ಪೋಲಿಸ್ ಇಲಾಖೆಯಿಂದ ಕಾನೂನು ಅರಿವು – ಕಾರ್ಯಕ್ರಮ ಜರುಗಿತು.
ಢವಳಗಿ ಜೂ.24

ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಮಡಿಕೇಶ್ವರ ಬಸನಗೌಡ ಪಾಟೀಲ ಪ್ರೌಢ ಶಾಲೆಯಲ್ಲಿ ಮುದ್ದೇಬಿಹಾಳ ಪೋಲಿಸ್ ಠಾಣೆಯ ವತಿಯಿಂದ ಮಾದಕ ವಸ್ತುಗಳ ನಿಷೇಧ, ಮತ್ತು ಕಾನೂನು ಅರಿವು, ಮಹಿಳೆ ಮತ್ತು ಮಕ್ಕಳ ದೌರ್ಜನ್ಯ ಜಾಗೃತಿ, ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಮಾಡಿದರು. ಮುದ್ದೇಬಿಹಾಳ ಪಿ.ಎಸ್.ಐ ಸಂಜಯ್ ತಿಪ್ಪಾರೆಡ್ಡಿ ಅವರು ಮಕ್ಕಳಿಗೆ ಮಾದಕ ವಸ್ತುಗಳ ಬಗ್ಗೆ, ಮಕ್ಕಳ ದೌರ್ಜನ್ಯ ಬಗ್ಗೆ, ಹಾಗೂ ಮಹಿಳಾ ರಕ್ಷಣೆಯ ಜಾಗೃತಿ ಬಗ್ಗೆ ಮಾತನಾಡಿದರು.

ಪೋಲಿಸ್ ಸಿಬ್ಬಂದಿಗಳಾದ ಎ.ಎಸ್.ಐ ಕೆ.ಎಸ್ ಅಸ್ಕಿ, ಮುಖ್ಯ ಪೇದೆ ಎಮ್.ಬಿ ಮುಳವಾಡ, ಹಾಗೂ ಶಾಲೆಯ ಮುಖ್ಯ ಗುರುಗಳಾದ ಬಿ.ಎಸ್ ಪಾಟೀಲ, ಎಸ್.ಆರ್ ಶುಲ್ಪಿ, ಪ್ರಭಾಕರ್, ಎ.ಎಮ್ ಕೋರಿ, ಟಿ.ಎ ಇಂಡಿಕಾರ್, ಎ.ಎಸ್ ಪೈಠಾಣಿ, ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.
ವರದಿ:ಮುತ್ತು.ಬೀರಗೊಂಡ.ಢವಳಗಿ