ಬಿ.ವಿ.ಆರ್ ಶಾಲೆಯ ವಿದ್ಯಾರ್ಥಿ ಕುರುಮೇಶ ನಾಯಕ – ಕಾಣೆ ಪೋಷಕರ ಆರೋಪ.
ಮಾನ್ವಿ ಜೂ.23

ಖಾಸಗಿ ಶಾಲೆಗಳು ಫೀ ಕಟ್ಟಿಲ್ಲವೆಂಬ ನೆಪದಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ಕಳಿಸ ಬಾರದು ಹೊರಗಡೆ ನಿಲ್ಲಿಸ ಬಾರದು ಎಂದು ಸರಕಾರದ ಸುತ್ತೋಲೆ ಇದೆ. ಆದರೆ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಮಾನ್ವಿ ಪಟ್ಟಣದ ಬಿ.ವಿ.ಆರ್ ಶಾಲೆಯ ಸಂಸ್ಥಾಪಕ ಬಿ.ವಿ ರಡ್ಡಿ ಸಾಹೇಬ್ರು ಫೀ ಕಟ್ಟಿಲ್ಲವೆಂದು 9 ನೇ. ತರಗತಿ ವಿದ್ಯಾರ್ಥಿ ಕುರುಮೇಶನನ್ನು ಶಾಲೆಗೆ ಕರೆದು ಕೊಳ್ಳದೆ ವಾಪಸ್ ಕಳಿಸಿದ್ದರಿಂದ ಬಾಲಕ ಕುರುಮೇಶ ಮನೆಗೆ ಬಂದಿಲ್ಲವೆಂದು ಪೋಷಕರು ಆರೋಪ ಮಾಡಿರುವುದು ಬೆಳಕಿಗೆ ಬಂದಿದೆ.
ಶಾಲೆಗೆ ಬಂದ ಕುರುಮೇಶನನ್ನು ತರಗತಿಗೆ ಕೂರಿಸಿ ಪೋಷಕರಿಗೆ ಮಾಹಿತಿ ನೀಡಿ ಫೀ ಕಟ್ಟಿದ ನಂತರ ಕಳಿಸಿ ಎಂದು ಹೇಳಬಹುದು. ಆದರೆ ಏಕಾಏಕಿಯಾಗಿ ಬಿ.ವಿ.ಆರ್ ಶಾಲೆಯ ಸಂಸ್ಥಾಪಕ ರಡ್ಡಿ ಅವರು ವಿದ್ಯಾರ್ಥಿ ಕುರುಮೇಶನನ್ನು ವಾಪಸ್ ಕಳಿಸಿದ್ದರಿಂದ ಬಾಲಕ ಮನೆಗೆ ಬಂದಿಲ್ಲ ಏನಾದರು ಅನಾಹುತವಾದರೆ ಬಿ.ವಿ ಆರ್ ಶಾಲೆಯವರೆ ಕಾರಣ ಎಂದು ಪೋಷಕ ನರಸಿಂಹನಾಯಕ ಮಾನ್ವಿ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಮಾನ್ವಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಸಾಹೇಬ್ರೆ ಫೀ ಕಟ್ಟಿಲ್ಲವೆಂದು ಕುರುಮೇಶ ಎಂಬ 9 ನೇ. ತರಗತಿ ವಿದ್ಯಾರ್ಥಿಯನ್ನು ವಾಪಸ್ ಕಳಿಸಿದ್ದರಿಂದ ವಾಪಸ್ ಕಳಿಸುತ್ತಾರೆಂದರೆ ಮಾನ್ವಿಯಲ್ಲಿ ಸರಕಾರದ ಕಾನೂನು ಇದೇನಾ ಅಥವಾ ಇಲ್ಲವಾ ಬಿ.ವಿ.ಆರ್ ಶಾಲೆಯ ದುರಾಡಳಿತ ಇಷ್ಟೊಂದು ಇದೆ ಅಂದರೆ ಏನಿದರ ಅರ್ಥ, ನನ್ನ ಮಗನಿಗೆ ಅನಾಹುತವಾದರೆ ಇದಕ್ಕೆ ಬಿ.ವಿ.ಆರ್ ಶಾಲೆಯ ಬಿ.ವಿ ರಡ್ಡಿ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ