಠ್ಯದಲ್ಲಿ ಅವರ ಇತಿಹಾಸದ ಪಾಠ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸಮಾಜದಿಂದ ಹೋರಾಟ ನಡೆಸಲಾಗುವುದು. ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆ ವಜೀರ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ, ಎಸ್. ಎಸ್ ಪಾಟೀಲ್ ಹೇಳಿದರು. ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿ.ಎಲ್ ಬಿರಾದಾರ್. ಮಂಗಲ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಹಂಡೆ ವಜೀರ್ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದಿಂದ ಏರ್ಪಡಿಸಿದ್ದ ಕೂಡಲ ಸಂಗಮದಲ್ಲಿ ಜರುಗಿದ ರಾಜ್ಯಮಟ್ಟದ ಸಮಾವೇಶದ ಯಶಸ್ವಿಗೆ ಶ್ರಮಿಸಿದವರಿಗೆ ಅಭಿನಂದಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ ವೀರಶೈವ ಲಿಂಗಾಯತ ಹಂಡೆ ವಜೀರ್ ಹೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರಗೌಡ ರಾಯಗೊಂಡ ಮಾತನಾಡಿ. ಕೂಡಲ ಸಂಗಮದಲ್ಲಿ ಫೆಬ್ರುವರಿ 2 ರಂದು ನಡೆದ ಸಮಾಜದ ರಾಜ್ಯಮಟ್ಟದ ಸಮಾವೇಶ ಯಶಸ್ವಿಗೆ ತಾಲೂಕಿನಿಂದ ಸಮಾಜದ ಬಾಂಧವರು 12 ಲಕ್ಷ ರೂಪಾಯಿಗಳ ವರೆಗೆ ಉದಾರವಾದ ದೇಣಿಗೆ ನೀಡಿ ಸಹಕಾರ ಮಾಡಿದ್ದಾರೆ ಎಂದು ತಿಳಿಸಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ ಬೆಳಗಲ್. ಮಾತನಾಡಿ. ಸಮಾಜದಲ್ಲಿರುವ ಬಡ ಮಕ್ಕಳ ಶಿಕ್ಷಣದ ವೆಚ್ಚಕ್ಕಾಗಿ ಸಮಾಜದ ಬಾಂಧವರು ಉಳಿತಾಯ ಮಾಡಿ ಅದನ್ನು ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕು ಎಂದರು. ಸಮಾಜದ ರಾಜ್ಯ ಉಪಾಧ್ಯಕ್ಷ ರಾಜಶೇಖರ್ ಮ್ಯಾಗೇರಿ ಸಮಾಜದ ತಾಲೂಕು ಅಧ್ಯಕ್ಷ ವಕೀಲರಾದ ಎಂ.ಬಿ ಬಿರಾದಾರ್. ವಕೀಲರಾದ ಆರ್. ಎಸ್ ಪಾಟೀಲ್ ಸಮಾಜದ ಜಿಲ್ಲಾಧ್ಯಕ್ಷ ಸಂಗನಗೌಡ ಕರಬಂಟನಾಳ. ಎಸ್. ಎಸ್ ಭೂತಲ್. ಮಾತನಾಡಿದರು. ಯುವ ಘಟಕದ ರಾಜ್ಯಾಧ್ಯಕ್ಷ ಸಂಗನಗೌಡ ಯಂಕಂಚಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭು ಬೆಳ್ಳಿ. ಗೌರವಾಧ್ಯಕ್ಷ ಕೆ.ಎನ್ ಗೌಡರ್. ಯುವ ಘಟಕದ ಜಿಲ್ಲಾಧ್ಯಕ್ಷ ನಾಗರಾಜ್ ತಂಗಡಿಗಿ. ಮುಖಂಡರಾದ ಬಿ. ಎಲ್ ಬಿರಾದಾರ್. ಮಾಜಿ ತಾಲೂಕಾ ಪಂಚಾಯತಿ ಉಪಾಧ್ಯಕ್ಷ ಮಂಜುನಾಥ್ ಗೌಡ ಪಾಟೀಲ್. ಎಸ್.ಬಿ ಹಂಡ್ರಗಲ್. ಹೇಮಾ ಭಿರಾದಾರ್. ಸಂಗಮೇಶ್ ಶಿವನಗಿ ಇದ್ದರು. ಕಾರ್ಯಕ್ರಮದಲ್ಲಿ ಆಲ ಕೊಪರದ ವಿದ್ಯಾರ್ಥಿನಿ ಗೀತಾ ಬಿರಾದಾರ್ ಎಸ್.ಎಸ್.ಎಲ್.ಸಿ ಯಲ್ಲಿ ಶೇ. 96 ರಷ್ಟುಅಂಕ ಪಡೆದು ಕೊಂಡ ಹಿನ್ನೆಲೆಯಲ್ಲಿ ಆಕೆಗೆ ಸಮಾಜದ ಬಾಂಧವರು ಶೈಕ್ಷಣಿಕ ವೆಚ್ಚಕ್ಕೆಂದು ₹16 ಸಾವಿರ ಆರ್ಥಿಕ ನೆರವು ನೀಡಿದರು. ಇದೇ ವೇಳೆಯಲ್ಲಿ ಸಮಾಜದ ಗುರು ಹಿರಿಯರು ಎಲ್ಲರೂ ಉಪಸಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ.ಮುದ್ದೇಬಿಹಾಳ